Sharan: ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಟ ಶರಣ್‌

ನಟ ಶರಣ್ ತಮ್ಮ ಮುಂದಿನ ಸಿನಿಮಾಗಾಗಿ ‘ಕರ್ವ’, ‘ಬಕಾಸುರ’ದಂತಹ ಸಿನಿಮಾಗಳನ್ನು ನಿರ್ದೇಶಿರುವ ನವನೀತ್ ಜೊತೆ ಕೈಜೋಡಿಸಿದ್ದಾರೆ.

Written by - Puttaraj K Alur | Last Updated : Oct 19, 2021, 11:01 AM IST
  • ಇದೇ ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ನಟ ಶರಣ್
  • ‘ಕರ್ವ’ ನಿರ್ದೇಶಕ ನವನೀತ್ ಜೊತೆ ಮುಂದಿನ ಸಿನಿಮಾಗೆ ಕೈಜೋಡಿಸಿದ ಶರಣ್
  • ಹಾರರ್ ಕಥಾಹಂದರದ ಜೊತೆಗೆ ಶರಣ್ ತೆಳುಹಾಸ್ಯವೂ ಇರಲಿದೆ ಎಂದ ನಿರ್ದೇಶಕ
Sharan: ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಟ ಶರಣ್‌ title=
‘ಕರ್ವ’ ನಿರ್ದೇಶಕರ ಹಾರರ್‌ ಥ್ರಿಲ್ಲರ್‌ ಸಿನಿಮಾದಲ್ಲಿ ನಟ ಶರಣ್‌ (Photo Courtesy: Facebook/@Sharan Hruday)

ಬೆಂಗಳೂರು: ತಮ್ಮ ವಿಭಿನ್ನ ಹಾಸ್ಯ ನಟನೆಯ ಮೂಲಕ ಗಮನ ಸೆಳೆಯುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಖ್ಯಾತ ನಟ ಶರಣ್(Sharan) ಇದೇ ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ಸಿನಿಮಾ(Horror Thriller Movie)ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅಧ್ಯಕ್ಷ’, ‘ರ‍್ಯಾಂಬೋ’, ‘ವಿಕ್ಟರಿ’, ‘ಅಧ್ಯಕ್ಷ ಇನ್ ಅಮೆರಿಕ’ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶರಣ್ ಹಾಸ್ಯದ ಹೊನಲು ಹರಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಅವರು ಹಾರರ್ ಥ್ರಿಲ್ಲರ್ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ನಟ ಶರಣ್ ತಮ್ಮ ಮುಂದಿನ ಸಿನಿಮಾಗಾಗಿ ‘ಕರ್ವ(Karvva)’, ‘ಬಕಾಸುರ’ದಂತಹ ಸಿನಿಮಾಗಳನ್ನು ನಿರ್ದೇಶಿರುವ ನವನೀತ್ ಜೊತೆ ಕೈಜೋಡಿಸಿದ್ದಾರೆ. ಸದ್ಯ ಶರಣ್ ‘ಅವತಾರ ಪುರುಷ’ ಮತ್ತು ‘ಗುರು ಶಿಷ್ಯರು’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬಳಿಕ ಅವರು ನಿರ್ದೇಶಕ ನವನೀತ್ ಆಕ್ಷನ್ ಕಟ್ ಹೇಳಲಿರುವ ಹಾರರ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ‘ಕರ್ವ’ ಸಿನಿಮಾ(Kannada Film) ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಸದ್ದುಮಾಡಿದ್ದ ನವನೀತ್(Director Navaneeth) ತಮ್ಮ 3ನೇ ಸಿನಿಮಾಗೆ ಶರಣ್ ಅವರೇ ಸೂಕ್ತವೆಂದು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: India's Best Dancer season 2: ನಟಿ ಮಲೈಕಾ ಆರೋರಾ ಕೆನ್ನೆ ಸ್ಪರ್ಶಿಸಿದ ಸ್ಪರ್ಧಿ..! ಮುಂದೆ ಆಗಿದ್ದೇನು ಗೊತ್ತೇ ?

