ಪ್ರಭಾಸ್ ಇನ್ನು ಮುಂದೆ ಹಿಂದಿ ನಿರ್ದೇಶಕರ ಜೊತೆ ಸಿನಿಮಾ ಮಾಡಲ್ವಂತೆ..! ಕಾರಣ ಏನಿರಬಹುದು..?

Prabhas : ಫ್ಯಾನ್‌ ಇಂಡಿಯಾ ಸ್ಟಾರ್‌ ಪ್ರಭಾಸ್‌ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿವೆ. ಇದರಿಂದಾಗಿ ಡಾರ್ಲಿಂಗ್‌ ಫ್ಯಾನ್ಸ್‌ಗೆ ತುಂಬಾ ನೋವು ಉಂಟಾಗಿದೆ. ಇದೀಗ ರೆಬಲ್‌ ಸ್ಟಾರ್‌ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ತಿಳಿದು ಬಂದಿದೆ... ಅದು ಏನು ಅಂತ ತಿಳಿಯಲು ಮುಂದೆ ಓದಿ..

Written by - Krishna N K | Last Updated : Aug 2, 2023, 07:28 PM IST
  • ಬಾಹುಬಲಿ’ ಚಿತ್ರದ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಟ ಪ್ರಭಾಸ್.
  • ಆದಿಪುರುಷ’ ಚಿತ್ರದಿಂದ ತುಂಬಲಾರದ ನಷ್ಟಕ್ಕೆ ಒಳಗಾಗಿದ್ದ ತೆಲುಗು ನಟ.
  • ಸತತ ಸೋಲಿನಿಂದಾಗಿ ಇದೀಗ ಡಾರ್ಲಿಂಗ್‌ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಪ್ರಭಾಸ್ ಇನ್ನು ಮುಂದೆ ಹಿಂದಿ ನಿರ್ದೇಶಕರ ಜೊತೆ ಸಿನಿಮಾ ಮಾಡಲ್ವಂತೆ..! ಕಾರಣ ಏನಿರಬಹುದು..? title=

Prabhas upcoming movies : ‘ಬಾಹುಬಲಿ’ ಚಿತ್ರದ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದ ಪ್ರಭಾಸ್, ‘ಆದಿಪುರುಷ’ ಚಿತ್ರದಿಂದ ತುಂಬಲಾರದ ನಷ್ಟಕ್ಕೆ ಒಳಗಾಗಿದ್ದರು. ದೇಶಾದ್ಯಂತ ಕಾತರದಿಂದ ಕಾಯುತ್ತಿದ್ದ ಸಿನಿರಸಿಕರಿಗೆ ಇದು ಸಂಪೂರ್ಣ ನಿರಾಸೆ ಮೂಡಿಸಿದೆ. ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ.

ರಾಮಾಯಣದಿಂದ ಸ್ಫೂರ್ತಿ ಪಡೆದ ಆದಿಪುರುಷ ಚಿತ್ರವು ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಗ್ರಾಫಿಕ್ಸ್, ವಿಎಫ್ಎಕ್ಸ್ ಮತ್ತು ರಾವಣನ ವೇಷ ಭೂಣಷಕ್ಕೆ ತೀವ್ರ ಖಂಡನೆ ವ್ಯಕ್ತವಾಯಿತು. ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದರು. ಅಲ್ಲದೆ, ನೆಟ್ಟಿಗರು ಟ್ರೋಲ್‌ ಮಾಡಲು ಪ್ರಾರಂಭಿಸಿದರು. ಅಲ್ಲದೆ, ಚಿತ್ರತಂಡದ ವಿರುದ್ಧ ಪ್ರಕರಣ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ: ಆಲಿಯಾರನ್ನು ತಳ್ಳಿದ ರಣವೀರ್ ಸಿಂಗ್‌, ಸಿಡಿಮಿಡಿಗೊಂಡ ನಟಿ! ವಿಡಿಯೋ ವೈರಲ್‌

