KPCC Leader: ರಮೇಶ್ ಜಾರಕಿಹೊಳಿ ಬಳಿ ಸಿಎಂ ಯಡಿಯೂರಪ್ಪ ಸೀಡಿ'

ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್

Last Updated : Mar 28, 2021, 04:15 PM IST
  • ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೂಗತರಾಗಿದ್ದಾರೆ. ಯಡಿಯೂರಪ್ಪ ಭೂಗತ ಆಗಿದ್ದಾರೆ.
  • ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್
  • ಆ ಯುವತಿ ನನಗೆ ಜೀವಬೆದರಿಕೆ ಇದೆ ಅಂತ ಲಿಖಿತವಾಗಿ ದೂರು ಕೊಟ್ಟಿದ್ದಾಳೆ.
KPCC Leader: ರಮೇಶ್ ಜಾರಕಿಹೊಳಿ ಬಳಿ ಸಿಎಂ ಯಡಿಯೂರಪ್ಪ ಸೀಡಿ' title=

ಮೈಸೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭೂಗತರಾಗಿದ್ದಾರೆ. ಯಡಿಯೂರಪ್ಪ ಭೂಗತ ಆಗಿದ್ದಾರೆ. ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸೀಡಿ ಇದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಣ್, ಗ್ರೇಟ್ ಬಿ.ಎಲ್.ಸಂತೋಷ್(BL Santosh) ಎಲ್ಲಿದ್ದೀರಾ?, ಎಲ್ಲಿ ನಿಮ್ಮ‌ ಟ್ವಿಟ್. ಆ ಯುವತಿ ನನಗೆ ಜೀವಬೆದರಿಕೆ ಇದೆ ಅಂತ ಲಿಖಿತವಾಗಿ ದೂರು ಕೊಟ್ಟಿದ್ದಾಳೆ. ನನ್ನನ್ನ ಲೈಗಿಂಕವಾಗಿ ಬಳಸಿಕೊಂಡಿದ್ದಾರೆ ಅಂತ ಆರೋಪಿದ್ದಾಳೆ. ಆದರೂ 376(c) ಆಕ್ಟ್ ಅಡಿಯಲ್ಲಿ ಕೇಸ್ ಹಾಕಿದ್ದೀರ. ಅಧಿಕಾರ ಇದೆ ಅಂತ ಹೆಂಡತಿ ಜೊತೆಗೂ ವ್ಯಕ್ತಿಯೊಬ್ಬ ಒತ್ತಾಯವಾಗಿ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ. ಈ ಕೇಸ್‌ನಲ್ಲಿ ರಮೇಶ್ ಜಾರಕಿಹೊಳಿಗೆ ಆ ಯುವತಿ ಮೇಲೆ ಅಧಿಕಾರ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

K Sudhakar: 1 ರಿಂದ 9ನೇ ತರಗತಿ ಪರೀಕ್ಷೆ ರದ್ದು; ' ಶೀಘ್ರದಲ್ಲಿ ರಾಜ್ಯ ಸರ್ಕಾರದಿಂದ ನಿರ್ಧಾರ'!

ಐಪಿಎಸ್ ಆಫಿಸರ್‌ಗಳೆ ನೀವು ಹಾಕಿರುವ ಕೇಸ್‌ಗಳಿಗೆ ಬೆಲೆ ಕಟ್ಟಬೇಕಾಗುತ್ತದೆ. ನಿರ್ಭಯ ಆಕ್ಟ್ ಅಡಿಯಲ್ಲಿ ದೂರು ದಾಖಲಾದ 8 ಗಂಟೆಯ ಒಳಗೆ ಬಂಧಿಸಬೇಕು. ಆದರೆ ನೀವು ಯಾಕಾಗಿ ಜಾರಕಿಹೊಳಿ ಬಂಧಿಸಿಲ್ಲ. ಜಾರಕಿಹೊಳಿ(Ramesh Jarkiholi) ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ಹಳೆ ಸರ್ಕಾರವನ್ನ ಬಿಳಿಸಿದವನಿಗೆ ಇದ್ಯಾವ ಲೆಕ್ಕ ಅಂತಾರೆ. ಆದರೂ ಅವರನ್ನ ಬಂಧಿಸಿಲ್ಲವೇಕೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಹೇಳಿದ್ದಾರೆ.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧಾರಿತ ಜಾತಿಗಣತಿ ವರದಿ ಬಿಡುಗಡೆಗೆ ಸಿದ್ಧರಾಮಯ್ಯ ಆಗ್ರಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

 

 

Trending News