ಬೆಂಗಳೂರು : ನಿಮ್ಮ ಇಷ್ಟದೇವರನ್ನು ಪ್ರಾರ್ಥಿಸಿಕೊಂಡು ಇಂದಿನ ದಿನವನ್ನು ಆರಂಭಿಸಿ ..


COMMERCIAL BREAK
SCROLL TO CONTINUE READING

ಮೇಷ: ಅನಿರೀಕ್ಷಿತ ವ್ಯಕ್ತಿಯೊಬ್ಬರ ಭೇಟಿಯಾಗಲಿದೆ. ಹಿರಿಯರ ಮಾತುಗಳಿಂದಾಗಿ ವ್ಯವಹಾರಗಳಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನ ತಂಡದ ನೇತೃತ್ವ ವಹಿಸುವ ಸಾಧ್ಯತೆ. ಅನಿರೀಕ್ಷಿತ ಪ್ರಯಾಣದಿಂದಾಗಿ ಖರ್ಚು. 


ವೃಷಭ: ವ್ಯಾಪಾರದ ಅಭಿವೃದ್ಧಿಗಾಗಿ ಚಿಂತನೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ. ವ್ಯಾಪಾರೋದ್ಯಮದಲ್ಲಿ ಎಚ್ಚರಿಕೆಯಿಂದಿರಬೇಕಾದುದು ಅನಿವಾರ್ಯ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು. 


ಮಿಥುನ: ಸರ್ಕಾರಿ ಉದ್ಯೋಗಿಗಳಿಗೆ ಕೆಲಸದಲ್ಲಿನ ಒತ್ತಡ ಕೊಂಚ ಕಡಿಮೆಯಾಗಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣ. ಮಹಿಳೆಯರಿಗೆಆಭರಣದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬರವಣಿಗೆಯಿಂದ ಕೀರ್ತಿಲಾಭ. 


ಇದನ್ನೂ ಓದಿ : ಇಲ್ಲಿ ಎಣ್ಣೆಯೇ ಇಲ್ಲದೆ ಪ್ರಜ್ವಲಿಸುತ್ತದೆ ದೀಪ : ವರ್ಷದಲ್ಲಿ ಬರೀ 5 ಗಂಟೆ ಮಾತ್ರ ದರ್ಶನ ಕೊಡುವ ಶಕ್ತಿ ಪೀಠ..!


ಕಟಕ: ಮಹಿಳೆಯರ ಇಷ್ಟಾರ್ಥಗಳು ನೆರವೇರಲಿವೆ. ಕುಟುಂಬದವರೊಂದಿಗೆ ಧಾರ್ಮಿಕ ಕ್ಷೇತ್ರ ದರ್ಶನ. ಹಮ್ಮಿಕೊಂಡಿರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಲೇವಾದೇವಿ ವ್ಯವಹಾರದಲ್ಲಿ ವಿಶೇಷ ಲಾಭ. 


ಸಿಂಹ: ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಸಾಧ್ಯತೆ. ಸಾಮಾಜಿಕ ಗೌರವಾದರಗಳು ಪ್ರಾಪ್ತಿ. ಬಹುದಿನಗಳ ಬೇಡಿಕೆಗಳು ಈಡೇರುವ ಸಾಧ್ಯತೆ ಇದೆ.


ಕನ್ಯಾ: ಕೆಲಸದ ಒತ್ತಡದಿಂದಾಗಿ ಮಾನಸಿಕ ಗೊಂದಲ. ಹೊಸ ಯೋಜನೆಗಳು ಕಾರ್ಯರೂಪಕ್ಕೆ ತರುವ ಬಗ್ಗೆ ಚರ್ಚೆ. ರಾಜಕೀಯದಲ್ಲಿ ಯಶಸ್ಸು. ನ್ಯಾಯಾಲಯದಲ್ಲಿನ ಕಟ್ಲೆಗಳು ಅನುಕೂಲಕರವಾಗಲಿದೆ. 


