ಕನ್ನಡ ಭಾಷೆ, ಸಂಸ್ಕೃತಿಗೆ ಅಂಬರೀಶ್ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಂಗಳವಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ನಟ ಅಂಬರೀಶ್ ನೆನೆದು ಭಾವುಕರಾಗಿದ್ದು ವಿಶೇಷವಾಗಿತ್ತು. 

Last Updated : Apr 10, 2019, 09:54 AM IST
ಕನ್ನಡ ಭಾಷೆ, ಸಂಸ್ಕೃತಿಗೆ ಅಂಬರೀಶ್ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ title=

ಮೈಸೂರು: ದಿವಂಗತ ನಟ, ಮಾಜಿ ಸಚಿವ ಅಂಬರೀಶ್ ಕನ್ನಡ ಭಾಷೆ ಮತ್ತು ಸಂಕೃತಿಗೆ ನೀಡಿದ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಂಗಳವಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ನಟ ಅಂಬರೀಶ್ ನೆನೆದು ಭಾವುಕರಾಗಿದ್ದು ವಿಶೇಷವಾಗಿತ್ತು. ಅಂಬರೀಶ್ ಅವರಿಗಿದ್ದ ಕನ್ನಡಪರ ಕಾಳಜಿ ಹಾಗೂ ಕೊಡುಗೆಯನ್ನು ಸ್ಮರಿಸಿದ ಮೋದಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಂಬರೀಶ್ ಕೊಡುಗೆ ಮರೆಯಲು ಸಾಧ್ಯವೇ? ಹಾಗಾಗಿ ನಾವೆಲ್ಲಾ ಸುಮಲತಾ ಅಂಬರೀಶ್ ಅವರಿಗೆ ಶಕ್ತಿ ನೀಡಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.

ಈ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬಹಿರಂಗವಾಗಿ ಬೆಂಬಲಿಸಿದ ಮೋದಿ, ಮೇ 23ರ ಫಲಿತಾಂಶದ ನಂತರ ತಮ್ಮ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 70 ವರ್ಷದಿಂದ ದೇಶಕ್ಕೆ ಅನ್ಯಾಯ ಮಾಡುತ್ತಿರುವವರಿಗೆ ಜೈಲಿನ ಬಾಗಿಲು ತೆರೆದುಕೊಂಡು ಕಾಯುತ್ತಿವೆ ಎಂಬ ಎಚ್ಚರಿಕೆಯನ್ನೂ ಸಹ ಮೋದಿ ಈ ಸಂದರ್ಭದಲ್ಲಿ ನೀಡಿದರು.

Trending News