ಅನಂತಕುಮಾರ್ ಹೆಗಡೆ ಕೇಂದ್ರ ಮಂತ್ರಿಯಾಗಿರಲು ಯೋಗ್ಯನಲ್ಲ- ಸಿದ್ದರಾಮಯ್ಯ

    

Last Updated : Dec 5, 2017, 08:20 PM IST
ಅನಂತಕುಮಾರ್ ಹೆಗಡೆ ಕೇಂದ್ರ ಮಂತ್ರಿಯಾಗಿರಲು ಯೋಗ್ಯನಲ್ಲ- ಸಿದ್ದರಾಮಯ್ಯ title=

ಹುಬ್ಬಳ್ಳಿ:  ಸಿದ್ದರಾಮಯ್ಯರವರನ್ನು ಪಾಪದ ಪಿಂಡ ಎಂದು ಟೀಕಿಸಿದ್ದ  ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆಯವರ ಮಾತಿಗೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನಂತಕುಮಾರ್ ಹೆಗಡೆ ಕೇಂದ್ರದಲ್ಲಿ ಮಂತ್ರಿಯಾಗಲು ಯೋಗ್ಯರಲ್ಲ, ಅಂತವರ ಹೇಳಿಕೆಗಳಿಗೆ ಹೆಚ್ಚು ಮಾತನಾಡುವ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು. 
 
ಪತ್ರಕರ್ತರು ಕಾಂಗ್ರೆಸ್ನ ಜನಾಶಿರ್ವಾದ  ಕಾರ್ಯಕ್ರಮಕ್ಕೆ ಸರ್ಕಾರದ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವ ಕುಮಾರಸ್ವಾಮಿಯವರ  ಹೇಳಿಕೆಯನ್ನು ಪ್ರಸ್ತಾಪಿಸಿದಾಗ ಹಾಗಾದರೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ತಮ್ಮ ಪಕ್ಷದ ಯಾತ್ರೆಗಳಿಗೆ ಯಾವ ಹಣವನ್ನು ಬಳಸುತ್ತಿದ್ದಾರೆ ಎಂದು ಮೊದಲು ಸ್ಪಷ್ಟಪಡಿಸಲಿ ಎಂದು ತಿರುಗೇಟು ನೀಡಿದರು.  

ಇತ್ತೀಚಿಗೆ ಧಾರವಾಡ ಜಿ ಪಂ ಸದಸ್ಯ  ಯೋಗೀಶ ಗೌಡನ ಹತ್ಯೆಯ ವಿಚಾರದಲ್ಲಿ  ತಮ್ಮ ಸಂಪುಟದ  ವಿನಯ ಕುಲಕರ್ಣಿಯವರ ಕೈವಾಡವಿದೆ ಎನ್ನುವ ಶಂಕೆಗೆ ಉತ್ತರಿಸಿದ ಅವರು ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ  ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಅದ್ದರಿಂದ ಇದಕ್ಕೆ ನಾನು ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದರು. ಇನ್ನು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

Trending News