ಕಾಶ್ಮೀರದಲ್ಲಿನ ಭಯೋತ್ಪಾದಕರು ಹುತಾತ್ಮರು,ಅವರ ಸಾವನ್ನು ಸಂಭ್ರಮಿಸುವ ಹಾಗಿಲ್ಲ-ಪಿಡಿಪಿ ಶಾಸಕ

      

Last Updated : Jan 11, 2018, 01:44 PM IST
ಕಾಶ್ಮೀರದಲ್ಲಿನ ಭಯೋತ್ಪಾದಕರು ಹುತಾತ್ಮರು,ಅವರ ಸಾವನ್ನು ಸಂಭ್ರಮಿಸುವ ಹಾಗಿಲ್ಲ-ಪಿಡಿಪಿ ಶಾಸಕ  title=

ನವದೆಹಲಿ: ಕಾಶ್ಮೀರದ ಪಿಡಿಪಿ ಶಾಸಕ ಅಜಾಜ್ ಅಹ್ಮಮದ್ ಪೀರ್ ಕಾಶ್ಮೀರದಲ್ಲಿನ ಭಯೋತ್ಪಾದಕರ ಕುರಿತು ಮಾತನಾಡುತ್ತಾ ಅವರು ಹುತಾತ್ಮರು ಆದ್ದರಿಂದ ನಾವು ಅವರ ಸಾವನ್ನು ಸಂಭ್ರಮಿಸುವ ಹಾಗಿಲ್ಲ ಎಂದು ಹೇಳುವ ಮೂಲಕ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ.

ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಹುತೇಕ ಇಲ್ಲಿನ ಉಗ್ರಗಾಮಿಗಳು ಕಿರಿಯ ವಯಸ್ಸಿನವರಾಗಿದ್ದು ಅವರು ಮಾಡುವ ದುಷ್ಕೃತ್ಯದ ಬಗ್ಗೆ ಅವರಿಗೆ ಅರಿವಿಲ್ಲದೆ ಮಾಡಿರುತ್ತಾರೆ. ಆದ್ದರಿಂದ ಅವರೆಲ್ಲ ಭಯೋತ್ಪಾದಕರಲ್ಲ ಬದಲಾಗಿ ಹುತಾತ್ಮರು ಮತ್ತು ಅವರೆಲ್ಲ ನಮ್ಮ ಸಹೋದರು. ಆದ್ದರಿಂದ ಅಂಥವರ ಸಾವನ್ನು ಸಂಭ್ರಮಿಸಬಾರದು  ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲಿ ಮೃತಪಟ್ಟಿರುವ ಸೈನಿಕರ ಬಗ್ಗೆಯು ಸಹನಾಭೂತಿ ವ್ಯಕ್ತಪಡಿಸಿದ್ದಾರೆ. 

ಇದಕ್ಕೆ ಪ್ರತಿಕ್ರಯಿಸಿರುವ ಕೇಂದ್ರ ಸಚಿವ ಮುಖ್ತಾರ ಅಬ್ಬಾಸ್ ನಕ್ವಿ ಭಯೋತ್ಪಾದಕರು ಮತ್ತು ಪ್ರತ್ಯೇಕವಾದಿಗಳು ಕಾಶ್ಮೀರ ಮತ್ತು ಕಾಶ್ಮೀರಿ ಜನರ ವೈರಿಗಳು ಅವರು ಹೇಗೆ ನಮ್ಮ ಸಹೋದರರಾಗುತ್ತಾರೆ ಎಂದು ಟೀಕಿಸಿದ್ದಾರೆ. 

Trending News