"ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ"

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ (ಮಾರ್ಚ್ 30) ಕೇಂದ್ರ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ ಎಂದು ಕರೆದಿದ್ದಾರೆ.

Last Updated : Mar 30, 2021, 10:34 PM IST
"ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ" title=
Photo Courtesy: Twitter

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ (ಮಾರ್ಚ್ 30) ಕೇಂದ್ರ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ ಎಂದು ಕರೆದಿದ್ದಾರೆ.

ಮಂಗಳವಾರ ಅಸ್ಸಾಂನಲ್ಲಿ ಪ್ರಚಾರ ನಡೆಸಬೇಕಿದ್ದ ರಾಹುಲ್ ಗಾಂಧಿ (Rahul Gandhi) ಗೆ ಹವಾಮಾನದ ವೈಪರಿತ್ಯದಿಂದಾಗಿ  ಅಲ್ಲಿಗೆ ಬರಲು ಸಾಧ್ಯವಾಗಲಿಲ್ಲ.ಇದರ ಬೆನ್ನಲ್ಲೇ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಜನರನ್ನು ಮನವಿ ಮಾಡುವ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದರು.ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ರಾಜ್ಯದ ಜನರಿಗೆ ನೀಡಿರುವ ಐದು ಭರವಸೆಗಳನ್ನು ಈಡೇರಿಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: "ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ"

'ಸಿಎಎ ಜಾರಿಗೆ ನಾವು ಅನುಮತಿಸುವುದಿಲ್ಲ ಎಂಬುದು ಮೊದಲ ಭರವಸೆ. ಇದು ಅಸ್ಸಾಂ, ನಿಮ್ಮ ಭಾಷೆ, ಇತಿಹಾಸ, ನಿಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಮೇಲಿನ ದಾಳಿ" ಎಂದು ರಾಹುಲ್ ಗಾಂಧಿ ಹೇಳಿದರು. ಐದು ವರ್ಷಗಳಲ್ಲಿ ಐದು ಲಕ್ಷ ಸರ್ಕಾರಿ ಉದ್ಯೋಗಗಳ ಸೃಷ್ಟಿ, ಚಹಾ ತೋಟ ಕಾರ್ಮಿಕರ ದೈನಂದಿನ ಕನಿಷ್ಠ ವೇತನವನ್ನು 365 ರೂ.ಗೆ ಹೆಚ್ಚಿಸುವುದು, ಎಲ್ಲರಿಗೂ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ಗೃಹಿಣಿಗೆ ತಿಂಗಳಿಗೆ 2,000 ರೂ ನೀಡುವುದಾಗಿ ಹೇಳಿದರು.

ಇದನ್ನೂ ಓದಿ: "ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಿಎಎ ಜಾರಿ ಇಲ್ಲ"

ಸಂವಿಧಾನದ 244 ಎ ವಿಧಿಯನ್ನು ರದ್ದುಗೊಳಿಸಲು ಯತ್ನಿಸುತ್ತಿರುವುದರಿಂದ ಬುಡಕಟ್ಟು ಜನರು ಬಿಜೆಪಿಯಿಂದ ಆಕ್ರಮಣಕ್ಕೆ ಒಳಗಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಆರ್ಟಿಕಲ್ 244 ಎ ಅಸ್ಸಾಂನಲ್ಲಿ ಕೆಲವು ಬುಡಕಟ್ಟು ಪ್ರದೇಶಗಳನ್ನು ಒಳಗೊಂಡ ಸ್ವಾಯತ್ತ ರಾಜ್ಯವನ್ನು ರಚಿಸುತ್ತದೆ. ಇದು ಸ್ಥಳೀಯ ಶಾಸಕಾಂಗ ಅಥವಾ ಮಂತ್ರಿಗಳ ಮಂಡಳಿ ಅಥವಾ ಎರಡನ್ನೂ ರಚಿಸುವ ಬಗ್ಗೆಯೂ ವ್ಯವಹರಿಸುತ್ತದೆ.

ಸಿಲ್ಚಾರ್‌ನಲ್ಲಿ ಮಹಿಳೆಯರೊಂದಿಗೆ ಸಂವಾದಾತ್ಮಕ ಅಧಿವೇಶನದ ಜೊತೆಗೆ, ದಿಮಾ ಹಸಾವೊ ಬೆಟ್ಟದ ಜಿಲ್ಲೆಯ ಹಫ್ಲಾಂಗ್ ಮತ್ತು ಕಾರ್ಬಿ ಆಂಗ್ಲಾಂಗ್ ಬೆಟ್ಟ ಜಿಲ್ಲೆಯ ಬೊಕಾಜನ್‌ನಲ್ಲಿ ತಲಾ ಒಂದು ಮತದಾನ ರ್ಯಾಲಿಯನ್ನು ಕಾಂಗ್ರೆಸ್ ಮುಖಂಡರು ಉದ್ದೇಶಿಸಲಾಗಿತ್ತು.ಕೆಟ್ಟ ಹವಾಮಾನದಿಂದಾಗಿ, ನಾನು ಇಂದು ನಿಮ್ಮನ್ನು ತಲುಪಲು ಸಾಧ್ಯವಾಗಲಿಲ್ಲ.ಆದರೆ ನನ್ನ ಮತ್ತು  ಮೈತ್ರಿಕೂಟದ ಸಂದೇಶವು ಸ್ಪಷ್ಟವಾಗಿದೆ- ನಾವು ಐದು ಖಾತರಿಗಳೊಂದಿಗೆ ಅಸ್ಸಾಂ ಅನ್ನು ಪ್ರಗತಿ ಮತ್ತು ಸಮೃದ್ಧಿಯ ಹಾದಿಗೆ ಕೊಂಡೊಯ್ಯುತ್ತೇವೆ" ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News