Karnataka Election Result 2023: ಉತ್ತರಕನ್ನಡ ಜಿಲ್ಲೆಯಲ್ಲಿ 4 ಕ್ಷೇತ್ರದಲ್ಲಿ ಕಾಂಗ್ರೆಸ್, 2 ರಲ್ಲಿ ಬಿಜೆಪಿಗೆಲುವು

Karntaka Assembly election result :ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.  ಈ ಬಾರಿ ಇಲ್ಲಿನ ಮತದಾರ  ಸೈ ಅಂದಿದ್ದು ಯಾರಿಗೆ? ಜಿಲ್ಲೆಯಲ್ಲಿ ಯಾರಿಗೆ ಸಿಹಿ? ಯಾರಿಗೆ ಕಹಿ ? 

Written by - Ranjitha R K | Last Updated : May 13, 2023, 04:36 PM IST
  • ಕುಮಟಾದಲ್ಲಿ ಜೆಡಿಎಸ್ ಮುನ್ನಡೆ
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಆರು ಮತಕ್ಷೇತ್ರಗಳಿವೆ.
  • ಕಳೆದ ಚುನಾವಣೆಯಲ್ಲಿ ಐದು ಕಡೆ ಕಮಲ ಅರಳಿತ್ತು.
Karnataka Election Result 2023:  ಉತ್ತರಕನ್ನಡ ಜಿಲ್ಲೆಯಲ್ಲಿ  4 ಕ್ಷೇತ್ರದಲ್ಲಿ ಕಾಂಗ್ರೆಸ್,  2 ರಲ್ಲಿ ಬಿಜೆಪಿಗೆಲುವು  title=

Karntaka Assembly election result : ಉತ್ತರಕನ್ನಡ ಜಿಲ್ಲೆಯಲ್ಲಿ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಈ ಜಿಲ್ಲೆಯಲ್ಲಿ ಆರು ಮತ ಕ್ಷೇತ್ರಗಳ ಪೈಕಿ 4 ಕ್ಷೇತ್ರದಲ್ಲಿ ಕಾಂಗ್ರೆಸ್,  ಇನ್ನುಳಿದ ಎರಡು  ಕ್ಷೇತ್ರಗಳಲ್ಲಿ  ಬಿಜೆಪಿ ಗೆಲುವು ಸಾಧಿಸಿದೆ. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ 4 
ಕಾರವಾರ, ಶಿರಸಿ, ಹಳಿಯಾಳ ಮತ್ತು ಭಟ್ಕಳ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಇನ್ನುಳಿದ ಯಲ್ಲಾಪುರ ಮತ್ತು ಕುಮಟಾದಲ್ಲಿ   ಬಿಜೆಪಿ ಜಯ ಗಳಿಸಿದೆ. 

ಭಟ್ಕಳ

ಭಟ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಮಂಕಾಳು ವೈದ್ಯ ಆರಿಸಿ ಬಂದಿದ್ದಾರೆ. ಇವರು ಬಿಜೆಪಿಯ ಸುನಿಲ ನಾಯ್ಕ ಅವರನ್ನು ಸೋಲಿಸಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು :

ಕಾಂಗ್ರೆಸ್‌‌ -ಮಂಕಾಳು ವೈದ್ಯ - 99603
ಬಿಜೆಪಿ - ಸುನೀಲ್‌ ಬಿ. ನಾಯ್ಕ - 66946
ಆಮ್‌ ಆದ್ಮಿ - ಡಾ.ನಸೀಮ್‌ ಅಹ್ಮದ್‌ - 1003

ಕಾರವಾರ :

ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸತೀಶ್ ಸೈಲ್ ಆಯ್ಕೆಯಾಗಿದ್ದಾರೆ. ಇವರು ಬಿಜೆಪಿಯ ರೂಪಾಲಿ ನಾಯ್ಕ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು :

ಕಾಂಗ್ರೆಸ್‌‌ - ಸತೀಶ್‌ ಸೈಲ್ - 76305
ಬಿಜೆಪಿ - ರೂಪಾಲಿ ನಾಯ್ಕ್ - 73890
ಜೆಡಿಎಸ್ -ಚೈತ್ರಾ ಕೊಠಾರಕರ್‌ - 2864

 

ಯಲ್ಲಾಪುರ 

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಬಿಜೆಪಿಯ  ಶಿವರಾಮ ಹೆಬ್ಬಾರ್ ಆಯ್ಕೆಯಾಗಿ ಬಂದಿದ್ದಾರೆ. ಇವರು ಕಾಂಗ್ರೆಸ್ ನ ವಿ.ಎಸ್.ಪಾಟೀಲ್‌ ಅವರನ್ನು ಸೋಲಿಸುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು :
ಬಿಜೆಪಿ - ಶಿವರಾಮ ಹೆಬ್ಬಾರ್- 73952
ಕಾಂಗ್ರೆಸ್‌‌ -ವಿ.ಎಸ್.ಪಾಟೀಲ್‌ - 70193
ಜೆಡಿಎಸ್ - ನಾಗೇಶ್ ಹಿನ್ನಯ್ಯ ನಾಯ್ಕ್ - 1630

ಹಳಿಯಾಳ  ಕ್ಷೇತ್ರ  :

ಹಳಿಯಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಕಾಂಗ್ರೆಸ್ ನ ಆರ್. ವಿ ದೇಶಪಾಂಡೆ ಗೆದ್ದಿದ್ದಾರೆ. ಈ ಗೆಲುವಿನ ಮೂಲಕ ದೇಶಪಾಂಡೆ ಒಂಭತ್ತನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು : 
ಕಾಂಗ್ರೆಸ್ - ಆರ್.ವಿ.ದೇಶಪಾಂಡೆ - 56912

ಬಿಜೆಪಿ - ಸುನೀಲ್‌ ಹೆಗೆಡೆ - 53328
ಜೆಡಿಎಸ್ - ಶ್ರೀಕಾಂತ ಘೋಟ್ನೇಕರ -28682

ಕುಮಟಾ ಕ್ಷೇತ್ರ  :

ಕುಮಟಾದಲ್ಲಿ ಬಿಜೆಪಿಯ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದಾರೆ. ಆದರೂ ಕೆಲ ಗೊಂದಲ ಮೂಡಿರುವ ಕಾರಣ ಅಧಿಕಾರಿಗಳು ಅಂಚೆ ಮತ ಎಣಿಕೆ ಮಾಡುತ್ತಿದ್ದಾರೆ. 

ಅಭ್ಯರ್ಥಿಗಳು ಪಡೆದ ಮತಗಳು : 

ಜೆಡಿಎಸ್‌ - ಸೂರಜ್‌ ನಾಯ್ಕ -36587
ಬಿಜೆಪಿ - ದಿನಕರ ಶೆಟ್ಟಿ -34276
ಕಾಂಗ್ರೆಸ್ - ನಿವೇದಿತ ಆಳ್ವಾ -11935

ಶಿರಸಿ ಕ್ಷೇತ್ರ :

ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲಿನ ಕಹಿ ಅನುಭವಿಸುವಂತಾಗಿದೆ.  

ಅಭ್ಯರ್ಥಿಗಳು ಪಡೆದ ಮತಗಳು : 
ಬಿಜೆಪಿ - ವಿಶ್ವನಾಥ ಹೆಗಡೆ ಕಾಗೇರಿ -66954
ಕಾಂಗ್ರೆಸ್‌ - ಭೀಮಣ್ಣ ನಾಯ್ಕ - 76021
ಜೆಡಿಎಸ್‌ - ಉಪೇಂದ್ರ ಪೈ - 8988

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News