Anil Deshmukh In ED Custody: ನವೆಂಬರ್ 6ರವರೆಗೆ ED ವಶಕ್ಕೆ Anil Deshmukh

Anil Deshmukh In ED Custody: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ನ್ಯಾಯಾಲಯ ನವೆಂಬರ್ 6 ರವರೆಗೆ ಇಡಿ ಒಪ್ಪಿಸಿ ಆದೇಶ ಹೊರಡಿಸಿದೆ.

Written by - Nitin Tabib | Last Updated : Nov 2, 2021, 06:19 PM IST
  • ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ನವೆಂಬರ್ 6ರವರೆಗೆ ಪೊಲೀಸ್ ವಶಕ್ಕೆ.
  • ಮುಂಬೈ PMLA ನ್ಯಾಯಾಲಯದಿಂದ ಮಹತ್ವದ ಆದೇಶ.
  • ಅನಿಲ್ ದೇಶ್ಮುಖ್ ಮೇಲೆ ಹಫ್ತಾ ವಸೂಲಿ ಆರೋಪ.
Anil Deshmukh In ED Custody: ನವೆಂಬರ್ 6ರವರೆಗೆ ED ವಶಕ್ಕೆ Anil Deshmukh title=
Anil Deshmukh In ED Custody (Photo Courtesy - ANI)

Anil Deshmukh In ED Custody: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ (Maharashtra Former Home Minister Anil Deshmukh) ದೇಶಮುಖ್ ಅವರನ್ನು PMLA ನ್ಯಾಯಾಲಯ ನವೆಂಬರ್ 6 ರವರೆಗೆ ಇಡಿ ED ವಶಕ್ಕೆ ಒಪ್ಪಿಸಿದೆ. ಜಾರಿ ನಿರ್ದೇಶನಾಲಯ (Enforcement Directorate) ಮಧ್ಯಾಹ್ನ ದೇಶಮುಖ್ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿಬಿ ಜಾಧವ್ (PB Jadhav) ಅವರ ಮುಂದೆ ಹಾಜರುಪಡಿಸಿತ್ತು ಮತ್ತು ವಿಚಾರಣೆಗಾಗಿ ದೇಶಮುಖ್ ಅವರ ಕಸ್ಟಡಿಯನ್ನು ಕೋರಿತ್ತು. ಇದಾದ ಬಳಿಕ ನ್ಯಾಯಾಲಯ ಅವರನ್ನು ED ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ. 

ವಿಚಾರಣೆ ವೇಳೆ ದೇಶಮುಖ್ ಪರವಾಗಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ವಕೀಲರು ಹಾಜರಿರಬೇಕು ಎಂದು ದೇಶಮುಖ್ ಪರ ವಕೀಲರು ಒತ್ತಾಯಿಸಿದ್ದರು. ಇದರೊಂದಿಗೆ ಮನೆಯ ಆಹಾರ, ಔಷಧ ಸೇವನೆಗೂ ಅವಕಾಶ ನೀಡಬೇಕು ನ್ಯಾಯಾಲಯವನ್ನು ಕೋರಿದ್ದರು. ದೇಶ್ಮುಖ ಅವರ ಈ ಎರಡೂ ಬೇಡಿಕೆಗಳನ್ನು ನ್ಯಾಯಾಲಯ ಒಪ್ಪಿಕೊಂಡಿದೆ. 

ದೇಶಮುಖ್ ಅವರನ್ನು 12 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ ಸೋಮವಾರ ತಡರಾತ್ರಿ ಅವರನ್ನು ಬಂಧಿಸಿದೆ. ಈ ಮನಿ ಲಾಂಡರಿಂಗ್ ಪ್ರಕರಣವು ಮಹಾರಾಷ್ಟ್ರ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿರುವ ಸುಲಿಗೆ ಗ್ಯಾಂಗ್‌ಗೆ ಸಂಬಂಧಿಸಿದೆ. ಇಡಿ ಕಚೇರಿಯಲ್ಲಿ ರಾತ್ರಿ ಕಳೆದ ನಂತರ ದೇಶಮುಖ್ ಅವರನ್ನು ಬೆಳಗ್ಗೆ 10.15 ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಭ್ರಷ್ಟಾಚಾರ ಮತ್ತು ಅಧಿಕೃತ ಸ್ಥಾನದ ದುರುಪಯೋಗಕ್ಕೆ ಸಂಬಂಧಿಸಿದಂತೆ ಏಪ್ರಿಲ್ 21 ರಂದು ದೇಶಮುಖ್ ವಿರುದ್ಧ ಕೇಂದ್ರೀಯ ತನಿಖಾ ದಳ (CBI) FIR ದಾಖಲಿಸಿದ ನಂತರ ಜಾರಿ ನಿರ್ದೇಶನಾಲಯ, ಮಾಜಿ ಸಚಿವರು ಮತ್ತು ಅವರ ಸಹಚರರ ವಿರುದ್ಧ ತನಿಖೆ ಆರಂಭಿಸಿತ್ತು.

ಇದನ್ನೂ ಓದಿ-Afghanistan Blast: ಕಾಬೂಲ್ ಮಿಲಿಟರಿ ಆಸ್ಪತ್ರೆಯ ಬಳಿ ಸ್ಫೋಟ, 19 ಸಾವು 50 ಜನರಿಗೆ ಗಾಯ

ಇಡಿ ಪ್ರಕಾರ, ರಾಜ್ಯ ಗೃಹ ಸಚಿವರಾಗಿದ್ದಾಗ ದೇಶಮುಖ್ (Anil Deshmukh) ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮೂಲಕ ಮುಂಬೈನ ವಿವಿಧ 'ಬಾರ್' ಮತ್ತು ರೆಸ್ಟೋರೆಂಟ್‌ಗಳಿಂದ 4.70 ಕೋಟಿ ರೂ. ಹಫ್ತಾ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ-Maharashtra IT Raid: ಅನೀಲ್ ದೇಶ್ಮುಖ್ ಬಳಿಕ ಅಜಿತ್ ಪವಾರ್ ಮೇಲೆ IT ಇಲಾಖೆಯ ಮಹಾ ಆಕ್ಷನ್

ದೇಶಮುಖ್ ಅವರ ಕುಟುಂಬದ ನಿಯಂತ್ರಣದಲ್ಲಿರುವ ನಾಗ್ಪುರದ ಶೈಕ್ಷಣಿಕ ಟ್ರಸ್ಟ್ 'ಶ್ರೀ ಸಾಯಿ ಶಿಕ್ಷಣ ಸಂಸ್ಥಾನ'ದಲ್ಲಿ ಹಣವನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ದೇಶಮುಖ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಂತರವಾಗಿ ನಿರಾಕರಿಸಿದ್ದು,  ಏಜೆನ್ಸಿಯ ಸಂಪೂರ್ಣ ಪ್ರಕರಣವು ಕಳಂಕಿತ ಪೋಲೀಸ್ (Sachin Vaze) ನೀಡಿದ ದುರುದ್ದೇಶಪೂರಿತ ಹೇಳಿಕೆಗಳನ್ನು ಆಧರಿಸಿದೆ ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ-ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ, ಸಿದ್ದರಾಮಯ್ಯ ನಿವಾಸದಲ್ಲಿ ಕಾರ್ಯಕರ್ತರ ಸಂಭ್ರಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News