ತೆಲಂಗಾಣದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌..! ಸರ್ಕಾರ ರಚನೆಗೆ ʼಡಿಕೆಶಿ ಮಾಸ್ಟರ್‌ ಪ್ಲಾನ್‌ʼ

Telangana Assembly Election Results 2023 Live : ತೆಲಂಗಾಣ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಅಲ್ಲಿ ಕೈ ಪಡೆ ಭಾರಿ ಮುನ್ನಡೆಯನ್ನು ಕಾಪಾಡಿಕೊಂಡು ಮುನ್ನುಗ್ಗುತ್ತಿದೆ. ಇದೇ ರೀತಿ ಮುಂದುವರೆದರೆ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಬಹುದು. ಇಲ್ಲವಾದರೆ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮಾಸ್ಟರ್‌ ಪ್ಲಾನ್‌ ಜಾರಿಗೆ ತರಲು ರೆಡಿಯಾಗಿದ್ದಾರೆ.

Written by - Krishna N K | Last Updated : Dec 3, 2023, 09:08 AM IST
  • ತೆಲಂಗಾಣ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
  • ಕೈ ಪಡೆ ಭಾರಿ ಮುನ್ನಡೆಯನ್ನು ಕಾಪಾಡಿಕೊಂಡು ಮುನ್ನುಗ್ಗುತ್ತಿದೆ.
  • ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮಾಸ್ಟರ್‌ ಪ್ಲಾನ್‌ ಜಾರಿಗೆ ತರಲು ರೆಡಿ.
ತೆಲಂಗಾಣದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌..! ಸರ್ಕಾರ ರಚನೆಗೆ ʼಡಿಕೆಶಿ ಮಾಸ್ಟರ್‌ ಪ್ಲಾನ್‌ʼ title=

TS Election Results 2023 : ತೆಲಂಗಾಣ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆಯಿಂದ ಪ್ರಾರಂಭವಾಗಿದೆ. ಸಧ್ಯ 57 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಭರ್ಜರಿ ಮುನ್ನೆಡೆ ಸಾಧಿಸಿದೆ. ಇತ್ತೀಚಿಗೆ ಸಮೀಕ್ಷೆಗಳಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದಾಗಿ ವರದಿಯಾಗಿತ್ತು. ಸಧ್ಯ ಕೈ ಮುನ್ನೆಡೆ ನೋಡಿದ್ರೆ, ಪಕ್ಕಾ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ ಜಯಸಾಧಿಸುತ್ತೆ ಅನಿಸುತ್ತಿದೆ. ಅಲ್ಲದೆ, ವಿಜೇತ ಶಾಸಕರು ಕೈ ತಪ್ಪದಿರು, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೂಕ್ತ ಕಾರ್ಯತಂತ್ರಗಳನ್ನು ಸಿದ್ಧಪಡಿಸಿದೆ.

ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಅದರಂತೆ ಆದರೆ ಮತ ಎಣಿಕೆ ಮುಗಿಯುವವರೆಗೆ ಮತ್ತು ಅಂತ್ಯದ ನಂತರ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಸಿದ್ಧಪಡಿಸಿದೆ. ಈಗಾಗಲೇ ತೆಲಂಗಾಣ ಕಾಂಗ್ರೆಸ್ ನಾಯಕತ್ವ ವಹಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರರು ಹೈದರಾಬಾದ್ ತಲುಪಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ವಾಸ್ತವ ಸಭೆ ನಡೆಸಲಾಯಿತು. ಅಭ್ಯರ್ಥಿಗಳು ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೂ ಅಲ್ಲೇ ಇದ್ದು ಫಲಿತಾಂಶದ ಆಧಾರದ ಮೇಲೆ ಅಲ್ಲಿಂದ ತೆರಳಲು ವ್ಯವಸ್ಥೆ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಕೂಡ ಅದನ್ನೇ ಸೂಚಿಸಿದಂತಿದೆ. 

ಇದನ್ನೂ ಓದಿ: I.N.D.I.A ಮೈತ್ರಿಕೂಟಕ್ಕೆ ನಾಲ್ಕು ರಾಜ್ಯಗಳ ಫಲಿತಾಂಶಗಳು ಎಷ್ಟು ಮುಖ್ಯ?

ಅದರಲ್ಲೂ ಮ್ಯಾಜಿಕ್ ಫಿಗರ್ ಬಂದರೆ ಶಾಸಕರು ಕೈ ತಪ್ಪಿ ಹೋಗದಂತೆ ತಡೆಯಲು ಪಕ್ಷ ಸಿದ್ಧತೆ ನಡೆಸಿದೆ. ಅದಕ್ಕಾಗಿ ಎರಡು ಕಾರ್ಯತಂತ್ರಗಳನ್ನು ಸಿದ್ದಪಡಿಸಿದೆ. ಮ್ಯಾಜಿಕ್ ಫಿಗರ್ ಇದ್ದರೆ ಪ್ಲಾನ್ ಎ, ಮ್ಯಾಜಿಕ್ ಫಿಗರ್ ಇಲ್ಲದಿದ್ದರೆ ಪ್ಲಾನ್ ಬಿ ಸಿದ್ಧಪಡಿಸಲಾಗುತ್ತದೆ. ಸ್ಪಷ್ಟ ಬಹುಮತ ಬಂದರೆ ಎಲ್ಲ ಅಭ್ಯರ್ಥಿಗಳನ್ನು ಹೈದರಾಬಾದ್‌ಗೆ ಕರೆಸಿ ಡಿಕೆಶಿ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಬಳಿಕ ದಿಲ್ಲಿಯಲ್ಲಿ ಮುಖ್ಯ ನಾಯಕರ ಜತೆಗೂಡಿ ಸಿಎಲ್‌ಪಿ ದಿನಾಂಕ ನಿರ್ಧಾರವಾಗಲಿದೆ. ಸಿಎಲ್‌ಪಿ ನಾಯಕನ ಆಯ್ಕೆಯ ಜವಾಬ್ದಾರಿಯೂ ನಾಯಕತ್ವದ ವಿವೇಚನೆಗೆ ಸೇರಿದೆ. 

ಮ್ಯಾಜಿಕ್ ಫಿಗರ್ ತಲುಪುವಲ್ಲಿ ಸಾಧ್ಯವಾಗದೇ ಇದ್ದರೆ, ಎರಡನೇ ಯೋಜನೆ ಜಾರಿಯಾಗಲಿದೆ. ಗೆದ್ದ ಅಭ್ಯರ್ಥಿಗಳನ್ನು ಬೆಂಗಳೂರಿಗೆ ಕರೆತರಲಾಗುವುದು. ಏಕೆಂದರೆ ವಿರೋಧ ಪಕ್ಷಗಳಿಗೆ ಸಣ್ಣ ಅವಕಾಶ ಸಿಕ್ಕರು ಶಾಸಕರು ಕೈ ತಪ್ಪುವ ಸಾಧ್ಯತೆ ಇದೆ. ಅಲ್ಲದೆ, ಬಿಆರ್‌ಎಸ್‌-ಬಿಜೆಪಿ ಶಾಸಕರನ್ನು ಹೈಜಾಕ್‌ ಮಾಡಲಿದೆ ಎಂಬ ಸುದ್ದಿಯೂ ಇದ್ದು, ಕಾಂಗ್ರೆಸ್‌ ಪಕ್ಕಾ ಜಾಗೃತವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News