UPSC Success Story: ಕೋಚಿಂಗ್ ಇಲ್ಲದೆ ಕೇವಲ 22ನೇ ವಯಸ್ಸಿನಲ್ಲಿ IAS ಆದ ಚಂದ್ರಜ್ಯೋತಿ ಸಿಂಗ್!

IAS Chandrajyoti Singh UPSC Success Story: ಚಂದ್ರಜ್ಯೋತಿ ಅವರು ಚಂಡೀಗಢದ ಭವನ ವಿದ್ಯಾಲಯದಿಂದ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 95.4% ಅಂಕ ಮತ್ತು ಜಲಂಧರ್‌ನ ಅಪೀಜಯ್ ಶಾಲೆಯಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 10 CGPA ಅಂಕ ಗಳಿಸಿದ್ದರು.

IAS Chandrajyoti Singh UPSC Success Story: ಪದವಿ ಪೂರ್ಣಗೊಳಿಸಿದ ನಂತರ IAS ಅಧಿಕಾರಿ ಚಂದ್ರಜ್ಯೋತಿ ಸಿಂಗ್ ಅವರು UPSCಗೆ ತಯಾರಿ ಮಾಡಲು ಒಂದು ವರ್ಷ ತೆಗೆದುಕೊಂಡರು. ಈ ವೇಳೆ ಅವರು ಯಾವುದೇ ತರಬೇತಿಯಿಲ್ಲದೆ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾದರು. ಪ್ರತಿಯೊಬ್ಬರಿಗೂ ಮಾದರಿಯಾಗಬಲ್ಲ ಅವರ ಯಶಸ್ಸಿನ ಕಥೆ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

UPSC ನಾಗರಿಕ ಸೇವೆಗಳ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ದೇಶದಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಂಪೂರ್ಣ ಶ್ರಮ ಮತ್ತು ಕಾರ್ಯತಂತ್ರದ ಯೋಜನೆಯೊಂದಿಗೆ ತಯಾರಿ ನಡೆಸುತ್ತಾರೆ. ಆದರೆ ಅವರಲ್ಲಿ ಕೆಲವೇ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೆ ಮತ್ತು ಐಎಎಸ್ ಮತ್ತು ಐಪಿಎಸ್ ಸೇರಿದಂತೆ ಇತರ ಅಧಿಕಾರಿಗಳ ಹುದ್ದೆಯನ್ನು ಪಡೆಯಲು ಸಮರ್ಥರಾಗುತ್ತಾರೆ.

2 /6

ಅನೇಕ ಅಭ್ಯರ್ಥಿಗಳು UPSC ಪರೀಕ್ಷೆಗೆ ತಯಾರಾಗಲು ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುತ್ತಾರೆ. ಕೆಲವು ಅಭ್ಯರ್ಥಿಗಳು ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಇಂದು ನಾವು ಅಂತಹ ಒಬ್ಬ ಅಭ್ಯರ್ಥಿ, IAS ಚಂದ್ರಜ್ಯೋತಿ ಸಿಂಗ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಸಾಧಕಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ.

3 /6

ಅಂದಹಾಗೆ ಚಂದ್ರಜ್ಯೋತಿ ಅವರು ಮಾಜಿ ಸೇನಾ ಅಧಿಕಾರಿಗಳ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಲೆಫ್ಟಿನೆಂಟ್ ಕರ್ನಲ್ ಮೀನಾ ಸಿಂಗ್ ಮತ್ತು ಅವರ ತಂದೆ ಕರ್ನಲ್ ದಲ್ಬಾರಾ ಸಿಂಗ್ ಸೈನ್ಯದ ವಿಕಿರಣಶಾಸ್ತ್ರಜ್ಞರಾಗಿದ್ದರು. ಸೇನೆಯ ಅಧಿಕಾರಿಗಳಾದ ಆಕೆಯ ಪೋಷಕರು ಚಂದ್ರಜ್ಯೋತಿ ಜೀವನದಲ್ಲಿ ಯಶಸ್ವಿಯಾಗಲು ಯಾವಾಗಲೂ ಸ್ಫೂರ್ತಿ ನೀಡುತ್ತಿದ್ದರು.

