ಫಲಾನುಭವಿಗಳ 70 ಲಕ್ಷ ರೂ. ದುರ್ಬಳಕೆ ಪ್ರಕರಣ: ಭೋವಿ ಅಭಿವೃದ್ಧಿ ನಿಗಮದ GM ನಾಗರಾಜಪ್ಪ ಬಂಧನ

ಪಲಾನುಭವಿಗಳ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ವಂಚನೆ ಮಾಡಿದ್ದ ನಾಗರಾಜಪ್ಪ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪವಿತ್ತು.

Written by - Zee Kannada News Desk | Last Updated : Jul 2, 2022, 07:29 AM IST
  • 15 ಫಲಾನುಭವಿಗಳ ಸುಮಾರು 70 ಲಕ್ಷ ರೂ. ಹಣ ದುರ್ಬಳಕೆ ಪ್ರಕರಣ
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ನಾಗರಾಜಪ್ಪ ಬಂಧನ
  • ತನಿಖೆ ವೇಳೆ ಅಕ್ರಮ ದೃಢಪಟ್ಟ ಹಿನ್ನೆಲೆ ಎಸಿಬಿ ಅಧಿಕಾರಿಗಳಿಂದ ನಾಗರಪ್ಪ ಬಂಧನ
ಫಲಾನುಭವಿಗಳ 70 ಲಕ್ಷ ರೂ. ದುರ್ಬಳಕೆ ಪ್ರಕರಣ: ಭೋವಿ ಅಭಿವೃದ್ಧಿ ನಿಗಮದ GM ನಾಗರಾಜಪ್ಪ ಬಂಧನ title=
ಭೋವಿ ಅಭಿವೃದ್ಧಿ ನಿಗಮದ GM ನಾಗರಾಜಪ್ಪ ಬಂಧನ

ಬೆಂಗಳೂರು: ಫಲಾನುಭವಿಗಳ 70 ಲಕ್ಷ ರೂ. ಹಣ ದುರ್ಬಳಕೆ ಪ್ರಕರಣ ಸಂಬಂಧ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ನಾಗರಾಜಪ್ಪನನ್ನು ಬಂಧಿಸಲಾಗಿದೆ.

15 ಫಲಾನುಭವಿಗಳ ಹಣ ದುರ್ಬಳಕೆ ಆರೋಪ ಹಿನ್ನೆಲೆ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ: ಸಾವಿರಾರು ದೂರು ಬಂದ್ರು ತಲೆಕೆಡಿಸಿಕೊಳ್ಳದ ಬಿಎಂಟಿಎಫ್‌: ಸಾರ್ವಜನಿಕರಿಂದ ಅಸಮಾಧಾನ

5 ಲಕ್ಷ ರೂ.ನಂತೆ ಪಲಾನುಭವಿಗಳ ಸುಮಾರು 70 ಲಕ್ಷ ರೂ. ಹಣವನ್ನು ನಾಗರಾಜಪ್ಪ ದುರ್ಬಳಕೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರುಇ. ತನಿಖೆ ವೇಳೆ ಅಕ್ರಮವಾಗಿ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿರೋದು ದೃಢಪಟ್ಟಿತ್ತು.

ಪಲಾನುಭವಿಗಳ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ವಂಚನೆ ಮಾಡಿದ್ದ ನಾಗರಾಜಪ್ಪ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪವಿತ್ತು. ಸಾಕ್ಷಿ ನಾಶಪಡಿಸೋ ಸಾಧ್ಯತೆ ಹಿನ್ನೆಲೆ ನಾಗರಾಜಪ್ಪನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.  ಸದ್ಯ ಈ ಬಗ್ಗೆ ಎಸಿಬಿ ಹೆಚ್ಚಿನ ತನಿಖೆ ಮುಂದುವರೆಸಿದೆ.

ಇದನ್ನೂ ಓದಿBengaluru Crime : ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News