Rameshwaram Cafe Blast : ಪ್ರಾಣ ಉಳಿಸಿತು ಅಮ್ಮನ ಆ ಕರೆ ! ತಾಯಿ ಹೃದಯಕ್ಕೆ ತಿಳಿಯಿತೇ ಮಗನಿಗೆ ಎದುರಾಗಿದ್ದ ಕಂಟಕ

Rameshwaram Cafe Blast :ನಿನ್ನೆ ಸ್ಪೋಟ ನಡೆದ ಜಾಗದಲ್ಲೇ ಇದ್ದ ಬಿಹಾರ  ಮೂಲದ ಅಲಂಕೃತ್  ಎಂಬ ಯುವಕ ತನ್ನ ತಾಯಿಯಿಂದಲೇ ಇಂದು ಬದುಕಿ ಉಳಿದಿದ್ದಾನೆ. ನಿನ್ನೆ ನಡೆದ ಸ್ಪೋಟದ ಬಗ್ಗೆ ವಿವರಿಸುತ್ತಿದ್ದಾನೆ. 

Written by - Ranjitha R K | Last Updated : Mar 2, 2024, 05:55 PM IST
  • ಅಮ್ಮನನ್ನು ದೇವರು ಎನ್ನುತ್ತೇವೆ.
  • ಇದು ಉತ್ಪ್ರೇಕ್ಷೆಯಲ್ಲ ಸತ್ಯ ಎನ್ನುವುದು ಪದೇ ಪದೇ ಸಾಬೀತಾಗುತ್ತದೆ
  • ಮಕ್ಕಳಿಗೆ ಸಣ್ಣ ಗಾಯವಾದರೂ ಆ ಮನಸ್ಸು ಒದ್ದಾಡಿ ಬಿಡುತ್ತದೆ.
Rameshwaram Cafe Blast : ಪ್ರಾಣ ಉಳಿಸಿತು ಅಮ್ಮನ ಆ ಕರೆ ! ತಾಯಿ ಹೃದಯಕ್ಕೆ ತಿಳಿಯಿತೇ ಮಗನಿಗೆ ಎದುರಾಗಿದ್ದ ಕಂಟಕ  title=

Rameshwaram Cafe Blast :ಅಮ್ಮನನ್ನು ದೇವರು ಎನ್ನುತ್ತೇವೆ. ಇದು ಉತ್ಪ್ರೇಕ್ಷೆಯಲ್ಲ ಸತ್ಯ ಎನ್ನುವುದು ಪದೇ ಪದೇ ಸಾಬೀತಾಗುತ್ತದೆ. ದೇವರು ಎಲ್ಲಾ ಕಡೆ ಇರುವುದಕ್ಕೆ ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ಅಮ್ಮನನ್ನು ಸೃಷ್ಟಿ ಮಾಡಿದ್ದನಂತೆ. ಹೌದು, ತನ್ನ ಮಕ್ಕಳಿಗೆ ಸಣ್ಣ ಗಾಯವಾದರೂ ಆ ಮನಸ್ಸು ಒದ್ದಾಡಿ ಬಿಡುತ್ತದೆ. ಎಷ್ಟೋ ಬಾರಿ ತನ್ನ ಮಕ್ಕಳಿಗೆ ಎದುರಾಗುವ ಕಂಟಕ  ತಾಯಿ ಹೃದಯಕ್ಕೆ ಮೊದಲೇ ತಿಳಿಯುತ್ತದೆಯಂತೆ. ಆದರೆ ನಿಖರವಾಗಿ ಏನು ಎನ್ನುವುದು ತಿಳಿಯದೆ ಬರೀ ಒದ್ದಾಟ ನಡೆಸುತ್ತದೆ ಆ ಮನಸ್ಸು. ಎಷ್ಟೋ ಬಾರಿ ತಾಯಿಯಂದಿರ ಸಣ್ಣ ಸಣ್ಣ ಹೆಜ್ಜೆ ಮಕ್ಕಳನ್ನು ದೊಡ್ಡ ಆಪತ್ತಿನಿಂದ ರಕ್ಷಿಸಿ ಬಿಡುತ್ತದೆ. 

