ದೌರ್ಬಲ್ಯ ಮೆಟ್ಟಿನಿಂತ ಶ್ರೇಯಸ್ ಅಯ್ಯರ್: ಯಶಸ್ಸಿನ ಗುಟ್ಟು ರಟ್ಟು ಮಾಡಿದ್ರು ದಾಖಲೆ ವೀರ

India vs Bangladesh 2nd Test: ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 87 ರನ್‌ಗಳ ಇನ್ನಿಂಗ್ಸ್ ಗಳಿಸಿದರು. ಈ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 314 ರನ್ ಗಳಿಸಿತ್ತು. ಎರಡನೇ ದಿನದ ಆಟದ ಅಂತ್ಯದ ಬಳಿಕ ಮಾತನಾಡಿದ ಅಯ್ಯರ್, ತಮ್ಮ ದೌರ್ಬಲ್ಯವನ್ನು ಹೇಗೆ ಸುಧಾರಿಸಿಕೊಂಡರು ಎಂದು ಹೇಳಿದರು.

1 /5

India vs Bangladesh 2nd Test: ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 87 ರನ್‌ಗಳ ಇನ್ನಿಂಗ್ಸ್ ಗಳಿಸಿದರು. ಈ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 314 ರನ್ ಗಳಿಸಿತ್ತು. ಎರಡನೇ ದಿನದ ಆಟದ ಅಂತ್ಯದ ಬಳಿಕ ಮಾತನಾಡಿದ ಅಯ್ಯರ್, ತಮ್ಮ ದೌರ್ಬಲ್ಯವನ್ನು ಹೇಗೆ ಸುಧಾರಿಸಿಕೊಂಡರು ಎಂದು ಹೇಳಿದರು.

2 /5

ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಶ್ರೇಯಸ್ ಅಯ್ಯರ್ 105 ಎಸೆತಗಳಲ್ಲಿ 87 ರನ್ ಗಳಿಸಿದರು. ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಅವಧಿಯಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ಅಯ್ಯರ್ ವಿರುದ್ಧ ಶಾರ್ಟ್ ಬಾಲ್‌ಗಳನ್ನು ಬಳಸಿದರೂ ಸಹ ಅದನ್ನು ದೃಢವಾಗಿ ಎದುರಿಸಿದರು.

3 /5

ಅಯ್ಯರ್ 5ನೇ ವಿಕೆಟ್‌ಗೆ ರಿಷಬ್ ಪಂತ್ ಜೊತೆ 159 ರನ್ ಜೊತೆಯಾಟ ನಡೆಸಿದರು. ಪಂತ್ ಶತಕ ವಂಚಿತರಾದರು. 105 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ, 5 ಸಿಕ್ಸರ್‌ಗಳ ನೆರವಿನಿಂದ 93 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವ ಭಾರತೀಯ ಬ್ಯಾಟ್ಸ್‌ಮನ್‌ಗೂ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ.

4 /5

ಶ್ರೇಯಸ್ ಅಯ್ಯರ್ ಸಾಮಾನ್ಯವಾಗಿ ಶಾರ್ಟ್ ಪಿಚ್ ಬಾಲ್ ವಿರುದ್ಧ ಆಡಲು ತೊಂದರೆ ಅನುಭವಿಸುತ್ತಾರೆ. ಆದರೆ ಈ ಬಾರಿ ಈ ವಿಚಾರದಲ್ಲಿಯೇ ಆಟವನ್ನು ಸುಧಾರಿಸುವತ್ತ ಗಮನ ಹರಿಸಿದ್ದಾರೆ. ಅದು ಫಲ ನೀಡಿದೆ ಎಂದು ಹೇಳಿದರು.

5 /5

ಶುಕ್ರವಾರ ಎರಡನೇ ದಿನದಾಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಯ್ಯರ್, "ನಾನು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ, ಬಾಂಗ್ಲಾದೇಶದ ಬೌಲರ್‌ಗಳು ಶಾಟ್ ಬಾಲ್‌ಗಳಿಂದ ನನ್ನನ್ನು ಗುರಿಯಾಗಿಸಲು ಪ್ರಾರಂಭಿಸಿದರು." ನನಗೆ ಶಾರ್ಟ್ ಬಾಲ್ ಸಮಸ್ಯೆ ಇದೆ ಎಂದು ಅನೇಕರು ಹೇಳುತ್ತಿದ್ದರು. ಈ ವಿಷಯ ನನ್ನ ಮನಸ್ಸಿನಲ್ಲಿ ಕುಳಿತಿತ್ತು” ಎಂದು ಹೇಳಿದರು.