ರೈತರ ಗಮನಕ್ಕೆ, ನಿಮಗೆ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ ₹3,000 ಪಿಂಚಣಿ!

ಈ ಯೋಜನೆಯಲ್ಲಿ ಆಯ್ಕೆಯಾದ ರೈತರಿಗೆ ಪ್ರತಿ ವರ್ಷ 2000 ರೂ.ನಂತೆ ಕಂತು ನೀಡಲಾಗುತ್ತಿದೆ. ಹೀಗೆ ಸರ್ಕಾರ ಮತ್ತೊಂದು ಯೋಜನೆಯ ಮೂಲಕ ರೈತರಿಗೆ ತಿಂಗಳಿಗೆ 3,000 ರೂ. ನೀಡಲಾಗುತ್ತಿದೆ. ಹಾಗಿದ್ರೆ ಯಾವುದು ಅದು ಯೋಜನೆ? ಇಲ್ಲಿದೆ ನೋಡಿ...

Written by - Channabasava A Kashinakunti | Last Updated : Sep 16, 2022, 01:41 PM IST
  • ಕೇಂದ್ರ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದ್ದು
  • ಅದರ ಲಾಭವನ್ನು ಈಗ ದೇಶದ ಲಕ್ಷಾಂತರ ರೈತರು ಪಡೆಯುತ್ತಿದ್ದಾರೆ
  • ಏನಿದು ಪಿಎಂ ಕಿಸಾನ್ ಮಂದನ್ ಯೋಜನೆ?
ರೈತರ ಗಮನಕ್ಕೆ, ನಿಮಗೆ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ ₹3,000 ಪಿಂಚಣಿ! title=

ನವದೆಹಲಿ : ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದ್ದು, ಅದರ ಲಾಭವನ್ನು ಈಗ ದೇಶದ ಲಕ್ಷಾಂತರ ರೈತರು ಪಡೆಯುತ್ತಿದ್ದಾರೆ. ಈ ಯೋಜನೆಗಳಲ್ಲಿ ಒಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಲ್ಲಿ ಆಯ್ಕೆಯಾದ ರೈತರಿಗೆ ಪ್ರತಿ ವರ್ಷ 2000 ರೂ.ನಂತೆ ಕಂತು ನೀಡಲಾಗುತ್ತಿದೆ. ಹೀಗೆ ಸರ್ಕಾರ ಮತ್ತೊಂದು ಯೋಜನೆಯ ಮೂಲಕ ರೈತರಿಗೆ ತಿಂಗಳಿಗೆ 3,000 ರೂ. ನೀಡಲಾಗುತ್ತಿದೆ. ಹಾಗಿದ್ರೆ ಯಾವುದು ಅದು ಯೋಜನೆ? ಇಲ್ಲಿದೆ ನೋಡಿ...

ಏನಿದು ಪಿಎಂ ಕಿಸಾನ್ ಮಂದನ್ ಯೋಜನೆ?

ಪಿಎಂ ಕಿಸಾನ್ ಮಂದನ್ ಯೋಜನೆಯು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಕಲ್ಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಾಗಿದೆ. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಅವರು ತಮ್ಮ ವಯಸ್ಸಿನ ಪ್ರಕಾರ ಪ್ರತಿ ತಿಂಗಳು 55 ರಿಂದ 200 ರೂ.ವರೆಗೆ ಕಂತುಗಳನ್ನು ಸರ್ಕಾರಿ ಖಾತೆಗೆ ಜಮಾ ಮಾಡಬೇಕು.

ಇದನ್ನೂ ಓದಿ : PM Kisan ರೈತರಿಗೆ ಸಿಹಿ ಸುದ್ದಿ : ಈ ದಿನ ನಿಮ್ಮ ಖಾತೆಗೆ ಬರಲಿದೆ 12ನೇ ಕಂತಿನ ಹಣ!

ಈ ಕಂತುಗಳನ್ನು 60 ವರ್ಷ ವಯಸ್ಸಿನವರೆಗೆ ಪಾವತಿಸಬೇಕು. ರೈತನ ವಯಸ್ಸು 60 ವರ್ಷ ದಾಟಿದಾಗ ಕಂತುಗಳು ಸ್ವಯಂಚಾಲಿತವಾಗಿ ನಿಲ್ಲುತ್ತವೆ. ಇದಾದ ನಂತರ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡ ರೈತರಿಗೆ ಸರ್ಕಾರದಿಂದ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ.

ನೋಂದಣಿ ಪ್ರಕ್ರಿಯೆ

ಪಿಎಂ ಕಿಸಾನ್ ಮಂದನ್ ಯೋಜನೆಗೆ ಹೆಸರನ್ನು ನೋಂದಾಯಿಸಲು, ನೀವು ಮೊದಲು ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನೋಂದಣಿಯ ನಂತರ, ನೀವು ಪಿಎಂ ಕಿಸಾನ್ ಮಂದನ್ ಯೋಜನೆಗೆ ಹೆಸರನ್ನು ನೋಂದಣಿ ಮಾಡಲು ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅರ್ಜಿ ಸಲ್ಲಿಸಬೇಕು. ಈ ಫಾರ್ಮ್ ಅನ್ನು ನೀವು ಭರ್ತಿ ಮಾಡಿದ ತಕ್ಷಣ, ನಿಮ್ಮ ಕಂತುಗಳು ಮಾಂಧನ್ ಪಿಂಚಣಿ ಯೋಜನೆಗೆ ಪ್ರತಿ ತಿಂಗಳು ಕಡಿತಗೊಳ್ಳಲು ಪ್ರಾರಂಭಿಸುತ್ತವೆ.

ಕಂತುಗಳು

ಕುತೂಹಲಕಾರಿ ಸಂಗತಿಯೆಂದರೆ ನೀವು ಈ ಕಂತುಗಳನ್ನು ಪಾವತಿಸಬೇಕಾಗಿಲ್ಲ, ಅದನ್ನು ಸರ್ಕಾರ ನೀಡುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಮನ್ ಧನ್ ಯೋಜನೆಯ ಕಂತುಗಳನ್ನು ನೀವು ಒಂದು ವರ್ಷದಲ್ಲಿ ಪಡೆಯುವ 6 ಸಾವಿರ ರೂಪಾಯಿಗಳಿಂದ ಕಡಿತಗೊಳಿಸಲಾಗುತ್ತದೆ ಮತ್ತು ಅದರ ನಂತರ, ನೀವು ಉಳಿದ ಮೊತ್ತವನ್ನು ಪಡೆಯುತ್ತೀರಿ. ನಿಮಗೆ 60 ವರ್ಷ ವಯಸ್ಸಾದಾಗ ಸರಕಾರದಿಂದ ತಿಂಗಳಿಗೆ 3-3 ಸಾವಿರ ರೂ. ಪಿಂಚಣಿ ಬರಲಾರಂಭಿಸುತ್ತದೆ.

ಇದನ್ನೂ ಓದಿ : LPG Gas Cylinder : ಈ ನಂಬರ್ ಗೆ ಮಿಸ್ಡ್ ಕಾಲ್ ನೀಡಿದ್ರೆ, ಹೊಸ ಸಿಲಿಂಡರ್ ಸಂಪರ್ಕ ಮತ್ತೆ ಬುಕಿಂಗ್ ಆಗುತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News