'ವಜ್ರಮಹೋತ್ಸವ'ಕ್ಕೆ ಜೆಡಿಎಸ್ ಅಪಸ್ವರ

ದುಂದುವೆಚ್ಚ ಹಿನ್ನೆಲೆಯಲ್ಲಿ ವಿಧಾನಸೌಧ ವಜ್ರಮಹೋತ್ಸವದಲ್ಲಿ ಒಂದು ಹನಿ ನೀರೂ ಸಹ ಕುಡಿಯದಂತೆ ಕಟ್ಟಪ್ಪಣೆ ವಿಧಿಸಿದ ಕುಮಾರಣ್ಣ.

Last Updated : Oct 25, 2017, 10:07 AM IST
'ವಜ್ರಮಹೋತ್ಸವ'ಕ್ಕೆ ಜೆಡಿಎಸ್ ಅಪಸ್ವರ  title=

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವ ಹಿನ್ನೆಲೆಯಲ್ಲಿ 10 ಕೋಟಿ ರೂ. ವೆಚ್ಚ ಮಾಡುತ್ತಿರುವ ಸರ್ಕಾರದ ನಿಲುವನ್ನು ವಿರೋಧಿಸುತ್ತಿರುವ ಜೆಡಿಎಸ್ ರಾಷ್ಟ್ರಪತಿ ಭಾಷಣವನ್ನು ಹೊರತುಪಡಿಸಿ ಬೇರೆ ಯಾವ ಕಾರ್ಯಕ್ರಮಗಳನ್ನು ಹಾಜರಾಗದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ದುಂದುವೆಚ್ಚ ಹಿನ್ನೆಲೆಯಲ್ಲಿ ವಿಧಾನಸೌಧ ವಜ್ರಮಹೋತ್ಸವದಲ್ಲಿ ಒಂದು ಹನಿ ನೀರೂ ಸಹ ಕುಡಿಯದಂತೆ ಕಟ್ಟಪ್ಪಣೆ ವಿಧಿಸಿದ ಕುಮಾರಣ್ಣ... ಏತಕ್ಕಾಗಿ ಇಷ್ಟು ದುಂದುವೆಚ್ಚ? ಯಾರಿಗಾಗಿ ಇಷ್ಟೆಲ್ಲಾ ಕಾರ್ಯಕ್ರಮಗಳು? ಪ್ರತಿ ಊಟಕ್ಕೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾ? ಎಂದು ಪ್ರಶ್ನಿಸಿದ್ದಾರೆ. 

ಇಷ್ಟು ದುಬಾರಿ ವೆಚ್ಚದಿಂದ ನಡೆಸಲಾಗುತ್ತಿರುವ ಕಾರ್ಯಕ್ರಮದಲ್ಲಿ ಒಂದು ಗುಟುಕು ನೀರನ್ನೂ ಸಹ ಕುಡಿಯದಂತೆ ಕಟ್ಟಪ್ಪಣೆ ವಿಧಿಸಿರುವ ಜೆಡಿಎಸ್ ರಾಷ್ಟ್ರಪತಿಯೊಂದಿಗೆ ತೆಗೆಸಿಕೊಳ್ಳುವ ಗ್ರೂಪ್ ಫೋಟೋಗೂ ಗೈರಾಗಲು ನಿರ್ಧರಿಸಿದೆ.

Trending News