ನನ್ನ ಮುಖಕ್ಕೆ ನಾನೇ ಹೊಡೆದುಕೊಂಡ ಹಾಗೆ ಆಗಿದೆ- ಪ್ರಕಾಶ್ ರೈ

ಸ್ವತಂತ್ರ ಅಭ್ಯರ್ಥಿಯಾಗಿ ಬೆಂಗಳೂರು ಸೆಂಟ್ರಲ್ ನಿಂದ ಸ್ಪರ್ಧಿಸಿದ್ದ ಪ್ರಕಾಶ್ ರೈ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಟ್ವೀಟ್ ಮಾಡಿದೆ ತಮ್ಮ ಮುಖಕ್ಕೆ ತಾವೇ ಹೊಡೆದುಕೊಂಡಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Last Updated : May 24, 2019, 03:24 PM IST
ನನ್ನ ಮುಖಕ್ಕೆ ನಾನೇ ಹೊಡೆದುಕೊಂಡ ಹಾಗೆ ಆಗಿದೆ- ಪ್ರಕಾಶ್ ರೈ     title=

ಬೆಂಗಳೂರು: ಸ್ವತಂತ್ರ ಅಭ್ಯರ್ಥಿಯಾಗಿ ಬೆಂಗಳೂರು ಸೆಂಟ್ರಲ್ ನಿಂದ ಸ್ಪರ್ಧಿಸಿದ್ದ ಪ್ರಕಾಶ್ ರೈ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಟ್ವೀಟ್ ಮಾಡಿದೆ ತಮ್ಮ ಮುಖಕ್ಕೆ ತಾವೇ ಹೊಡೆದುಕೊಂಡಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಸೆಂಟ್ರಲ್ ನಲ್ಲಿ ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಹಾಗೂ ಬಿಜೆಪಿ ಪಿಸಿ ಮೋಹನ್ ವಿರುದ್ಧ ಸ್ಪರ್ಧಿಸಿದ್ದ ಪ್ರಕಾಶ್ ರೈ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ " ಇನ್ನು ಹೆಚ್ಚಿನ ಟ್ರೋಲ್ ಗಳು ಬರುತ್ತಿರುವ ಸಂದರ್ಭದಲ್ಲಿ ನನ್ನ ಮುಖಕ್ಕೆ ನಾನೇ ಹೊಡೆದುಕೊಂಡಾಗಿದೆ.ಆದರೆ ನಾನು ಇನ್ನು ಗಟ್ಟಿಯಾಗಿ ನೆಲೆ ನಿಲ್ಲುತ್ತೇನೆ. ಜ್ಯಾತಾತೀತ ಭಾರತಕಾಗಿನ ನನ್ನ ಹೋರಾಟ ಮುಂದುವರೆಯಲಿದೆ.ಕಠಿಣ ಪ್ರಯಾಣ ಈಗಷ್ಟೇ ಪ್ರಾರಂಭವಾಗಿದೆ. ಈ ಪ್ರಯಾಣದಲ್ಲಿ ನನ್ನ ಜೊತೆ ಇದ್ದ ಎಲ್ಲರಿಗೂ ಧನ್ಯವಾದಗಳು. ಜೈ ಹಿಂದ್ " ಎಂದು ಪ್ರಕಾಶ ರೈ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ಜನವರಿ 1 ರಿಂದ ಅಧಿಕೃತ ರಾಜಕಾರಣಕ್ಕೆ ಪ್ರವೇಶಿಸಿದ್ದರು. ತಮ್ಮ ನಾಮ ಪತ್ರ ಸಲ್ಲಿಸುವುದಕ್ಕೂ ಮೊದಲೇ ಅವರು ಪ್ರಚಾರವನ್ನು ಪ್ರಾರಂಭಿಸಿದ್ದರು.ಅಲ್ಲದೆ ಇತ್ತೀಚಿಗೆ ಸಾಮಾಜಿಕ ರಾಜಕೀಯ ವಿಚಾರಗಳ ಕುರಿತಾಗಿ ಅವರು ಬಹಿರಂಗವಾಗಿ ಮಾತನಾಡುತ್ತಿದ್ದರಲ್ಲದೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದರು.

Trending News