ಮಳೆ ಬಂದರೆ ಸೋರುವ ಪರಿಸ್ಥಿತಿಯಲ್ಲಿ ಠಾಣೆ

  • Zee Media Bureau
  • Oct 21, 2024, 03:15 PM IST

ಗೃಹ ಸಚಿವ ಡಾ.ಜಿ.ಪರಮೇಶ್ವರ ತವರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೋಂದು ಸಣ್ಣ ಮಳೆ ಬಂದರೆ ಸೋರುವ ಪರಿಸ್ಥಿತಿಯಲ್ಲಿದೆ. ತುಮಕೂರು ನಗರದಲ್ಲಿನ ಜಯನಗರ ಪೊಲೀಸ್ ಠಾಣೆಯ ಪರಿಸ್ಥಿತಿ ಕಂಡು ಸಾರ್ವಜನಿಕರೆ ಇಂದೆಂಥ ಸ್ಥಿತಿ ಎಂದು ಮರುಗಿದ್ದಾರೆ. ಸದ್ಯ ಸುಸಜ್ಜಿತವಾದ ಕಟ್ಟಡವಿಲ್ಲದೆ ನಗರದ ಜಯನಗರ ಪೊಲೀಸ್ ಠಾಣೆ ಸೋರುವ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯ ಮಳೆಯ ನೀರು ಠಾಣೆಯ ಒಳಗೆ ನಿಲ್ಲುವಂತಾಗಿದೆ. ಠಾಣೆಯಲ್ಲಿನ ಕಂಪ್ಯೂಟರ್‌ಗಳು, ಯುಪಿಎಸ್ ಬ್ಯಾಟರಿಗಳು ಸೇರಿದಂತೆ ಕಡತಗಳು ಮಳೆ ನೀರಿಗೆ ತೊಯ್ದು ಹೋಗುವಂತಾಗಿದೆ.

Trending News