ಬೆಂಗಳೂರು: ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಇಡೀ ಪ್ರಸಂಗದ ಖಳನಾಯಕ ಎಂದು ಸಂಬೋಧಿಸಿದರು. ತಕ್ಷಣ ಸ್ಪಷ್ಟನೆ ನೀಡಿದ ಅವರು, ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಆಜ್ಞೆಯಂತೆ ಕೆಲಸ ಮಾಡಿದ್ದೇನೆ. ಪಕ್ಷದ ನಾಯಕರ ಆಜ್ಞೆ ಪಾಲಿಸುವುದು ನನ್ನ ಕರ್ತವ್ಯವೇ ವಿನಃ ನಾನು ಖಳನಾಯಕನ ಕೆಲಸ ಮಾಡಿಲ್ಲ ಎಂದು ತಿಳಿಸಿದರು.
ಮದ್ಯ ಪ್ರವೇಶಕ್ಕೆ ಮುಂದಾದ ಡಿ.ಕೆ.ಶಿವಕುಮಾರ್ ಅವರಿಗೆ, ಅವಕಾಶ ನೀಡದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಈ ಎಲ್ಲಾ ಬೆಳವಣಿಗೆಗೆ ಖಳನಾಯಕ ನೀವೆ. ನೀವು ಆಮೇಲೆ ಮಾತಾಡಿ ಎಂದರು. ಖಳನಾಯಕನ ಪಟ್ಟ ಸ್ವೀಕರಿಸುವುದಿಲ್ಲ ಎಂದು ಎದ್ದು ನಿಂತ ಡಿ.ಕೆ. ಶಿವಕುಮಾರ್ ಅವರನ್ನು ಸಮಾಧಾನದಿಂದ ಮಾತನಾಡಿಸಿದ ಬಿ.ಎಸ್.ವೈ, ನೀವು ಮುಂದೆ ಮುಖ್ಯ ಮಂತ್ರಿಯಾಗುವವರು ನಿಮ್ಮನ್ನು ಖಳನಾಯಕನೆಂದು ಹೇಳಲು ಸಾಧ್ಯವೇ ಎಂದರು.
ನೀವು ಎಲ್ಲರಿಗೂ ಹಿರೋ ಆಗಲು ಸಾಧ್ಯವಿಲ್ಲ
ಈ ಮಧ್ಯೆ ಮಾತನಾಡಿದ ಸಭಾಧ್ಯಕ್ಷ ರಮೇಶ್ ಕುಮಾರ್, ನೀವು ಒಬ್ಬರಿಗೆ ನಾಯಕನಾದರೆ, ಇನ್ನೊಬ್ಬರಿಗೆ ಖಳನಾಯಕನಾಗುತ್ತೀರಿ. ಎಲ್ಲರಿಗೂ ಹಿರೋ ಆಗಲು ಸಾಧ್ಯವಿಲ್ಲ ಎಂದರು.