ನಾವಿಲ್ಲಿ ಹೇಳ ಹೊರಟಿರುವುದು ಅಮ್ಮನ ಬಗ್ಗೆ ಅಲ್ಲ, ನಿನ್ನೆ ನಡೆದ ಬಾಂಬ್ ಸ್ಪೋಟದ ಬಗ್ಗೆ. ನಿಜ, ಮೇಲೆ ಹಾಕಿರುವ ಪೀಟಿಕೆಗೂ ನಿನ್ನೆ ಬೆಂಗಳೂರಿನ ಕೆಫೆಯಲ್ಲಿ ನಡೆದಿರುವ ಬಾಂಬ್ ಸ್ಪೋಟಕ್ಕೂ ಸಂಬಂಧವಿದೆ. ನಿನ್ನೆ ಸ್ಪೋಟ ನಡೆದ ಜಾಗದಲ್ಲೇ ಇದ್ದ ಬಿಹಾರ ಮೂಲದ ಅಲಂಕೃತ್  ಎಂಬ ಯುವಕ ತನ್ನ ತಾಯಿಯಿಂದಲೇ ಇಂದು ಬದುಕಿ ಉಳಿದಿದ್ದಾನೆ. ನಿನ್ನೆ ನಡೆದ ಸ್ಪೋಟದ ಬಗ್ಗೆ ವಿವರಿಸುತ್ತಿದ್ದಾನೆ. 

ಇದನ್ನೂ ಓದಿ : ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಾಕರ, ಉಗ್ರರ ಸ್ವರ್ಗವಾಗುತ್ತಿದೆ ಕರ್ನಾಟಕ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹೌದು, ಅಲಂಕೃತ್ ರಾಮೇಶ್ವರಂ ಕೆಫೆಗೆ ನಿತ್ಯದ ಗಿರಾಕಿ. ಎಂದಿನಂತೆ ನಿನ್ನೆಯೂ ಕೂಡಾ ಕೆಫೆಗೆ ಬಂದು ದೋಸೆ ಆರ್ಡರ್ ಮಾಡಿದ್ದಾನೆ. ತನ್ನ ಆರ್ಡರ್ ಪಡೆದ ಅಲಂಕೃತ್ ಇನ್ನೇನು ದೋಸೆ ತಿನ್ನಲು ತನ್ನ ಮಾಮೂಲಿ ಜಾಗದಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಮೊಬೈಲ್ ಫೋನ್ ರಿಂಗ್ ಆಗಿದೆ.  ಅಮ್ಮನ ಫೋನ್ ಕರೆಯನ್ನು ಕಂಡ ಅಲಂಕೃತ್, ಅವರ ಜೊತೆ ಮಾತನಾಡುವುದಕ್ಕೆ ಕೆಫೆಯಿಂದ ಹೊರ ಬಂದಿದ್ದಾನೆ. ಅಲಂಕೃತ್ ಕೆಫೆಯಿಂದ ಹೊರ ನಡೆದ ಕೆಲವೇ ಸೆಕೆಂಡುಗಳಲ್ಲಿ ಬ್ಲಾಸ್ಟ್ ಆಗಿದೆ. 

ಇದನ್ನೂ ಓದಿ :Rameshwaram Cafe Blast : ಬಸ್ ನಲ್ಲೇ ಸಂಚಾರ ಮಾಡಿದ್ದ ರಾಮೇಶ್ವರಂ‌ ಕೆಫೆ ಬ್ಲಾಸ್ಟ್ ಶಂಕಿತ ಬಾಂಬರ್ : ಸಿಸಿಟಿವಿಯಲ್ಲಿ ಎಲ್ಲವೂ ಸ್ಪಷ್ಟ

ನಿನ್ನೆ ನಡೆದ ಘಟನೆ ಮತ್ತು ತಾನು ಹೇಗೆ ಪಾರಾದೆ ಎನ್ನುವುದನ್ನು ಅಲಂಕೃತ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರು ಕೂಡಾ ತಮ್ಮ ಟ್ವೀಟ್ ನಲ್ಲಿ ಅಮ್ಮನೇ ದೇವರು ಎಂದು ಬರೆದುಕೊಂಡಿದ್ದಾರೆ. ನಿಜ ಆ ಒಂದು ಕರೆ ಬರದೇ ಹೋಗಿದ್ದರೆ ಇಂದು ಹೇಗೆ ಬದುಕುಳಿದೆ ಎಂದು ಸುದ್ದಿಯಾಗಿರುವ ಅಲಂಕೃತ್, ಬೇರೆಯೇ ರೀತಿಯಲ್ಲಿ ಸುದ್ದಿಯಾಗಿರುತ್ತಿದ್ದರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News