ಮಂಗಳವಾರ ಯಾಕೆ ಮಾರುತಿ ಪೂಜೆ ಮಾಡಬೇಕು? ಇಲ್ಲಿದೆ ಮಾಹಿತಿ

ಪೌರಾಣಿಕ ನಂಬಿಕೆಗಳ ಪ್ರಕಾರ ಮತ್ತು ವಿಶೇಷವಾಗಿ ಸ್ಕಂದ ಪುರಾಣದ ಪ್ರಕಾರ, ಮಂಗಳವಾರ  ಹನುಮಾನ್ ಜಿ ಜನನವಾಯಿತು.  ಹಾಗಾಗಿ ಈ ದಿನವನ್ನು ಅವರ ಆರಾಧನೆಗೆ ಮೀಸಲಿಡಲಾಯಿತು.

Written by - Ranjitha R K | Last Updated : Mar 9, 2021, 10:22 AM IST
  • ವಾರದ ಎಲ್ಲಾ ಏಳು ದಿನಗಳೂ ಯಾವುದಾದರೊಂದು ದೇವರಿಗೆ ಸಮರ್ಪಿತ
  • ಮಂಗಳವಾರ ಹನುಮಂತನಿಗೆ ಪೂಜೆ ಸಲ್ಲಿಸಿದರೆ ಶ್ರೇಷ್ಠ ಫಲ ಸಿಗುತ್ತದೆ
  • ಹನುಮಂತನ ಪೂಜೆ ವೇಳೆ ಕೆಲ ಅಂಶಗಳು ನೆನಪಿರಲೇಬೇಕು
ಮಂಗಳವಾರ ಯಾಕೆ ಮಾರುತಿ ಪೂಜೆ ಮಾಡಬೇಕು? ಇಲ್ಲಿದೆ ಮಾಹಿತಿ title=
ಮಂಗಳವಾರ ಹನುಮಂತನಿಗೆ ಪೂಜೆ ಸಲ್ಲಿಸಿದರೆ ಶ್ರೇಷ್ಠ ಫಲ ಸಿಗುತ್ತದೆ (file photo)

ನವದೆಹಲಿ : ದಿನನಿತ್ಯ ದೇವರ ಪೂಜೆಯೊಂದಿಗೆ (Daily pooja) ನಮ್ಮ ದಿನ ಆರಂಭವಾಗುತ್ತದೆ. ಹಾಗೆಯೇ ವಾರದ ಎಲ್ಲಾ ಏಳು ದಿನಗಳೂ  ಯಾವುದಾದರೊಂದು ದೇವರಿಗೆ ಸಮರ್ಪಿತವಾಗಿರುತ್ತದೆ. ಆ ದಿನ ಆ ದೇವರನ್ನು ಪೂಜಿಸಿದರೆ ವಿಶೇಷ ಫಲ ಸಿಗುತ್ತದೆ ಎನ್ನಲಾಗಿದೆ. ಅಂತೆಯೇ, ಮಂಗಳವಾರವನ್ನು ಹನುಮಾನ್ (Hanuman Pooja) ದೇವರ ದಿನವೆಂದು ಪರಿಗಣಿಸಲಾಗುತ್ತದೆ.  ಈ ದಿನ ಭಜರಂಗಬಲಿಯನ್ನು ಪೂಜಿಸಿದರೆ ಮನೋಕಾಮನೆಗಳು ಈಡೇರುತ್ತದೆ ಎಂದು ಹೇಳಲಾಗುತ್ತದೆ.  ಆದರೆ ಮಂಗಳವಾರವೇ (Tuesday) ಹನುಮಾನ್ ಜಿಯನ್ನು ಪೂಜಿಸುವ ಹಿಂದಿನ ಕಾರಣವೇನು? ಇದಕ್ಕೂ ಕಾರಣವಿದೆ. ಅಲ್ಲದೆ, ಹನುಮಾನ್  ಪೂಜೆಯನ್ನು ಮಾಡುವಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಈ ಕಾರಣದಿಂದಾಗಿ ಮಂಗಳವಾರದ ಪೂಜೆ ಹನುಮಂತನಿಗೆ ಅರ್ಪಣೆ : 
ಪೌರಾಣಿಕ ನಂಬಿಕೆಗಳ ಪ್ರಕಾರ ಮತ್ತು ವಿಶೇಷವಾಗಿ ಸ್ಕಂದ ಪುರಾಣದ ಪ್ರಕಾರ, ಮಂಗಳವಾರ  ಹನುಮಾನ್ (Hanuman) ಜನನವಾಯಿತು.  ಹಾಗಾಗಿ ಈ ದಿನವನ್ನು ಅವರ ಆರಾಧನೆಗೆ ಮೀಸಲಿಡಲಾಯಿತು. ಈ ದಿನ, ಯಾರು ವಿಧಿ ವಿಧಾನಗಳೊಂದಿಗೆ  ಭಜರಂಗಬಲಿಯನ್ನು ಪೂಜಿಸುತ್ತಾರೋ (Bhajarangabali pooja) ಅವರ ಎಲ್ಲಾ ಇಚ್ಛೆಗಳು ಈಡೇರುತ್ತವೆಯಂತೆ.  ಹನುಮಂತನನ್ನು ಸಂಕಟ ಹರಣ ದೂ ಕರೆಯುತ್ತಾರೆ. ಇದಲ್ಲದೆ, ಹನುಮಾನ್ ಅನ್ನು ಮಂಗಳ ಗ್ರಹದ (Mars) ನಿಯಂತ್ರಕ ಎಂದು ಪರಿಗಣಿಸಲಾಗಿದೆ. ಹಾಗಾಗಿ ಹನುಮಂತನನ್ನು ಮಂಗಳವಾರ ಪೂಜಿಸಲಾಗುತ್ತದೆ. ಈ ದಿನ, ಉಪವಾಸ ಮಾಡುವುದು ಮತ್ತು ಉಪವಾಸದ ಜೊತೆಗೆ, ಹನುಮಾನ್ ಚಾಲಿಸಾ (Hanuman Chalisa)ಪಠಣ ಮತ್ತು ಸುಂದರ ಕಾಂಡ ಪಠಣ ಮಾಡಿದರೆ, ಫಲಪ್ರದವಾಗಿರುತ್ತದೆಯಂತೆ.  