‘ಶರಣ್(Sharan) ಅವರಿಗೆ ನಾನು ನಿರ್ದೇಶನ ಮಾಡುತ್ತಿರುವುದು ಖುಷಿಯಾಗಿದೆ. ಇದೇ ಮೊದಲ ಬಾರಿಗೆ ವಿಭಿನ್ನ ಕಥೆಯ ಮೂಲಕ ಶರಣ್‌ ಅವರು ತೆರೆಮೇಲೆ ಮೋಡಿಮಾಡಲಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಹಾರರ್ ಥ್ರಿಲ್ಲರ್ ಕಥೆಯನ್ನು ಸಿದ್ಧಪಡಿಸಿದ್ದೇವೆ. ಹಾರರ್ ಜೊತೆಗೆ ಶರಣ್ ಅವರ ತೆಳುಹಾಸ್ಯವು ಈ ಸಿನಿಮಾದಲ್ಲಿ ಇರಲಿದೆ. ಶೀಘ್ರವೇ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲು ಯೋಜನೆ ರೂಪಿಸಿದ್ದೇವೆ. ತರುಣ್‌ ಶಿವಪ್ಪ ಅವರು ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ’ ಅಂತಾ ನಿರ್ದೇಶಕ ನವನೀತ್ ಹೇಳಿದ್ದಾರೆ.   

ಈ ಸಿನಿಮಾವನ್ನು ಬೆಂಗಳೂರು, ಉತ್ತರಾಖಂಡ್ ಸೇರಿದಂತೆ ಕೆಲವು ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸಲು(Film Shooting) ಚಿತ್ರತಂಡ ಪ್ಲಾನ್ ಮಾಡಿದೆ. ಸದ್ಯಕ್ಕೆ ನಾಯಕಿ ಸೇರಿದಂತೆ ಯಾರನ್ನೂ ಆಯ್ಕೆ ಮಾಡಿಲ್ಲ. ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಪ್ರೇಕ್ಷಕರು ಭರ್ಜರಿ ಮನರಂಜನೆಯ ಜೊತೆಗೆ ಇದೇ ಮೊದಲ ಬಾರಿಗೆ ನಟ ಶರಣ್ ಅವರನ್ನು ಹಾರರ್ ಸಿನಿಮಾದಲ್ಲಿ ಕಣ್ತುಂಬಿಕೊಳ್ಳಲಿದ್ದಾರೆಂದು ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: ಸತತ ನಾಲ್ಕನೇ ಬಾರಿಗೆ ಇಡಿ ಸಮನ್ಸ್ ನಿಂದ ತಪ್ಪಿಸಿಕೊಂಡ 'ಗಡಂಗ್ ರಕ್ಕಮ್ಮಾ'

ನವನೀತ್ ಅವರ ಚೊಚ್ಚಲ ‘ಕರ್ವ’ ಹಾರರ್ ಸಿನಿಮಾವು ಪ್ರೇಕ್ಷಕರಿಗೆ ಇಷ್ಟವಾಗಿ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿತ್ತು. ಬಳಿಕ ವಿ.ರವಿಚಂದ್ರನ್ ಹಾಕಿಕೊಂಡು ಮಾಡಿದ್ದ ‘ಬಕಾಸುರ’ ಅಷ್ಟೇನೂ ಸದ್ದು ಮಾಡಿರಲಿಲ್ಲ. ಇದೀಗ ಮತ್ತೊಂದು ಹಾರರ್ ಥ್ರಿಲ್ಲರ್ ಸಿನಿಮಾ ಮೂಲಕ ಪ್ರೇಕ್ಷಕರ ಹತ್ತಿರ ಬರುತ್ತಿದ್ದಾರೆ. ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ತಮ್ಮ ನೆಚ್ಚಿನ ನಟನ ನಟನೆಯನ್ನು ಕಣ್ತುಂಬಿಕೊಳ್ಳುವ ಅಭಿಮಾನಿಗಳ ಕುತೂಹಲವಿಗ ದುಪ್ಪಟ್ಟಾಗಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News