Vijaylakshmi: ಸಾವೊಂದೆ ನನ್ನ ಕೊನೆಯ ಆಯ್ಕೆ.. ನಾನು ಸತ್ತರೆ ಆತನೇ ಕಾರಣ ಎಂದು ವಿಡಿಯೋ ಹರಿಬಿಟ್ಟ ಹಿರಿಯ ನಟಿ!

Actress Vijaylakshmi: ಹಿರಿಯ ನಟಿ ವಿಜಯಲಕ್ಷ್ಮೀಯವರ ಬಗ್ಗೆ ಕನ್ನಡಿಗರಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಸೂರ್ಯವಂಶ ಸೇರಿದಂತೆ ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಇವರು ವೈಯಕ್ತಿಕ ವಿಚಾರಗಳಿಂದ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ..

Written by - Savita M B | Last Updated : Mar 7, 2024, 08:37 AM IST
  • ನಟಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ
  • ಮದುವೆ ಮಾಡಿಕೊಳ್ಳುತ್ತೇನೆ ಎಂದು ಮೋಸ ಮಾಡಿದ್ದಾರೆ ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ.
  • ಇದೀಗ ಮತ್ತೊಂದು ವಿಡಿಯೋವನ್ನು ಹರಿಬಿಟ್ಟ ನಟಿ ನನಗೆ ಉಳಿದಿರುವುವ ದಾರಿ ಎಂದರೇ ಅದು ಸಾವು ಎಂದಿದ್ದಾರೆ..
Vijaylakshmi: ಸಾವೊಂದೆ ನನ್ನ ಕೊನೆಯ ಆಯ್ಕೆ.. ನಾನು ಸತ್ತರೆ ಆತನೇ ಕಾರಣ ಎಂದು ವಿಡಿಯೋ ಹರಿಬಿಟ್ಟ ಹಿರಿಯ ನಟಿ!  title=

Vijaylakshmi Viral Video: ನಟಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.. ಏನೇ ಆದರೂ ಸೋಷಿಯಲ್‌ ಮಿಡಿಯಾಲದಲ್ಲಿ ಹರಿಬಿಡುವ ಇವರು ತಮಗೆ ವಂಚನೆಯಾಗಿದೆ.. ತುಂಬಾ ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಳ್ಳುತ್ತಲೇ ಇರುತ್ತಾರೆ.. ಅವರ ತಾಯಿ ನಿಧನರಾದಾಗ ಹಣಕ್ಕಾಗಿ ಪರದಾಡುತ್ತಿದ್ದ ನಟಿ ವಿಜಯಲಕ್ಷ್ಮೀ ಅವರಿಗೆ ಸಹಾಯ ಮಾಡಲು ಕರ್ನಾಟಕದ ಆಶ್ರಮವೊಂದು ಮುಂದೆ ಬಂದಿತ್ತು.. ಕೊನೆಗೆ ನಟಿ ಆಶ್ರಮದ ವಿರುದ್ಧವೇ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.. ಇದು ದೊಡ್ಡ ವಿವಾದವನ್ನು ಸೃಷ್ಟಿಸಿ ವಿಜಯಲಕ್ಷ್ಮೀ ಅವರ ವಿರುದ್ಧ ಭಾರೀ ಟೀಕೆಗಳು ಬಂದಿದ್ದವು.. 

ಇದನ್ನೂ ಓದಿ-Rakshith Shetty: ಅಯೋಧ್ಯೆಯಲ್ಲಿ ಬಾಲ ರಾಮನ ದರ್ಶನ ಪಡೆದ ಸಿಂಪಲ್‌ ಸ್ಟಾರ್!

ಸೀಮನ್‌ ವಿರುದ್ಧ ಆರೋಪ: 
ಮದುವೆ ಮಾಡಿಕೊಳ್ಳುತ್ತೇನೆ ಎಂದು ಮೋಸ ಮಾಡಿದ್ದಾರೆ ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ.. ಎಂದು ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ನಟ ನಿರ್ದೇಶಕ ಸೀಮನ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದರು.. ಈ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು.. ಅಲ್ಲದೇ ಪೊಲೀಸ್‌ ವಿಚಾರಣೆಯೂ ನಡೆದಿತ್ತು.. ಇದೀಗ ಮತ್ತೊಂದು ವಿಡಿಯೋವನ್ನು ಹರಿಬಿಟ್ಟ ನಟಿ ನನಗೆ ಉಳಿದಿರುವುವ ದಾರಿ ಎಂದರೇ ಅದು ಸಾವು ಎಂದಿದ್ದಾರೆ.. 

 
 
 
 

 
 
 
 
 
 
 
 
 
 
 

A post shared by The Whistle (@thewhistletv)

ಇದನ್ನೂ ಓದಿ-Shah Rukh Khan ದಕ್ಷಿಣ ಅಂದರೆ ಕೇವಲ ಇಡ್ಲಿ-ವಡೆ ಅಲ್ಲ, ರಾಮ್ ಚರಣ್ ಕುರಿತು ತಮಾಷೆ ಮಾಡಲು ಹೋಗಿ ತಮಾಷೆಗೊಳಗಾದ ಕಿಂಗ್ ಖಾನ್!

ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ "ಮಾಧ್ಯಮ ಸ್ನೇಹಿತರೇ ನಾನು ಈ ಹಿಂದೆ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದೆ.. ಅದರಲ್ಲಿ ನನ್ನ ಜೊತೆ ಮಾತನಾಡುವಂತೆ ಮತ್ತು ಜೊತೆಗೆ ಇರಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದೆ.. ಆದರೆ ಸೀಮನ್‌ ಅವರಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.. ನಾನು ಸದ್ಯ ತುಂಬಾ ಕಷ್ಟದಲ್ಲಿದ್ದೇನೆ.. ನಾನು ಅಳುತ್ತಲೇ ವಿಡಿಯೋ ಕಳುಹಿಸಿದ್ದೆ ನೀನು ನನಗೆ ಬೇಕೇ ಬೇಕು.. ನೀ ಇಲ್ಲದಿದ್ದರೆ ನಾನು ಸತ್ತು ಹೋಗುತ್ತೇನೆ.. ಎಂದು ಹೇಳಿದಾಗಲೂ ನನ್ನನ್ನು ಕೇರ್‌ ಮಾಡಿಲ್ಲ.. ನನ್ನನ್ನು ಗುಟ್ಟಾಗಿ ಮದುವೆಯಾಗಿ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ.. ನಡುರಸ್ತೆಯಲ್ಲಿ ನನ್ನನ್ನು ಕೈ ಬಿಟ್ಟಿದ್ದಾರೆ.. ಹೀಗಾಗಿ ನಾನು ಆತ್ಮಹತ್ಯ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ.. ನನ್ನ ಸಾವಿಗೆ ಸೀಮನ್‌ ಕಾರಣರಾಗುತ್ತಾರೆ ಎಂದು ಹೇಳಿ ಮಂಗಳವಾರ ವಿಜಯಲಕ್ಷ್ಮೀ ಪೋಸ್ಟ್‌ ಮಾಡಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News