ಇದನ್ನೂ ಓದಿ : Ram Navami 2021: ಶ್ರೀರಾಮ ನವಮಿಯ ಶುಭ ಮುಹೂರ್ತ ಯಾವಾಗ? ಪೂಜೆ-ಹವನ ಪ್ರಕ್ತಿಯೆಯ ವಿಧಾನ ಹೇಗಿರಬೇಕು?


ತುಲಾ: ಅಪೇಕ್ಷಿತರಿಗೆ ಸಂತಾನ ಪ್ರಾಪ್ತಿ. ಯಂತ್ರೋಪಕರಣಗಳ ಖರೀದಿ ಅಥವಾ ರಿಪೇರಿಗಾಗಿ ಹೆಚ್ಚಿನ ವೆಚ್ಚ. ಪ್ರತಿಭಾವಂತ ಮಹಿಳೆಯರಿಗೆ ಉತ್ತಮ ಪ್ರೋತ್ಸಾಹ ದೊರಕಲಿದೆ.


ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು. ಹೊಸದೊಂದು ಉದ್ಯಮ ಪ್ರಾರಂಭಿಸುವ ಕಾರ್ಯದಲ್ಲಿ ತಲ್ಲೀನರಾಗುವಿರಿ. ಬಹುಕಾಲದ ಬಯಕೆಗಳು ಈಡೇರುವ ಸಾಧ್ಯತೆ. ದೂರದ ಪ್ರಯಾಣವೊಂದಕ್ಕೆ ಸಂಕಲ್ಪ. 


ಧನು: ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಯಶಸ್ಸು. ವ್ಯವಹಾರದಲ್ಲಿ ಪ್ರಗತಿ ಕುಂಠಿತ. ದಾಂಪತ್ಯ ಜೀವನವು ಸುಖಮಯವಾಗಲಿದೆ. ಅನಿರೀಕ್ಷಿತ ಪ್ರಯಾಣವೊಂದು ಮಾಡಬೇಕಾದೀತು. 


ಇದನ್ನೂ ಓದಿ : ಕರ್ಣಿ ಮಾತಾ ಮಂದಿರದಲ್ಲಿ ಇಲಿಗಳಿಗೇ ಪ್ರಾಶಸ್ತ್ಯ; ಇಲ್ಲಿಇಲಿಗಳು ತಿಂದು ಬಿಟ್ಟ ಆಹಾರವೇ ಪ್ರಸಾದ..!


ಮಕರ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಒತ್ತಡ. ಕೆಲಸ ಕಾರ್ಯಗಳಲ್ಲಿ ಮನೆಯವರ ಸಹಕಾರ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಆರೋಗ್ಯದ ಬಗ್ಗೆ ನಿಗಾ ಇರಲಿ. 


ಕುಂಭ: ವೃತ್ತಿಯಲ್ಲಿ ಅಮಿತ ಒತ್ತಡ ಉಂಟಾಗಲಿದ್ದು ತಾಳ್ಮೆಯಿಂದ ವ್ಯವಹರಿಸುವುದು ಅವಶ್ಯಕ. ಸಂಶಯ ಪ್ರವೃತ್ತಿಯಿಂದಾಗಿ ಸಂಕಷ್ಟ. ಬಂಧುಗಳ ನೆರವಿನಿಂದ ಸಮಸ್ಯೆಗಳ ಪರಿಹಾರ. 


ಮೀನ: ಸಹೋದ್ಯೋಗಿಗಳೊಂದಿಗೆ ಉಂಟಾಗಿದ್ದ ಮನಃಸ್ತಾಪ ದೂರ. ವೃತ್ತಿಯಲ್ಲಿನ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳುವಿರಿ. ಸಂಗಾತಿಯ ಸಂಪೂರ್ಣ ಸಹಕಾರ ಲಭ್ಯವಾಗಲಿದೆ. 


ಇದನ್ನೂ ಓದಿ : Sindhoora: ನಕಾರಾತ್ಮಕ ಶಕ್ತಿ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತೆ ಸಿಂಧೂರ


ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.