ಹಿಜಾಬ್ ಒಳಗೆ ಅಡಗಿರುವ ಮತಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ: ಬಿಜೆಪಿ

ಸಿಎಫ್‌ಐ ಸಂಘಟನೆ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳ ಮನಸ್ಸಿನಲ್ಲಿ‌ ಧಾರ್ಮಿಕ ಮೂಲಭೂತವಾದದ ವಿಷಬೀಜ ಬಿತ್ತಿದ ಫಲವೇ ಇಂದಿನ ಹಿಜಾಬ್ ವಿವಾದ ಅಂತಾ ಬಿಜೆಪಿ ಆರೋಪಿಸಿದೆ.

Written by - Zee Kannada News Desk | Last Updated : Feb 13, 2022, 08:17 AM IST
  • ರಾಜ್ಯದ ಶಾಲಾ-ಕಾಲೇಜುಗಳನ್ನು ಧಾರ್ಮಿಕ ಆಡಂಬೋಲವಾಗಿ ಮಾಡುವುದಕ್ಕೆ ಕೆಲ ಸಂಘಟನೆಗಳು ಪ್ರಯತ್ನಿಸುತ್ತಿವೆ
  • ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ಕೃತ್ಯಕ್ಕೆ ಪ್ರೇರಣೆ ನೀಡುತ್ತಿವೆ
  • ಈ ಸಂಘಟನೆಗಳು ಬೆಳೆಯುವುದಕ್ಕೆ ಪೌಷ್ಠಿಕ ಆಹಾರ ನೀಡಿದ್ದೇ ಸಿದ್ದರಾಮಯ್ಯ
ಹಿಜಾಬ್ ಒಳಗೆ ಅಡಗಿರುವ ಮತಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ: ಬಿಜೆಪಿ title=
ಹಿಜಾಬ್ ವಿವಾದ ಕಾಂಗ್ರೆಸ್ ಸೃಷ್ಟಿಸಿದ ಕೂಸು

ಬೆಂಗಳೂರು: ಹಿಜಾಬ್‌ ಒಳಗೆ ಅಡಗಿರುವ ಮತಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ ಅಂತಾ ಬಿಜೆಪಿ ಪ್ರಶ್ನಿಸಿದೆ. #YesToUniform_NoToHijab ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಜಾಬ್ ವಿವಾದ ಕಾಂಗ್ರೆಸ್ ಸೃಷ್ಟಿಸಿದ ಕೂಸು’ ಅಂತಾ ಆರೋಪಿಸಿದೆ.

‘ಹಿಜಾಬ್ ವಿವಾದದ ಹಿಂದೆ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂದು ಸುಳ್ಳು ಆರೋಪ‌ ಮಾಡುವ ಸಿದ್ದರಾಮಯ್ಯ(Siddaramaiah)ನವರೇ ನಿಮಗೆ ಸಿಎಫ್ಐ, ಎಸ್‌ಡಿಪಿಐ, ಪಿಎಫ್‌ಐ ನಂತಹ ಮೂಲಭೂತವಾದಿ ಸಂಘಟನೆಗಳ ಬಗ್ಗೆ ಮಾತನಾಡುವ ಶಕ್ತಿಯಿದೆಯೇ? ಹಿಜಾಬ್‌ ಒಳಗೆ ಅಡಗಿರುವ ಮತಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಬೆದರಿದೆಯೇ?’ ಅಂತಾ ಟೀಕಿಸಿದೆ.

ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿಯಲ್ಲಿನ ತಪ್ಪು ಮಾಹಿತಿ ಸರಿಪಡಿಸಲು ಎರಡು ದಿನಗಳವರೆಗೆ ಕಾಲಾವಕಾಶ

‘ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳನ್ನು ಧಾರ್ಮಿಕ ಆಡಂಬೋಲವಾಗಿ ಮಾಡುವುದಕ್ಕೆ ಕೆಲ ಸಂಘಟನೆಗಳು ಪ್ರಯತ್ನಿಸುತ್ತಿವೆ. ಸಿಎಫ್‌ಐ(CFI), ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ಕೃತ್ಯಕ್ಕೆ ಪ್ರೇರಣೆ ನೀಡುತ್ತಿವೆ. ಈ ಸಂಘಟನೆಗಳು ಬೆಳೆಯುವುದಕ್ಕೆ ಪೌಷ್ಠಿಕ ಆಹಾರ ನೀಡಿದ್ದೇ ಸಿದ್ದರಾಮಯ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂಧ ಸಂಘಟನೆಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು. ಸಿದ್ದರಾಮಯ್ಯ ಪೋಷಿಸಿದ್ದ ಅದೇ ಮತಾಂಧ ಸಂಘಟನೆಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೋಮು ಸಾಮರಸ್ಯ ಕೆಡಿಸುತ್ತಿವೆ’ ಅಂತಾ ಕುಟುಕಿದೆ.

