Job Openings: ಶಿಕ್ಷಣ & ಆರೋಗ್ಯ ಇಲಾಖೆ ಸೇರಿ ರಾಜ್ಯದಲ್ಲಿ 2.56 ಲಕ್ಷ ಹುದ್ದೆಗಳು ಖಾಲಿ!

Job Openings: ಶಿಕ್ಷಣ ಇಲಾಖೆಯಲ್ಲಿ 62,145, ಆರೋಗ್ಯ ಇಲಾಖೆಯಲ್ಲಿ 35,196, ಗೃಹ ಇಲಾಖೆಯಲ್ಲಿ 22,069, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,013, ಕಂದಾಯ ಇಲಾಖೆಯಲ್ಲಿ 10,987, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,946 ಮತ್ತು ಪಶು ಸಂಗೋಪನೆ ಇಲಾಖೆಯಲ್ಲಿ 10,393 ಹುದ್ದೆಗಳು ಖಾಲಿಯಿವೆ.

Written by - Puttaraj K Alur | Last Updated : Jul 6, 2024, 01:14 PM IST
  • ರಾಜ್ಯದ ವಿವಿಧ ಇಲಾಖೆಗಳಲ್ಲಿ 2.56 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ
  • ಶಿಕ್ಷಣ ಇಲಾಖೆ 62,145, ಆರೋಗ್ಯ ಇಲಾಖೆ 35,196 & ಗೃಹ ಇಲಾಖೆ 22,069
  • ಉನ್ನತ ಶಿಕ್ಷಣ 13,013, ಕಂದಾಯ 10,987 & ಗ್ರಾಮೀಣಾಭಿವೃದ್ಧಿಯಲ್ಲಿ 10,946 ಹುದ್ದೆಗಳು ಖಾಲಿ
Job Openings: ಶಿಕ್ಷಣ & ಆರೋಗ್ಯ ಇಲಾಖೆ ಸೇರಿ ರಾಜ್ಯದಲ್ಲಿ 2.56 ಲಕ್ಷ ಹುದ್ದೆಗಳು ಖಾಲಿ! title=
2.56 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ!

Job Openings in Karnataka: ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 2.56 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ತಿಳಿದುಬಂದಿದೆ. ಗೃಹ ಇಲಾಖೆ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳು ಅನೇಕ ವರ್ಷಗಳಿಂದಲೂ ಖಾಲಿಯಿವೆ.

ಆರ್ಥಿಕ ಇಲಾಖೆ ಅಂಕಿ ಅಂಶದ ಪ್ರಕಾರ, ರಾಜ್ಯದಲ್ಲಿ 41 ಇಲಾಖೆಗಳಿಂದ ಒಟ್ಟು 2,55,920 ಹುದ್ದೆಗಳು ಖಾಲಿ ಇವೆ. ಜನಸಂಖ್ಯೆ ಮತ್ತು ಕಾರ್ಯಭಾರಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳು ಸೃಷ್ಟಿಯಾಗಿಲ್ಲ. ಮಂಜೂರಾದ ಹುದ್ದೆಗಳಲ್ಲಿಯೇ ಐದಾರು ವರ್ಷಗಳಿಂದ ಇಳಿಕೆ ಮಾಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಖಾಲಿ ಹುದ್ದೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ರಾಜೀನಾಮೆ ನೀಡುವ ಸಾಧ್ಯತೆ!

ರಾಜ್ಯದಲ್ಲಿ 7,72.025 ಮಂಜೂರಾದ ಹುದ್ದೆಗಳ ಪೈಕಿ 2,55,920 ಖಾಲಿ ಇವೆ. ಶಿಕ್ಷಣ ಇಲಾಖೆಯಲ್ಲಿ 62,145, ಆರೋಗ್ಯ ಇಲಾಖೆಯಲ್ಲಿ 35,196, ಗೃಹ ಇಲಾಖೆಯಲ್ಲಿ 22,069, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,013, ಕಂದಾಯ ಇಲಾಖೆಯಲ್ಲಿ 10,987, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,946 ಮತ್ತು ಪಶು ಸಂಗೋಪನೆ ಇಲಾಖೆಯಲ್ಲಿ 10,393 ಹುದ್ದೆಗಳು ಖಾಲಿಯಿವೆ.

ಮಂಜೂರಾದ ಹುದ್ದೆಗಳ ಪೈಕಿ 2018ರಿಂದ ಇದುವರೆಗೆ ಶೇ.33ರಷ್ಟು ಹುದ್ದೆಗಳು ಖಾಲಿಯಿವೆ. ಈ ವರ್ಷ ನಿವೃತ್ತಿ ಬಳಿಕ ಮತ್ತಷ್ಟು ಹುದ್ದೆಗಳು ಖಾಲಿಯಾಗಲಿವೆ ಎಂದು ಹೇಳಲಾಗಿವೆ. ಕಡಿಮೆ ಸಂಖ್ಯೆಯ ನೌಕರರಿಗೆ ಕಾರ್ಯಭಾರ ಹೆಚ್ಚಾಗಿದೆ. ಒತ್ತಡಗಳಿಂದಲೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಇದನ್ನೂ ಓದಿ: ಸಂತೆಯಲ್ಲಿ ಸುಂಕ ವಸೂಲಿ: ರೈತರಿಂದ ದಿಢೀರ್ ಪ್ರತಿಭಟನೆ

ಈಗಾಗಲೇ ಒತ್ತಡ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ನೌಕರರು ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಧಿಕಾರಿ ವರ್ಗದವರಿಗೆ ಮತ್ತು ನೌಕರರಿಗೆ ಒತ್ತಡದಲ್ಲಿಯೇ ಕೆಲಸ ಮಾಡುವ ದುಸ್ಥಿತಿ ಎದುರಾಗಿದೆ. ಹೀಗಾಗಿ ಖಾಲಿ ಇರುವ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಿದ್ರೆ ಈ ಒತ್ತಡಮಯ ಪರಿಸ್ಥಿತಿ ಕೊಂಚ ಮಟ್ಟಿಗೆ ತಗ್ಗಲಿದೆ ಅನ್ನೋ ಅಭಿಪ್ರಾಯಗಳು ಕೇಳಿಬಂದಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News