ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣವನ್ನು ಒಂದು ಕ್ಷಣ ನಿಲ್ಲಿಸಿದರು. ಏಕೆಂದರೆ ಹತ್ತಿರದ ಮಸೀದಿಯಿಂದ 'ಆಜಾನ್' (ಮುಸ್ಲಿಂ ಪ್ರಾರ್ಥನೆಯ ಕರೆ) ನಡೆಯುತ್ತಿತ್ತು. ಸುಮಾರು ಅರ್ಧಗಂಟೆಯ ತಮ್ಮ ಭಾಷಣದಲ್ಲಿ ಐದು ನಿಮಿಷಗಳ ಕಾಲ ಬಿಜೆಪಿಯ ಹಿರಿಯ ನಾಯಕ ವಿರಾಮ ನೀಡಿ ವೇದಿಕೆಯಲ್ಲಿದ್ದವರಿಗೆ "ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ" ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ “ಆಜಾನ್” ನಡೆಯುತ್ತಿದೆ ಎಂದು ವೇದಿಕೆಯ ಮೇಲಿದ್ದ ಯಾರೋ ಹೇಳಿದಾಗ, ಶಾ ಅವರು ತಮ್ಮ ಭಾಷಣವನ್ನು ನಿಲ್ಲಿಸಿದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ - ಒಂಭತ್ತು ಮಂದಿ ಸಾವು, 6 ಜನರ ಸ್ಥಿತಿ ಗಂಭೀರ


ಆಜಾನ್ ಸಮಯದಲ್ಲಿ ಅಮಿತ್ ಶಾ ಅವರು ತಮ್ಮ ಭಾಷಣವನ್ನು ನಿಲ್ಲಿಸಿದ ವೀಡಿಯೊವನ್ನು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನೆಟಿಜನ್‌ಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳೂ ಬಂದಿವೆ.


Funny Viral Video : ಹುಡುಗಿಯ ನೃತ್ಯದಿಂದ ಬೇಸತ್ತ ಎಮ್ಮೆ ಕಲಿಸಿತು ಸರಿಯಾದ ಪಾಠ .!


ಇನ್ನು ಈ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿ ಹೀಗೆ ಬರೆದುಕೊಂಡಿದ್ದಾರೆ. “ಆಜಾನ್ ಕಾರಣದಿಂದ ಮಾನ್ಯ ಗೃಹ ಸಚಿವರು ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿದ್ದಾರೆ. ಇದು ಗೌರವ ಸೂಚಕ ಮತ್ತು ಅವರ ಈ ನಡತೆ ಕಾಶ್ಮೀರಿಗಳ ಹೃದಯಗಳನ್ನು ಗೆದ್ದಿದೆ. ಇದು ಕಾಶ್ಮೀರಿಗಳ ಧರ್ಮ ಮತ್ತು ಭಾವನೆಗಳಿಗೆ ಗೌರವವನ್ನು ನೀಡಿದ್ದಾರೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.