‘ಉಡುಪಿಯಲ್ಲಿ ಹಿಜಾಬ್ ವಿವಾದ(Karnataka Hijab Row) ಸೃಷ್ಟಿಸಿದ ವಿದ್ಯಾರ್ಥಿನಿಯರ ಟ್ವಿಟ್ಟರ್ ಖಾತೆಯಲ್ಲಿನ ಟ್ವೀಟ್‌ಗಳು ಸಾಮೂಹಿಕ ಸನ್ನಿಗೆ ಒಳಗಾಗಿರುವುದನ್ನು ಸ್ಪಷ್ಟಪಡಿಸುತ್ತಿವೆ. ಬಾಹ್ಯ ಶಕ್ತಿಗಳ ಪ್ರಚೋದನೆಗೊಳಗಾಗಿ ಹಿಜಾಬ್‌ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌, ಎಸ್‌ಡಿಪಿಐ ಈ ವಿವಾದಕ್ಕೆ ನೀರೆರೆದು ಪೋಷಿಸುತ್ತಿವೆ. ಹಿಜಾಬ್ ಇಲ್ಲದೆ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿನಿಯರು ಸಿಎಫ್‌ಐ ಸಂಪರ್ಕದಿಂದ ಪ್ರಚೋದನೆಗೆ ಒಳಗಾಗಿದ್ದಾರೆ. ನ್ಯಾಯಾಲಯವೇ ಇತ್ಯರ್ಥ ಪಡಿಸಿದ ಬಾಬ್ರಿ ಮಸೀದಿ ವಿವಾದದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ನ್ಯಾಯಾಂಗವನ್ನು ಅನುಮಾನಿಸುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಇವರು ಅಮಾಯಕರೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕಾಲೇಜು ರಜೆ ಫೆ.16 ವರೆಗೆ ಮುಂದುವರಿಕೆ

‘ಸಿಎಫ್‌ಐ ಸಂಘಟನೆ ಶಾಲಾ- ಕಾಲೇಜುಗಳ(School & College) ವಿದ್ಯಾರ್ಥಿಗಳ ಮನಸ್ಸಿನಲ್ಲಿ‌ ಧಾರ್ಮಿಕ ಮೂಲಭೂತವಾದದ ವಿಷಬೀಜ ಬಿತ್ತಿದ ಫಲವೇ ಇಂದಿನ ಹಿಜಾಬ್ ವಿವಾದ. ಇದಕ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರ ಬೆಂಬಲವೂ ಇದೆ. ಇದಕ್ಕಾಗಿ ಎಲ್ಲಾ ರೀತಿಯ ನೆರವು ಕೆಪಿಸಿಸಿ ಕಚೇರಿಯಿಂದಲೇ ಲಭಿಸುತ್ತಿದೆ. ಒಂದು ಕಡೆ ಹಿಜಾಬ್‌ ವಿವಾದಕ್ಕೆ ತುಪ್ಪ ಸುರಿಯಲು ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೆಲವು ಮತಾಂಧರು ಸೇರಿಕೊಳ್ಳುತ್ತಾರೆ. ಇನ್ನೊಂದು ಕಡೆ ಕೆಪಿಸಿಸಿ ಕಚೇರಿಯಿಂದಲೇ ನೇಮಕಗೊಂಡ ವಕೀಲರು ವಿವಾದದ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಾರೆ. ಹಿಜಾಬ್‌ ವಿವಾದ ಕಾಂಗ್ರೆಸ್‌ ಸೃಷ್ಟಿಸಿದ ಕೂಸು’ ಅಂತಾ ಬಿಜೆಪಿ ಆರೋಪಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News