ನವದೆಹಲಿ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತೀಯ ತಂಡದ ಜರ್ಸಿಗಳ ಮೇಲೆ ಇಂಡಿಯಾ ಬದಲು ಭಾರತ್ ಹೆಸರನ್ನು ಮುದ್ರಿಸಬೇಕು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಗೆ ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 9ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಔತಣಕೂಟದ ಆಹ್ವಾನದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮುರನ್ನು ‘ದಿ ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ದಿ ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ವಿವಾದ ಉಂಟಾಗಿರುವ ಮಧ್ಯೆಯೇ ಸೆಹ್ವಾಗ್ ಟ್ವೀಟ್ ಮೂಲಕ ‘ಭಾರತ್’ ಬಗ್ಗೆ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಭಾರತ vs ಪಾಕ್ ಸೂಪರ್ 4 ಪಂದ್ಯಕ್ಕೆ ಸ್ಥಳ, ದಿನಾಂಕ ಫಿಕ್ಸ್: ಈ ಆಟವೂ ಮಳೆಯಿಂದ ರದ್ದಾದರೆ ಮುಂದೇನು ಕಥೆ?


ಟೀಮ್ ಇಂಡಿಯಾ ಅಲ್ಲ #TeamBharat. ಈ ವಿಶ್ವಕಪ್‌ನಲ್ಲಿ ನಾವು ಕೊಹ್ಲಿ, ರೋಹಿತ್, ಬುಮ್ರಾ, ಜಡ್ಡು ಅವರನ್ನು ಹುರಿದುಂಬಿಸುತ್ತೇವೆ. ನಮ್ಮ ಹೃದಯದಲ್ಲಿ ಭಾರತವಿರಲಿ ಮತ್ತು ಆಟಗಾರರು “ಭಾರತ್” ಇರುವ ಜೆರ್ಸಿಯನ್ನು ಧರಿಸಲಿ’ ಎಂದು ಜಯ್ ಶಾರಿಗೆ ಸಲಹೆ ನೀಡಿದ್ದಾರೆ.  


World Cup 2023: ವಿಶ್ವಕಪ್’ಗೆ 15 ಸದಸ್ಯರ ಭಾರತ ತಂಡ ಪ್ರಕಟ: ಉಪನಾಯನಾಗಿ ಆಲ್’ರೌಂಡರ್’ಗೆ ಸ್ಥಾನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.