ದಿನಭವಿಷ್ಯ 22-04-2022: ಶುಕ್ರವಾರದಂದು ಈ ರಾಶಿಯವರು ವಂಚನೆಯ ಬಗ್ಗೆ ಎಚ್ಚರದಿಂದಿರಿ
Horoscope April 22, 2022: ಈ ಶುಕ್ರವಾರದಂದು ವೃಶ್ಚಿಕ ರಾಶಿಯ ಜನರು ವಂಚಕರ ಬಗ್ಗೆ ಜಾಗರೂಕರಾಗಿದೆ. ಮಕರ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಮೀನ ರಾಶಿಯ ಜನರು ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುವ ಸಂಭವವಿದೆ.
Daily Horoscope (ದಿನಭವಿಷ್ಯ 22-04-2022) : ಶುಕ್ರವಾರದ ಈ ದಿನ ಸಾಫ್ಟ್ವೇರ್ ಕ್ಷೇತ್ರದಲ್ಲಿರುವ ತುಲಾ ರಾಶಿಯ ಜನರಿಗೆ ಹೊಸ ಪ್ರಾಜೆಕ್ಟ್ ದೊರೆಯುವ ಸಾಧ್ಯತೆಯಿದೆ. ಮಕರ ರಾಶಿಯವರು ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಉಳಿದ ರಾಶಿಚಕ್ರಗಳ ಇಂದಿನ ಫಲಾಫಲ ತಿಳಿಯಿರಿ.
ಮೇಷ ರಾಶಿ- ಈ ರಾಶಿಯ ಜನರಿಗೆ ಇಂದು ಸಾಮಾನ್ಯಕ್ಕಿಂತ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ. ಹಾಗಾಗಿ ನಿಮ್ಮ ಖರ್ಚು-ವೆಚ್ಚಗಳ ಬಗ್ಗೆ ಗಮನಹರಿಸಿ. ಉದ್ಯೋಗಸ್ಥರು ಯಾವುದೇ ಕೆಲಸಕ್ಕಾಗಿ ಮುಂದಾಳತ್ವ ವಹಿಸಬೇಕಾಗಬಹುದು. ಇದಕ್ಕೆ ಸಿದ್ಧರಾಗಿರಿ. ಹೋಟೆಲ್ ಸಂಬಂಧಿತ ವ್ಯಾಪಾರಿಗಳಿಗೆ ದಿನ ಶುಭವಾಗಿದೆ.
ವೃಷಭ ರಾಶಿ- ಇಂದು ಈ ರಾಶಿಯವರು ಯಾವುದೋ ಕಾಣದ ಭಯದಿಂದ ವಿಚಲಿತಗೊಳ್ಳುವ ಸಾಧ್ಯತೆ ಇದೆ. ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ಕೊಡಬೇಡಿ. ಉದರ ಸಂಬಂಧಿತ ಕಾಯಿಲೆಗಳು ನಿಮ್ಮನ್ನು ಕಾಡಬಹುದು.
ಮಿಥುನ ರಾಶಿ- ಶುಕ್ರವಾರದಂದು ನಿಮ್ಮ ನಡೆ-ನುಡಿ ಸೌಮ್ಯವಾಗಿದ್ದರೆ ಒಳಿತು. ಇದು ನೀವು ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಲಾಭ ಗಳಿಸಲು ಸಹಕಾರಿಯಾಗಲಿವೆ. ಆದರೆ, ನಿಮ್ಮ ಸಂಗಾತಿಯ ಆರೋಗ್ಯ ಹದಗೆಡಬಹುದು ಈ ಬಗ್ಗೆ ನಿಗಾವಹಿಸಿ.
ಕರ್ಕ ರಾಶಿ- ಈ ರಾಶಿಯವರು ಇಂದು ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನಿಮಗೆ ತಿಳಿದಿರುವ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ನಿಮ್ಮ ಜ್ಞಾನ ವೃದ್ಧಿಯಾಗಲಿದೆ.
ಇದನ್ನೂ ಓದಿ- ವಾಸ್ತು ಟಿಪ್ಸ್: ಮನೆಯಲ್ಲಿ ಪ್ರತಿದಿನ ಈ ಐದು ಕೆಲಸ ಮಾಡುವುದರಿಂದ ಆರ್ಥಿಕ ಪ್ರಗತಿ
ಸಿಂಹ ರಾಶಿ- ಇಂದು ನೀವು ಮಾನಸಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ಸಂಯಮದಿಂದ ಚಿಂತಿಸಿ ಯಾವುದೇ ಸಮಸ್ಯೆಗೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಯಾವುದೇ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿರುವವರು ಧೈರ್ಯವಾಗಿ ಮುನ್ನುಗ್ಗಿ ಖಂಡಿತ ಯಶಸ್ಸು ನಿಮ್ಮ ಕೈ ಹಿಡಿಯಲಿದೆ.
