ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಲವು ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನೀಡದಿರುವ ನಿರ್ಧಾರಕ್ಕೆ ಎಸ್ಪಿ ನಾಯಕ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್ " ಆಡಳಿತ ಪಕ್ಷ ಬಹುತೇಕ ಸಂಸದರಿಗೆ ಟಿಕೆಟ್ ನೀಡಿಲ್ಲ ಇದು ಅವರು ಸೋಲನ್ನು ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ.ಈ ಸೂತ್ರ ನಾಯಕನಿಗೂ ಕೂಡ ಅನ್ವಯವಾಗುತ್ತದೆ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
‘विकास’ पूछ रहा है... सत्ताधारी दल अपने अधिकांश सांसदों को फिर से टिकट क्यों नहीं दे रहा है? इसका मतलब उन्होंने मान ही लिया है कि वो फ़ेल हो चुके हैं. ये फ़ार्मूला टीम पर ही नहीं कप्तान पर भी लागू होना चाहिए.#VikasPoochhRahaHai#MahaParivartan pic.twitter.com/E7dm9YYIzq
— Akhilesh Yadav (@yadavakhilesh) March 20, 2019
ಛತ್ತೀಸ್ ಗಢದಲ್ಲಿ 10 ಸಂಸತ್ ಸದಸ್ಯರನ್ನು ಕೈಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಗೆ ಟೆಕೆಟ್ ನೀಡುವುದನ್ನು ಬಿಜೆಪಿ ಹೇಳಿತ್ತು ಈ ಹಿನ್ನಲೆಯಲ್ಲಿ ಈಗ ಅಖಿಲೇಶ್ ಅವರ ಹೇಳಿಕೆ ಬಂದಿದೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಅವರು ಈ ನಿರ್ಧಾರವು ಪ್ರಮುಖವಾಗಿ ಪಕ್ಷಕ್ಕೆ ಹೊಸ ಮುಖಗಳನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.
ಅಚ್ಚರಿಯೆಂದರೆ ಬಿಜೆಪಿ ಕೈಬಿಟ್ಟಿರುವ ಹೆಸರಿನಲ್ಲಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಮತ್ತು ಏಳು ಬಾರಿ ಲೋಕಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ರಮೇಶ್ ಬೈಸ್ ಅವರಂತಹ ಪ್ರಮುಖ ನಾಯಕರ ಹೆಸರುಗಳಿವೆ.