ನನ್ನನ್ನು ಕೊಲ್ಲಲ್ಲು ಸುಪಾರಿ ಹಂತಕರನ್ನು ನೇಮಿಸಲಾಗಿತ್ತು- ಅಣ್ಣಾ ಹಜಾರೆ

ಉಸ್ಮಾನಾಬಾದ್‌ನ ತರ್ನಾ ಶುಗರ್ ಫ್ಯಾಕ್ಟರಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಕ್ಕಾಗಿ ತಮ್ಮನ್ನು ಕೊಲ್ಲಲು ಸುಪಾರಿ ಹಂತಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಅನ್ನಾ ಹಜಾರೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Last Updated : Jul 9, 2019, 06:56 PM IST
ನನ್ನನ್ನು ಕೊಲ್ಲಲ್ಲು ಸುಪಾರಿ ಹಂತಕರನ್ನು ನೇಮಿಸಲಾಗಿತ್ತು- ಅಣ್ಣಾ ಹಜಾರೆ title=

ನವದೆಹಲಿ: ಉಸ್ಮಾನಾಬಾದ್‌ನ ತರ್ನಾ ಶುಗರ್ ಫ್ಯಾಕ್ಟರಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಕ್ಕಾಗಿ ತಮ್ಮನ್ನು ಕೊಲ್ಲಲು ಸುಪಾರಿ ಹಂತಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಅನ್ನಾ ಹಜಾರೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಪವನ್ ರಾಜೇ ನಿಂಬಲ್ಕರ್ ಅವರ ಕೊಲೆ ವಿಚಾರಣೆಯಲ್ಲಿ ವಿಶೇಷ ನ್ಯಾಯಾಧೀಶ ಆನಂದ್ ಯವಾಲ್ಕರ್ ಅವರ ಮುಂದೆ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಹಾಜರಾದ ಅಣ್ಣಾ ಹಜಾರೆ, ತಮಗೆ ಮಾರಣಾಂತಿಕ ಬೆದರಿಕೆಗಳ ಬಗ್ಗೆ ತಿಳಿದ ನಂತರ ಪೊಲೀಸ್ ದೂರು ದಾಖಲಿಸಿರುವುದಾಗಿ ಹೇಳಿದರು. ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಪದಮ್‌ಸಿಂಹ ಪಾಟೀಲ್, 2006 ರಲ್ಲಿ ಅವರ ಸೋದರ ಸಂಬಂಧಿ ಪವನ್ ರಾಜೇ ನಿಂಬಲ್ಕರ್ ಅವರ ಹತ್ಯೆಯ ಪ್ರಮುಖ ಆರೋಪಿ, ಉಸ್ಮಾನಾಬಾದ್ ಮೂಲದ ಸಕ್ಕರೆ ಕಾರ್ಖಾನೆಗೆ ಸಂಬಂಧ ಹೊಂದಿದ್ದು, ಪ್ರಸ್ತುತ ಟೆರ್ನಾ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ ಎನ್ನಲಾಗಿದೆ. 

ಅಣ್ಣಾ ಹಜಾರೆ ದೂರು ದಾಖಲಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ತಮ್ಮ ಜೀವಕ್ಕೆ ಅಪಾಯವಿರುವ ಬಗ್ಗೆ ತಿಳಿಸಿದ್ದರು, ಆದರೆ ಪದಮ್‌ಸಿಂಹ ಪಾಟೀಲ್ ಶರದ್ ಪವಾರ್ ಅವರಿಗೆ ಸಂಬಂಧವಿರುವುದರಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಹಜಾರೆ ಅವರು ನಿಷ್ಕ್ರಿಯತೆಯನ್ನು ವಿರೋಧಿಸಿ ತಮ್ಮ ಪದ್ಮಶ್ರೀ ಮತ್ತು ವೃಕ್ಷ ಮಿತ್ರ ಗೌರವಗಳನ್ನು ಹಿಂದಿರುಗಿಸಿದ್ದರು, ನಂತರ ಅವರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ತದನಂತರ, ಸರ್ಕಾರವು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ನೇಮಿಸಿತು. ಈ ಪ್ರಕರಣದ ಆರೋಪಿಗಳೊಬ್ಬರು ಅಣ್ಣಾ ಹಜಾರೆಯವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರ ಬಗ್ಗೆ ಹೇಳಿದ್ದಾರೆ.

"ಪಾಟೀಲ್ ನನಗೆ ಬೆದರಿಕೆ ಹಾಕಿದರು ಮತ್ತು ಈ ವಿಷಯದಲ್ಲಿ ನನ್ನ ದೂರುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು. ಒಮ್ಮೆ ಅವರ ಜನರು ನನ್ನ ಕಚೇರಿಗೆ ಬಂದು ಖಾಲಿ ಚೆಕ್ ನೀಡಿದರು" ಎಂದು ಅವರು ನ್ಯಾಯಾಲಯಕ್ಕೆ ಅಣ್ಣಾ ಹಜಾರೆ ತಿಳಿಸಿದ್ದಾರೆ. ಪ್ರತಿವಾದಿ ವಕೀಲರ ಆಕ್ಷೇಪಣೆಯ ನಂತರ, ಅಣ್ಣಾ ಹಜಾರೆ ತಮಗೆ ಪವನ್ ರಾಜೇ ನಿಂಬಲ್ಕರ್ ಅವರ ಹತ್ಯೆಯ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಹೇಳಿದರು, ಇದೆಲ್ಲವೂ ತಮಗೆ ಮಾಧ್ಯಮ ವರದಿಗಳ ಮೂಲಕ ತಿಳಿದಿದ್ದು ಎಂದು ಹೇಳಿದರು.

 

Trending News