ಕೊಡಗು ಜಿಲ್ಲೆ ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥೋದ್ಭವ. ಮಧ್ಯರಾತ್ರಿ 1.27ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿಯ ದರ್ಶನ. ಕರ್ಕಾಟಕ ಲಗ್ನದಲ್ಲಿ ಜರುಗುವ ಶುಭ ಗಳಿಗೆಯಲ್ಲಿ ತೀರ್ಥೋದ್ಭವ. ತೀರ್ಥರೂಪಿಣಿ ಕಾವೇರಿ ದರ್ಶನ ಮಾಡಿ ಸಹಸ್ರ ಭಕ್ತರು ಪುನೀತ. ಮುಂಜಾನೆಯಿಂದಲ್ಲೂ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪುನಸ್ಕಾರ. ಪ್ರಶಾಂತ್ ಆಚಾರ್, ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜೆ. ಕಾವೇರಿ ಮಾತೆಯ ದರ್ಶನಕ್ಕೆ ಸಹಸ್ರ ಸಂಖ್ಯೆಯಲ್ಲಿ ಭಕ್ತರ ದಂಡು.ಹೂವಿನ ಅಲಂಕಾರಗಳಿಂದ ಸಿಂಗಾರಗೊಂಡ ಕಾವೇರಿ ಮಾತೆ
ಕೊಡಗಿನ ಜನರ ಪಾಲಿಗೆ ಕಾವೇರಿ ಕೇವಲ ನದಿಯಲ್ಲ ಆಕೆ ಕೊಡಗಿನ ಜನರ ಕುಲದೇವತೆ, ಪಾಪನಾಶಿನಿ, ಬೇಡಿದ ವರವನೀಡೋ ಕರುಣಾಮಯಿ ಹಾಗಾಗಿಯೆ ಕಾವೇರಿ ತಾಯಿಯ ದರ್ಶನಕ್ಕೆ ಇಷ್ಟೊಂದು ಬಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ತಮಿಳುನಾಡಿನ ಜತೆ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡಿರುವುದರಿಂದಲೇ ರಾಜ್ಯಕ್ಕೆ ಕಾವೇರಿ ವಿಷಯದಲ್ಲಿ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.ಕಾವೇರಿ ನೀರು ಹರಿಸುವ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಅವರು; ರಾಜ್ಯ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಕೆಆರ್ಎಸ್ ಜಲಾಶಯದ ಮೇಲ್ಭಾಗದಲ್ಲಿ ವ್ಯಾಪಕ ಮಳೆಯಾಗ್ತಿದೆ. KRS ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗುತ್ತಿದೆ. ಹೆಚ್ಚಿನ ನೀರು ಬಿಡುಗಡೆಯಿಂದ ಡ್ಯಾಂ ಕೆಳಗಿನ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.
ನದಿ ಜೋಡಣೆ ವಿಚಾರದಲ್ಲಿ ರಾಜ್ಯಕ್ಕೆ ನೀರು ಹಂಚಿಕೆ ಪಾಲು ಪ್ರಮಾಣದಲ್ಲಿ ಯಾವುದೇ ಅನ್ಯಾಯ ಆಗಬಾರದು. ನಮ್ಮ ರಾಜ್ಯದ ನೀರಿನ ಪಾಲು ಸರಿಯಾಗಿ ನಿರ್ಧಾರ ಆಗಬೇಕು. ಹೊಸ ವಿಸ್ತೃತ ಯೋಜನಾ ವರದಿ (DPR) ತಯಾರು ಆಗುವ ಹಂತದಲ್ಲೇ ರಾಜ್ಯದ ಪಾಲು ನಿರ್ಧಾರ ಆಗಬೇಕು ಎಂಬ ನಿಲುವನ್ನ ಸರ್ಕಾರ ಅನುಸರಿಸಲು ನಿರ್ಧರಿಸಿದೆ.
ಕರೋನಾ ಒಂದು ಸಾಂಕ್ರಾಮಿಕ ರೋಗ. ಅದು ಗಾಳಿಯಿಂದ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ದೃಢಪಡಿಸಿದೆ. ಆದರೆ, ಅದು ನಿಂತ ನೀರು ಅಥವಾ ಹರಿಯುವ ನೀರಿನಿಂದ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಪ್ರಮಾಣ ಇಲ್ಲ ಎಂದು ಹೇಳಿದೆ ವಿಶ್ವ ಆರೋಗ್ಯ ಸಂಸ್ಥೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.