4 /6

ಚಂದ್ರಜ್ಯೋತಿ ಅವರು ಚಂಡೀಗಢದ ಭವನ ವಿದ್ಯಾಲಯದಿಂದ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 95.4% ಅಂಕಗಳನ್ನು ಮತ್ತು ಜಲಂಧರ್‌ನ ಅಪೀಜಯ್ ಶಾಲೆಯಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 10 CGPA ಅಂಕಗಳನ್ನು ಗಳಿಸಿದ್ದರು. ಅವರು ತಮ್ಮ ಅಧ್ಯಯನವನ್ನು ಮುಂದುವರೆಸಿದರು.  2018ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ 7.75ರ CGPA ಮತ್ತು ಇತಿಹಾಸದಲ್ಲಿ ಹಾನರ್ ಪದವಿ ಪಡೆದುಕೊಂಡರು.

5 /6

ಪದವಿ ಹಂತದ ಅಧ್ಯಯನದ ಬಳಿಕ 2018ರಲ್ಲಿ ತನ್ನ UPSC ತಯಾರಿ ಪ್ರಾರಂಭಿಸುವ ಮೊದಲು ಚಂದ್ರಜ್ಯೋತಿ ಒಂದು ವರ್ಷ ರಜೆ ತೆಗೆದುಕೊಂಡಿದ್ದರು. ಕಟ್ಟುನಿಟ್ಟಾದ ಯೋಜನೆ ಮತ್ತು ಅಚಲವಾದ ಬದ್ಧತೆಯಿಂದ ಅವರು UPSC ಪರೀಕ್ಷೆಯನ್ನು ಭೇದಿಸಿದ್ದು ಮಾತ್ರವಲ್ಲದೆ ಅಖಿಲ ಭಾರತ 28ನೇ ರ್ಯಾಂಕ್ ಗಳಿಸಿದರು. ಈ ಪ್ರತಿಷ್ಠಿತ ಶ್ರೇಣಿಯೊಂದಿಗೆ ಚಂದ್ರಜ್ಯೋತಿ ಅವರಿಗೆ ಐಎಎಸ್ ಹುದ್ದೆ ಲಭಿಸಿದೆ. ಅವರ ಯಶಸ್ಸಿನ ಕಥೆಯು ಅನೇಕ UPSC ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ. ತೋರಿಕೆಯಲ್ಲಿ ಅಸಾಧ್ಯವೆಂದು ತೋರುವ UPSC ಪರೀಕ್ಷೆಯನ್ನು ಪರಿಶ್ರಮ ಮತ್ತು ಉತ್ತಮ ಯೋಜನೆಯಿಂದ ಉತ್ತೀರ್ಣರಾಗಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ.

6 /6

ಚಂದ್ರಜ್ಯೋತಿ ಸಿಂಗ್ 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದರು. ತಯಾರಿಯ ಸಮಯದಲ್ಲಿ ಸರಳವಾದ ವಿಷಯಗಳನ್ನು ಅನುಸರಿಸಿದ ಚಂದ್ರಜ್ಯೋತಿ ಅವರು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದರು. ಪ್ರತಿದಿನ ಒಂದರಿಂದ ಎರಡು ಗಂಟೆಗಳ ಕಾಲ ಪತ್ರಿಕೆಗಳನ್ನು ಓದಲು ನಿರ್ಧರಿಸಿದ್ದರು. ಐಎಎಸ್ ಅಧಿಕಾರಿ ಚಂದ್ರಜ್ಯೋತಿ ಅವರು ಅಣಕು ಪರೀಕ್ಷೆಗಳತ್ತ ಗಮನಹರಿಸಿದ್ದರಿಂದ ಸಾಪ್ತಾಹಿಕ ಪರಿಷ್ಕರಣೆ ಅವರಿಗೆ ಸಹಾಯ ಮಾಡಿತು. ಇದು ಅವರ ಯಶಸ್ಸಿನ ಕಥೆ. ಉತ್ತಮ ಯೋಜನೆ ಮತ್ತು ಕಠಿಣ ಪರಿಶ್ರಮದಿಂದ ಪ್ರತಿಯೊಬ್ಬರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.