ನಾನು ಟೀಕೆಗಳನ್ನೇ ಗೌರವಗಳೆಂದು ಸ್ವೀಕರಿಸುತ್ತೇನೆ ಹೊರತು ಅವಮಾನಗಳೆಂದಲ್ಲ- ಸಿದ್ದರಾಮಯ್ಯ

     

Last Updated : Feb 11, 2018, 04:22 PM IST
ನಾನು ಟೀಕೆಗಳನ್ನೇ ಗೌರವಗಳೆಂದು ಸ್ವೀಕರಿಸುತ್ತೇನೆ ಹೊರತು ಅವಮಾನಗಳೆಂದಲ್ಲ- ಸಿದ್ದರಾಮಯ್ಯ title=

ಬೆಂಗಳೂರು: ನಾನು ಟೀಕೆಗಳನ್ನೇ ಗೌರವದ ಪದಕವೆಂದು ಸ್ವೀಕರಿಸುತ್ತೇನೆ ಹೊರತು ಅವಮಾನಗಳೆಂದಲ್ಲ ಎಂದು ಸಿದ್ದರಾಮಯ್ಯ ತಮ್ಮ ವಿರುದ್ದ ಬರುತ್ತಿರುವ ಟೀಕೆಗಳಿಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿಗೆ ಮಾಜಿ ಪ್ರಧಾನಿ ದೇವೇಗೌಡ ರವರು ಜೆಡಿಎಸ್ ಸಮಾವೇಶದಲ್ಲಿ ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯನವರು  ಒಬ್ಬ ನೀಚ ಮತ್ತು ಸರ್ವಾಧಿಕಾರಿ ರಾಜಕಾರಣಿ ಎಂದು ಕಿಡಿಕಾರಿದ್ದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಯಾರ ಹೆಸರನ್ನು ಉಲ್ಲೇಖಿಸದೆ ಟ್ವೀಟ್ ಮಾಡಿರುವ ಅವರು "ಯಾರು ದಲಿತರ ಹಕ್ಕುಗಳ ಬಗ್ಗೆ,ಹಿಂದುಳಿದವರ ಬಗ್ಗೆ ಮತ್ತು ಅಲ್ಪಸಂಖ್ಯಾತರ ಬಗ್ಗೆ ಹೋರಾಟ ನಡೆಸುತ್ತಾರೋ ಅಂತವರ ಬಗ್ಗೆ ಕೆಲವು ಶಕ್ತಿಯುತ ಜನರು ಅಸಮಾಧಾನಗೊಂಡು ನಿಮ್ಮ ಹೆಸರು ಹಿಡಿದು ಕರೆಯುತ್ತಾರೆ ಮತ್ತು ನಿಂದಿಸುತ್ತಾರೆ. ಆದ್ದರಿಂದ  ಈ ಎಲ್ಲ ಟೀಕೆಗಳನ್ನೇ ನಾನು ಗೌರವದ ಪದಕಗಳೆಂದು ಸ್ವೀಕರಿಸುತ್ತೇನೆ ಹೊರತು, ಅವುಗಳನ್ನು ಎಂದಿಗೂ ಅವಮಾನವೆಂದು ತಿಳಿಯುವುದಿಲ್ಲ" ಎಂದು ತಮ್ಮ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

 

Trending News