ಇದನ್ನೂ ಓದಿ : ಚಿಟಿಕೆ ಉಪ್ಪು ವಾಸ್ತು ದೋಷ ನಿವಾರಣೆಗೆ ಸಹಾಯ ಮಾಡುತ್ತದೆ..!

ಹನುಮಾನ್ ಜಿ ಪೂಜೆ ಉಪವಾಸದ ಸಮಯದಲ್ಲಿ ಈ ವಿಷಯಗಳನ್ನು ನೆನಪಿರಲಿ: 
- ಹನುಮಾನ್ ಜಿ ಯನ್ನು ಪೂಜಿಸುವಾಗ, ಮಡಿ ಮೈಲಿಗೆಗಯತ್ತ ವಿಶೇಷ ಕಾಳಜಿ ವಹಿಸಬೇಕು.
- ಪೂಜೆ ವೇಳೆ  ಮನಸ್ಸು ಮತ್ತು ದೇಹ ಪರಿಶುದ್ಧರಾಗಿರಲಿ. ಶಾಂತ ಮನಸ್ಸಿನಿಂದ ಪೂಜೆ ಮಾಡಿ.
- ಮಂಗಳವಾರ (Tuesday) ಉಪವಾಸ ಮಾಡುತ್ತಿದ್ದರೆ, ಈ ದಿನ ಉಪ್ಪು ತಿನ್ನಬೇಡಿ.  ಸಿಹಿ ಪದಾರ್ಥಗಳನ್ನು ಏನನ್ನಾದರೂ ದಾನ ಮಾಡುತ್ತಿದ್ದರೆ, ಅದನ್ನು ಸಹ ಸೇವಿಸಬಾರದು. 
- ಮಂಗಳವಾರ ಹನುಮನನ್ನು ಪೂಜಿಸುವುದು ಮತ್ತು 'ಶ್ರೀ ಹನುಮತೆ ನಮಃ ಎಂದು ಜಪಿಸುವುದರಿಂದ ಪೂಜೆಯ ಉತ್ತಮ ಫಲ ಸಿಗುತ್ತದೆ. 
-ಈ ದಿನ ಕೆಂಪು ಬಟ್ಟೆಗಳನ್ನು (Red cloth) ಧರಿಸುವುದು ಶುಭ. ನೆನಪಿರಲಿ ಪೂಜೆಯ ವೇಳೆ ಕಪ್ಪು ಅಥವಾ ಬಿಳಿ ವಸ್ತ್ರಗಳನ್ನು ತಪ್ಪಿಯೂ ಧರಿಸಬೇಡಿ. 
- ಮಂಗಳವಾರದ ಉಪವಾಸವನ್ನು ಆಚರಿಸುವ ವ್ಯಕ್ತಿ ದಿನಕ್ಕೆ ಒಮ್ಮೆ ಮಾತ್ರ ಆಹಾರವನ್ನು (food) ಸೇವಿಸಬೇಕು.

ಇದನ್ನೂ ಓದಿ : vastu tips : ಮನೆಯಲ್ಲಿ ಮನಿಪ್ಲಾಂಟ್ ಇಡುವ ಮೊದಲು ಈ ಮಾತುಗಳನ್ನು ತಿಳಿದುಕೊಳ್ಳಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News