ಇಂದು ವರುಣಾ ಕ್ಷೇತ್ರದಲ್ಲಿ ಅಮಿತ್ ಶಾ

ಮೇ. 7ಕ್ಕೆ ನಿಗದಿಯಾಗಿದ್ದ ಪ್ರವಾಸವನ್ನು ಎರಡು ದಿನ ಮುಂಚಿತವಾಗಿ ನಿಗದಿ ಪಡಿಸಿದ ಶಾ.

Last Updated : May 5, 2018, 08:34 AM IST
ಇಂದು ವರುಣಾ ಕ್ಷೇತ್ರದಲ್ಲಿ ಅಮಿತ್ ಶಾ title=

ಮೈಸೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೃಷ್ಠಿ ದಿಢೀರನೇ ವರುಣಾ ಕ್ಷೇತ್ರದತ್ತ ನೆಟ್ಟಿದೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ. 7ಕ್ಕೆ ನಿಗದಿಯಾಗಿದ್ದ ಮೈಸೂರು ಪ್ರವಾಸವನ್ನು ಶಾ ಎರಡು ದಿನ ಮುಂಚಿತವಾಗಿ ನಿಗದಿ ಪಡಿಸಿ ರಾಜ್ಯ ಬಿಜೆಪಿ ಘಟಕಕ್ಕೆ ಮಾಹಿತಿ ರವಾನಿಸಿದ್ದಾರೆ.

ವರುಣಾದಿಂದಲೇ ರೋಡ್ ಶೋ ಮೂಲಕ ಪ್ರವಾಸ ಆರಂಭಿಸುವುದಾಗಿ ಶಾ ತಿಳಿಸಿದ್ದು, ರಾಜ್ಯ ಬಿಜೆಪಿ ಒಂದು ದಿನದ ಅವಧಿಯಲ್ಲಿ ಅಮಿತ್ ಷಾ ರೋಡ್ ಶೋಗೆ ತರಾತುರಿಯ ಸಿದ್ಧತೆ ನಡೆಸಿದೆ. ಇನ್ನು ಈ ಮೊದಲು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿ ನಂತರ ಟಿಕೆಟ್ ಕೈ ತಪ್ಪಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕೆಂಡಾಮಂಡಲರಾಗಿರುವ ಬಿಜೆಪಿ ಕಾರ್ಯಕರ್ತರು ಶಾ ಗೆ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Trending News