ಬಾಗಲಕೋಟೆ: ಕಾಲಿನ ಮೂಳೆ ಮುರಿದು ನರಳುತ್ತಿದ್ದ ಮಂಗನಿಗೆ ಶಸ್ತ್ರ ಚಿಕಿತ್ಸೆ

ಕಾಲಿನ ಮೂಳೆ ಮುರಿದು ನರಳುತ್ತಿದ್ದ ಮಂಗನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮಂಗನ ನರುಳಾಟ ಕಂಡು ಮರುಗಿದ ಸ್ಥಳೀಯರು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ಪಶು ವೈದ್ಯಕೀಯ ಪರೀಕ್ಷಕ ಬಿ.ಜಿ.ಬಿಳ್ಳೂರ ಮಂಗನಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಎರಡು ಗಂಟೆಯ ಬಳಿಕ ಕೋತಿ ಓಡಾಡಿದೆ. ಬಳಿಕ ಗ್ರಾಮದ ಮಹಾಂತೇಶ ಕಲ್ಯಾಣ ಮಂಟಪದಲ್ಲಿದ್ದ ಮಂಗಗಳ ಗುಂಪು ಸೇರಿಕೊಂಡಿದೆ. ಈ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗುಡೂರ ಎಸ್ ಸಿ ಗ್ರಾಮದಲ್ಲಿ ನಡೆದಿದೆ. 

  • Zee Media Bureau
  • May 24, 2022, 06:33 PM IST

ಬಾಗಲಕೋಟೆ: ಕಾಲಿನ ಮೂಳೆ ಮುರಿದು ನರಳುತ್ತಿದ್ದ ಮಂಗನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮಂಗನ ನರುಳಾಟ ಕಂಡು ಮರುಗಿದ ಸ್ಥಳೀಯರು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ಪಶು ವೈದ್ಯಕೀಯ ಪರೀಕ್ಷಕ ಬಿ.ಜಿ.ಬಿಳ್ಳೂರ ಮಂಗನಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಎರಡು ಗಂಟೆಯ ಬಳಿಕ ಕೋತಿ ಓಡಾಡಿದೆ. ಬಳಿಕ ಗ್ರಾಮದ ಮಹಾಂತೇಶ ಕಲ್ಯಾಣ ಮಂಟಪದಲ್ಲಿದ್ದ ಮಂಗಗಳ ಗುಂಪು ಸೇರಿಕೊಂಡಿದೆ. ಈ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗುಡೂರ ಎಸ್ ಸಿ ಗ್ರಾಮದಲ್ಲಿ ನಡೆದಿದೆ. 

Trending News