ನನ್ನ ಮೇಲೆ ಗ್ಯಾಂಗ್‌ ರೇಪ್‌ʼಗೆ ಯತ್ನ ನಡೆದಿತ್ತು.. ‌ಸ್ಟಾರ್ ನಟಿಯ ಗಂಭೀರ ಆರೋಪ

Actress Charmila : ನನ್ನ ಮೇಲೆ ಗ್ಯಾಂಗ್‌ ರೇಪ್‌ʼಗೆ ಯತ್ನ ನಡೆದಿತ್ತು ಎಂದು ಸ್ಟಾರ್ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಮಲಯಾಳಂ ಚಿತ್ರರಂಗದ ಕರಾಳ ಮುಖ ಬಯಲಾಗಿದೆ. ಇದೀಗ ಗ್ಯಾಂಗ್‌ ರೇಪ್‌ ಯತ್ನದ ಬಗ್ಗೆ ಸ್ಟಾರ್‌ ನಟಿ ಗಂಭೀರ ಆರೋಪ ಮಾಡಿದ್ದಾರೆ. 

2 /9

35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ನಟಿ 1997ರಲ್ಲಿ ತಮ್ಮ ಮೇಲೆ ಗ್ಯಾಂಗ್‌ ರೇಪ್ ಯತ್ನ ನಡೆದಿತ್ತು ಎಂದು ಆರೋಪಿಸಿದ್ದು, ಈ ಹೇಳಿಕೆ ಹಲ್‌ಚಲ್‌ ಸೃಷ್ಟಿಸಿದೆ. 

3 /9

ನಿರ್ಮಾಪಕ ಎಂ.ಪಿ.ಮೋಹನನ್ ಮತ್ತು ಸಹಚರರು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಈ ನಟಿ ಆರೋಪಿಸಿದ್ದಾರೆ. 'ಹೊಂದಾಣಿಕೆಗೆ ಸಿದ್ಧ ಇದ್ದೀಯಾ?' ಎಂದು ನಿರ್ದೇಶಕರು ನನ್ನನ್ನು ಕೇಳಿದ್ದರು ಎಂದು ಹೇಳಿದ್ದಾರೆ. 

4 /9

ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ನಟಿ ಈ ಆರೋಪಗಳನ್ನು ಮಾಡಿದ್ದಾರೆ. 1997ರಲ್ಲಿ 'ಅರ್ಜುನನ್‌ ಪಿಳ್ಳೆಯುಂ ಅಂಜುಮಕ್ಕಳುಂ' ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ ಎಂದು ಬಹಿರಂಗ ಪಡಿಸಿದ್ದಾರೆ. 

5 /9

ನಾನು ಇದ್ದ ಹೋಟೆಲ್ ರೂಂಗೆ ನಿರ್ಮಾಪಕ ಎಂ.ಪಿ. ಮೋಹನನ್, ಪ್ರೊಡಕ್ಷನ್ ಮ್ಯಾನೇಜರ್ ಷಣ್ಮುಖನ್ ಮತ್ತು ಅವರ ಸ್ನೇಹಿತರು ಬಂದರು. ಅಲ್ಲಿ ನನ್ನ ಮೇಲೆ ಗ್ಯಾಂಗ್‌ರೇಪ್‌ಗೆ ಯತ್ನಿಸಿದರು ಎಂದು ಆರೋಪಿಸಿದ್ದಾರೆ.

6 /9

ನಾನು ತಪ್ಪಿಸಿಕೊಂಡು ಹೊರಬಂದೆ. ಬಳಿಕ ಆಟೋ ಹತ್ತಿ ಅಲ್ಲಿಂದ ಕೂಡಲೇ ಪರಾರಿ ಆದೆ. ಇದೇ ವೇಳೆ ನನ್ನ ಆಪ್ತನ ಮೇಲೆ ಸಹ ಹಲ್ಲೆ ನಡೆಸಿದರು. ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಇತರ ಮಹಿಳಯರ ಮೇಲೆ ಅತ್ಯಾಚಾರ ಎಸಗಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ. 

7 /9

ನಿರ್ದೇಶಕ ಹರಿಹರನ್ ಅವರು ನನಗೆ 'ಪರಿಣಯಂ' ಚಿತ್ರಕ್ಕೆ ಆಫರ್ ನೀಡಿದ್ದರು. ಇದರಲ್ಲಿ ನಾನು ನಟಿಸಲು ಅಡ್ಡಸ್ಟ್‌ಮೆಂಟ್‌ಗೆ ರೆಡೀನಾ? ಎಂದು ನಟ ವಿಷ್ಣು ಬಳಿ ಕೇಳಿದ್ದರು ಎಂದು ನಟಿ ಹೇಳಿದ್ದಾರೆ. 

8 /9

ನಾನು 'ರೆಡಿಯಿಲ್ಲ' ಎಂದೆ. ಕೂಡಲೇ ನನ್ನನ್ನು ಈ ಸಿನಿಮಾದಿಂದ ಹೊರಗಿಟ್ಟರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ನಟ ವಿಷ್ಣು 'ಚರ್ಮಿಳಾಗೆ ಅಡ್ಡಸ್ಟ್ ಮಾಡಿಕೋ ಎಂದಿದ್ದು ನಿಜ' ಎಂದು ತಿಳಿಸಿದ್ದಾರೆ. 

9 /9

ನಟಿ ಚರ್ಮಿಳಾ ಈ ಗಂಭೀರ ಆರೋಪವನ್ನು ಮಾಡಿದ್ದಾರೆ. ಬಹುಭಾಷಾ ನಟಿ ಚರ್ಮಿಳಾ 2010ರಲ್ಲಿ ಬಂದ 'ಚಂದುಳ್ಳಿ ಚೆಲುವೆ' ಎಂಬ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದರು. ಚರ್ಮಿಳಾ ಮೂಲತಃ ಮಲಯಾಳಂ ಸಿನಿ ಇಂಡಸ್ಟ್ರಿಯವರಾಗಿದ್ದಾರೆ.