Kantara: “ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಒಂದು ಸೊಪ್ಪು ಸಿಕ್ತದೆ” ಅಂತ ಹೇಳಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ಈ ಸುಂದರಿ ಯಾರು ಗೊತ್ತಾ?

ಸದ್ಯ ಕನ್ನಡ ಚಿತ್ರರಂಗ ಎಲ್ಲೆಡೆ ತನ್ನ ಹೆಸರನ್ನು ಪಸರಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಸಿನಿಮಾಗಳು ಕೇವಲ ಕರ್ನಾಟಕವಲ್ಲ, ದೇಶವಲ್ಲ, ಜಗತ್ತೇ ಹಿಂತಿರುಗಿ ನೋಡುವಂತೆ ಮಾಡುತ್ತಿದೆ.

1 /5

ಸದ್ಯ ಕನ್ನಡ ಚಿತ್ರರಂಗ ಎಲ್ಲೆಡೆ ತನ್ನ ಹೆಸರನ್ನು ಪಸರಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಸಿನಿಮಾಗಳು ಕೇವಲ ಕರ್ನಾಟಕವಲ್ಲ, ದೇಶವಲ್ಲ, ಜಗತ್ತೇ ಹಿಂತಿರುಗಿ ನೋಡುವಂತೆ ಮಾಡುತ್ತಿದೆ.

2 /5

ಇನ್ನು ಇತ್ತೀಚೆಗೆ ತೆರೆಕಂಡ ಕಾಂತಾರ ಸಿನಿಮಾ, ಸಿನಿರಸಿಕರಿಗೆ ಮನರಂಜನೆ ಜೊತೆಗೆ ನಾಡು ನುಡಿ ಸಂಸ್ಕೃತಿಯ ಅನಾವರಣ ಮಾಡಿದೆ.  

3 /5

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಕಾಂತಾರ ಸಿನಿಮಾವನ್ನು ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಊಹಿಸಲೂ ಅಸಾಧ್ಯ ಎಂಬಂತೆ ನಟನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲ, ಪ್ರತಿಯೊಬ್ಬರ ಅಭಿನಯವೂ ಅಚ್ಚುಕಟ್ಟಾಗಿದ್ದು, ಸಿನಿ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಕ್ಕಂತಾಗಿದೆ.

4 /5

ಇನ್ನು ಈ ಸಿನಿಮಾದಲ್ಲಿ ಕಂಡುಬರುವ ಸಣ್ಣ ಪಾತ್ರವೂ ಸಹ ಸಖತ್ ಹೈಲೆಟ್ ಆಗಿರುವುದು ವಿಶೇಷ. ಅದರಲ್ಲೂ ಪಕ್ಕಾ ಹಳ್ಳಿಯ ಸೊಗಡಿನಲ್ಲಿಮ ಹಲ್ಲು ಉಬ್ಬಾಗಿರುವಂತೆ ಕಾಣುವ ಶೀಲಕ್ಕ ನಮ್ಮೆಲ್ಲರನ್ನು ನಕ್ಕು ಸುಸ್ತಾಗುವಂತೆ ಮಾಡಿದ್ದು ಸುಳ್ಳಲ್ಲ.

5 /5

“ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಒಂದು ಸೊಪ್ಪು ಸಿಕ್ತದೆ” ಎಂದು ಹೇಳುತ್ತಾ ಈ ಪಾತ್ರದಲ್ಲಿ ನಟಿಸಿದ ನಟಿಯ ಹೆಸರು ಚಂದ್ರಕಲಾ ಭಟ್.