ಕನ್ಯಾ ರಾಶಿ- ಶುಕ್ರವಾರದಂದು ನಿಮ್ಮ ಮನಸ್ಸು ತುಂಬಾ ಚುರುಕಾಗಿರುತ್ತದೆ. ಆದರೆ, ಯಾರೊಂದಿಗೂ ಅನಾವಶ್ಯಕ ವಾದ-ವಿವಾದಗಳಿಗೆ ಎಡೆಮಾಡಿಕೊಡಬೇಡಿ. ನಿಮ್ಮ ಮಾತನ್ನು ನಯವಾಗಿ ಹೇಳುವ ಮೂಲಕವೂ ವಿಷಯವನ್ನು ಅರ್ಥ ಮಾಡಿಸಬಹುದು.
ತುಲಾ ರಾಶಿ- ಶುಕ್ರವಾರದ ಈ ದಿನ ಸಾಫ್ಟ್ವೇರ್ ಕ್ಷೇತ್ರದಲ್ಲಿರುವ ತುಲಾ ರಾಶಿಯ ಜನರಿಗೆ ಹೊಸ ಪ್ರಾಜೆಕ್ಟ್ ಪಡೆಯುವ ಅವಕಾಶವಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯಲಿದೆ. ಯಾವುದೇ ಕೆಲಸವನ್ನು ಮಾಡುವ ಮುನ್ನ ದೇವರಿಗೆ ನಮಸ್ಕರಿಸಿ. ಇದರಿಂದ ಶುಭ ಫಲಿತಾಂಶಗಳು ದೊರೆಯಲಿವೆ.
ವೃಶ್ಚಿಕ ರಾಶಿ- ಯಾವುದೇ ಕನ್ನಡಿಯೊಳಗಿನ ಗಂಟನ್ನು ಕಂಡು ಮೋಸ ಹೋಗದಿರಿ. ಇಂದು ಯಾರಾದರು ನಿಮಗೆ ಹೆಚ್ಚಿನ ಲಾಭದ ಆಸೆ ತೋರಿಸುವ ಮೂಲಕ ವಂಚನೆ ಮಾಡಬಹುದು. ಇಂತಹವರ ಬಗ್ಗೆ ಜಾಗರೂಕರಾಗಿರಿ.
ಇದನ್ನೂ ಓದಿ- Surya Gochar: ಮುಂದಿನ 24 ದಿನಗಳವರೆಗೆ ಈ ನಾಲ್ಕು ರಾಶಿಯವರ ಮೇಲೆ ಸೂರ್ಯದೇವನ ಕೃಪೆ
ಧನು ರಾಶಿ - ಈ ರಾಶಿಯವರಿಗೆ ನಿಮ್ಮ ಕಠಿಣ ಪರಿಶ್ರಮವೇ ನಿಮ್ಮ ವಿಶಿಷ್ಟ ಗುರುತು ಎಂಬುದನ್ನು ನೆನಪಿನಲ್ಲಿಡಿ. ಉದ್ಯೋಗದಲ್ಲಿ ಒತ್ತಡ ಇರಬಹುದು. ಆದರೆ, ತಾಳ್ಮೆಯಿಂದ ವರ್ತಿಸಿ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಚೆನ್ನಾಗಿ ಯೋಚಿಸಿ.
ಮಕರ ರಾಶಿ- ಇಂದು ನೀವು ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಅಷ್ಟಾಗಿ ಒಳ್ಳೆಯದಲ್ಲ. ಏನೇ ಕೆಲಸ ಮಾಡಬೇಕಾದರೂ ಚೆನ್ನಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಿ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಾಚಾರ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಕುಂಭ ರಾಶಿ- ಚಿಂತೆಯೇ ಚಿತೆಗೆ ಕಾರಣ ಎಂಬ ಮಾತಿದೆ. ಹಾಗಾಗಿ ಅನಾವಶ್ಯಕ ಚಿಂತೆಗೆ ತಲೆ ಬಲಿಯಾಗಬೇಡಿ. ಉತ್ತಮ ಆರೋಗ್ಯಕ್ಕಾಗಿ ಚಿಂತೆಯಿಂದ ದೂರವಿರಿ. ಸಾಮಾಜಿಕ ಕ್ಷೇತ್ರಗಳಲ್ಲಿ ನಿಮ್ಮ ಗೌರವ ಹೆಚ್ಚಲಿದೆ.
ಮೀನ ರಾಶಿ- ಸೋಮಾರಿಗಳಿಗೆ ಲಕ್ಷ್ಮೀದೇವಿ ಎಂದೂ ಕೈ ಹಿಡಿಯುವುದಿಲ್ಲ. ಹಾಗಾಗಿ ನಿಮ್ಮ ಸೋಮಾರಿತನವನ್ನು ಬಿಟ್ಟು ಸಕ್ರಿಯರಾಗಿ ಕೆಲಸ ಮಾಡಿ. ಚಿಲ್ಲರೆ ವ್ಯಾಪಾರ ಮಾಡುವ ವ್ಯಾಪಾರಿಗಳು ಉತ್ತಮ ಆದಾಯ ಗಳಿಸುವ ಸಾಧ್ಯತೆಯಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.