ಯುವಜನೋತ್ಸವದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಎಲ್ಲೆಡೆಯೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮೋದಿಗೆ ಅಭಿಮಾನಿಯೊಬ್ಬ ವಿಶೇಷ ಸ್ವಾಗತ ಕೋರಲು ಮುಂದಾಗಿದ್ದಾನೆ. ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ರಂಗೋಲಿಯಲ್ಲಿ ನರೇಂದ್ರ ಮೋದಿಯವರ ಚಿತ್ರ ಬಿಡಿಸುವ ಮೂಲಕ ಕಲಾವಿದ ದಿನೇಶ್ ಚಿಲ್ಲಾಳ ತನ್ನ ಕೈಚಳಕವನ್ನು ಪ್ರದರ್ಶನ ಮಾಡಿದ್ದಾನೆ.