ಬಹು ನಿರೀಕ್ಷಿತ ಚಿತ್ರ 'ಆದಿಪುರುಷ' ಭಯಾನಕ ಸೋಲಿನ ನಂತರ ಪ್ರಭಾಸ್ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ. ಕೆಲ ಕಾಲ ಬಾಲಿವುಡ್ ನಿರ್ದೇಶಕರ ಜೊತೆ ಕೆಲಸ ಮಾಡಬಾರದು ಅಂತ ನಿರ್ಧಾರ ಮಾಡಿದ್ದಾರಂತೆ. ಮೇಲಾಗಿ ಅವರಿಗೆ ಬಾಲಿವುಡ್ ನಿರ್ದೇಶಕರ ಸ್ಕ್ರಿಪ್ಟ್ ಕೇಳುವ ಆಸಕ್ತಿಯೂ ಇಲ್ಲವಂತೆ. ಈಗಾಗಲೇ ಕಮಿಟ್ ಆಗಿರುವ ಬಾಲಿವುಡ್ ಪ್ರಾಜೆಕ್ಟ್ ಗಳಿಂದಲೂ ಹೊರಬಂದಿದ್ದಾಗಿ ಗುಸುಗುಸು ಕೇಳಿಬರುತ್ತಿದೆ.

'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ, ಪ್ರಭಾಸ್ ಮತ್ತು ಹೃತಿಕ್ ರೋಷನ್ ಪ್ರಮುಖ ಪಾತ್ರಗಳಲ್ಲಿ ಪ್ರತಿಷ್ಠಿತ ಆಕ್ಷನ್ ಚಲನಚಿತ್ರವನ್ನು ಮಾಡಲು ಯೋಜಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮುಖ್ಯಸ್ಥರಲ್ಲಿ ಒಬ್ಬರಾದ ನವೀನ್ ಯೆರ್ನೇನಿ ಅವರು ಕೆಲವು ದಿನಗಳ ಹಿಂದೆ ಸಿದ್ಧಾರ್ಥ್ ಆನಂದ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಿನಿಮಾವೊಂದರ ಕುರಿತು ಚರ್ಚೆ ನಡೆಸಲಾಯಿತು.

ಇದನ್ನೂ ಓದಿ: ನಟಿ ವಿಷ್ಣು ಪ್ರಿಯಾ ಜೊತೆ ʼಜೆಡಿʼ 2ನೇ ಮದುವೆ..! ಕ್ಲಾರಿಟಿ ಕೊಟ್ಟ ನಟ

ಪ್ರಭಾಸ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ಸಿನಿಮಾ ಮಾಡಲು ನಿರ್ಧರಿಸಿದ್ದರು. ಈ ಚಿತ್ರವು ಮೈತ್ರಿ ಮೂವಿ ಮೇಕರ್ಸ್‌ಗೆ ಲ್ಯಾಂಡ್‌ಮಾರ್ಕ್ ಪ್ರಾಜೆಕ್ಟ್ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. 'ಪಠಾಣ್' ಚಿತ್ರದ ಭವ್ಯ ಯಶಸ್ಸಿಗೆ ಅಭಿನಂದನೆ ಸಲ್ಲಿಸಲು ನವೀನ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅದ್ಧೂರಿ ಆ್ಯಕ್ಷನ್ ಸಿನಿಮಾದ ಬಗ್ಗೆ ಮಾತನಾಡಿದರು.

ಸದ್ಯ ಸಿದ್ಧಾರ್ಥ್ ಆನಂದ್ 'ಫೈಟರ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಭಾರತದ ಸೂಪರ್ ಮ್ಯಾನ್ ಹೃತಿಕ್ ರೋಷನ್ ನಾಯಕನಾಗಿ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಸಿದ ನಂತರ ಪ್ರಭಾಸ್ ಮತ್ತು ಹೃತಿಕ್ ರೋಷನ್ ಮಲ್ಟಿ ಸ್ಟಾರರ್ ಸಿನಿಮಾ ಮಾಡಲು ಬಯಸಿದ್ದರು.

ಆದರೆ, 'ಆದಿಪುರುಷ' ಚಿತ್ರದ ಮೂಲಕ ತೀವ್ರ ಟೀಕೆಗೆ ಗುರಿಯಾಗಿರುವ ಪ್ರಭಾಸ್ ಬಾಲಿವುಡ್ ನಿರ್ದೇಶಕರ ಜೊತೆ ಕೆಲಸ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಆನಂದ್ ಚಿತ್ರದಿಂದ ಹಿಂದೆ ಸರಿದಿದ್ದಾರೆಯಂತೆ. ಸಿದ್ಧಾರ್ಥ್ ಆನಂದ್ ಈ ಹಿಂದೆ ಹೃತಿಕ್ ರೋಷನ್ ಜೊತೆ 'ಬ್ಯಾಂಗ್ ಬ್ಯಾಂಗ್' ಮತ್ತು 'ವಾರ್' ಚಿತ್ರಗಳನ್ನು ಮಾಡಿದ್ದರು. ಈ ಎರಡೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News