ನವದೆಹಲಿ : ಆಂಜನೇಯ ಸ್ವಾಮಿ ತನ್ನ ಭಕ್ತರನ್ನು ತೊಂದರೆಗಳಿಂದ ಸದಾ ದೂರವಿರಿಸುತ್ತಾನೆ. ಭಜರಂಗಬಲಿಯ ಕೃಪೆಯಿದ್ದರೆ ಕೈತಪ್ಪಿರುವ ಕೆಲಸ ಕೂಡಾ ಕೈಗೂಡುತ್ತದೆಯಂತೆ. ಆದ್ದರಿಂದಲೇ  ಮಂಗಳವಾರ (Tuesday), ಆಂಜನೇಯನನ್ನು ಶೃದ್ಧಾಭಕ್ತಿಯಿಂದ ಪೂಜಿಸಬೇಕು ಎಂದು ಹೇಳುತ್ತಾರೆ. ಜ್ಯೋತಿಷ್ಯದ ಪ್ರಕಾರ (Astrology), ಈ ರಾಶಿ ಚಕ್ರಗಳ (Zodiac Signs) ಜನರ ಮೇಲೆ ಆಂಜನೇಯನ ವಿಶೇಷ ಕೃಪೆಯಿರುತ್ತದೆಯಂತೆ. 


COMMERCIAL BREAK
SCROLL TO CONTINUE READING

ಹಾಗಿದ್ದರೆ ಯಾವ ರಾಶಿಚಕ್ರ ಚಿಹ್ನೆಗಳ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆ ನೋಡೋಣ..
ಮೇಷ : ಜ್ಯೋತಿಷ್ಯದ (Astrology) ಪ್ರಕಾರ, ಮೇಷ ರಾಶಿಯ ಜನರಿಗೆ ಹನುಮಂತನ (hanuman)ಕೃಪೆ ಅಧಿಕವೇ ಇರುತ್ತದೆಯಂತೆ. ಅಂದರೆ ಈ ರಾಶಿಯವರಿಗೆ ಎದುರಾಗುವ ಸಮಸ್ಯೆಗಳನ್ನು ಆಂಜನೇಯ ಪರಿಹಾರಗೊಳಿಸುತ್ತಾನಂತೆ. ಈ ರಾಶಿಚಕ್ರದ ಜನರ ಇಚ್ಛಾಶಕ್ತಿ, ಬುದ್ಧಿವಂತಿಕೆ, ಸಂಪತ್ತು ಮತ್ತು ಸಮೃದ್ಧಿಯನ್ನು ಯಾವತ್ತೂ ಕಾಪಾಡುತ್ತಾನೆ ಎನ್ನುವುದು ನಂಬಿಕೆ. 


ಇದನ್ನೂ ಓದಿ : Palmistry : ಹಸ್ತದಲ್ಲಿ ಈ ರೇಖೆಗಳು ಮತ್ತು ಮಚ್ಚೆಗಳಿದ್ದರೆ ಸದಾ ಹಣದ ಕೊರತೆಯಂತೆ


ಕುಂಭ ರಾಶಿ : ಈ ರಾಶಿಯವರ ಮೇಲೂ  ಹನುಮಂತನ ವಿಶೇಷ ಅನುಗ್ರಹವಿರುತ್ತದೆ. ಈ ರಾಶಿಯ ಜನರು ವೃತ್ತಿಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ ಮಾತ್ರವಲ್ಲ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಜೀವನದಲ್ಲಿ ಬಹಳ ಯಶಸ್ಸು ಪಡೆಯುತ್ತಾರೆ. ಇವರು ಜನರೊಂದಿಗೆ ಆಗಾಗಾ ವಾದ ವಿವಾದಕ್ಕೆ ಇಳಿಯುತ್ತಾರಾದರೂ ಕೊನೆಗೆ ಜಯ ಇವರದ್ದೇ ಆಗಿರುತ್ತದೆ. 


ಸಿಂಹ : ಈ ರಾಶಿಯ ಜನರು ತೊಂದರೆಯಲ್ಲಿ ಸಿಲುಕಿಕೊಂಡರೆ, ಸಂಕಟ ಮೋಚಕ ಹನುಮಾನ್  (Hanuman) ತೊಂದರೆಯುನ್ನು ನಿವಾರಿಸುತ್ತಾನೆ. ಇವರ ಜೀವನದಲ್ಲಿಯೂ ಸಂಪತ್ತು, ಐಷಾರಾಮಿ ಮತ್ತು ಯಶಸ್ಸು ಇರುತ್ತದೆ.


ಇದನ್ನೂ ಓದಿ : Sun enters Ardra Nakshatra: ಆರ್ದ್ರ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಇದರ ಪರಿಣಾಮ ಹೇಗಿರಲಿದೆ!


ವೃಶ್ಚಿಕ : ಈ ರಾಶಿಯ ಜನರ ಜೀವನದಲ್ಲಿ ಅಡೆತಡೆಗಳು ಬರುವುದೇ ವಿರಳ.  ವರು ಶೀಘ್ರ ಯಶಸ್ಸು ಕಂಡು ಕೊಳ್ಳುತ್ತಾರೆ. ಇವರು ಹಣವನ್ನು ಕೂಡಾ ಸಂಪಾದಿಸುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.