ಕೈ ಕುಲುಕಲು ರಾಹುಲ್ ಗಾಂಧಿ ಬಸ್ ಬೆನ್ನತ್ತಿದ ಬಾಲಕ!

     

Last Updated : Feb 11, 2018, 11:49 AM IST
ಕೈ ಕುಲುಕಲು ರಾಹುಲ್ ಗಾಂಧಿ ಬಸ್ ಬೆನ್ನತ್ತಿದ ಬಾಲಕ! title=
ಸಾಂದರ್ಭಿಕ ಚಿತ್ರ

ಕೊಪ್ಪಳ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಜನಾಶೀರ್ವಾದ ಯಾತ್ರೆಯ ಎರಡನೇ ದಿನದ ಪ್ರವಾಸವನ್ನು ಕುಕನೂರಿನಿಂದ ಆರಂಭಿಸಿದ್ದಾರೆ.

ಕುಕನೂರಿನ ಅತಿಥಿಗೃಹದಲ್ಲಿ ಬೆಳಗಿನ ಉಪಹಾರ ಸೇವಿಸಿದ ರಾಹುಲ್ ರೋಡ್ ಶೋ ಮೂಲಕ ತಮ್ಮ ಎರಡನೇ ದಿನದ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ನೆಚ್ಚಿನ ನಾಯಕನ ಕಣ್ಣು ತುಂಬಿಕೊಳ್ಳಲು ಅತಿಥಿಗೃಹದ ಸುತ್ತಮುತ್ತಲು ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿ ಜಮಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಕನೊಬ್ಬ ಕುಕನೂರಿನ ರಾಹುಲ್ ಗಾಂಧಿ ರೋಡ್ ಶೋ ಸಂದರ್ಭದಲ್ಲಿ ಅವರನ್ನು ನೋಡಲೇಬೇಕೆಂದು ಹಠತೊಟ್ಟು ಜನರ ಮಧ್ಯದಿಂದ ನುಗ್ಗಿ ಅವರ ಬಸ್ ಬೆನ್ನತ್ತಿದ್ದಾನೆ, ಇದನ್ನು ಗಮನಿಸಿದ ರಾಹುಲ್ ಗಾಂಧಿಯವರು ಬಸ್ ನಿಲ್ಲಿಸಿ ಆ ಬಾಲಕನ್ನು ಎತ್ತಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

Trending News