Hanuma Jayanti: ಹನುಮ ಜಯಂತಿಯಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಸುವರ್ಣಾವಕಾಶ!

Hanuma Jayanti: ಈ ಬಾರಿಯ ಹನುಮ ಜಯಂತಿಯಂದು ವಿಶೇಷ ಯೋಗ ರೂಪುಗೊಳ್ಳುತ್ತಿದ್ದು ಈ ದಿನ ಕೈಗೊಳ್ಳುವ ಕೆಲವು ಕ್ರಮಗಳಿಂದಾಗಿ ಹನುಮಂತನ ಆಶೀರ್ವಾದ ಪಡೆಯುವುದರ ಜೊತೆಗೆ ಶನಿಯ ಕೋಪದಿಂದ ಪರಿಹಾರವನ್ನು ಪಡೆಯಬಹುದಾಗಿದೆ. 

Written by - Yashaswini V | Last Updated : Apr 11, 2022, 02:54 PM IST
  • ಶನಿವಾರ ಹನುಮ ಜಯಂತಿ ಇದೆ
  • ಈ ದಿನ 2 ಶುಭ ಯೋಗಗಳು ರೂಪುಗೊಳ್ಳುತ್ತಿವೆ
  • ಈ ವಿಶೇಷ ಕ್ರಮಗಳು ಶನಿ ದೋಷದಿಂದ ಪರಿಹಾರವನ್ನು ನೀಡುತ್ತವೆ
Hanuma Jayanti: ಹನುಮ ಜಯಂತಿಯಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಸುವರ್ಣಾವಕಾಶ! title=
Hanuman Jayanti remedies to get rid from shani dosh

ಬೆಂಗಳೂರು: ಚೈತ್ರ ಪೂರ್ಣಿಮೆಯ ದಿನದಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ. ಅಂಜನಿಯ ಮಗ ಹನುಮಂತನು ಈ ದಿನ ಜನಿಸಿದನು ಎಂದು ಹೇಳಲಾಗುತ್ತದೆ. ಈ ವರ್ಷ, ಹನುಮಾನ್ ಜಯಂತಿ 16 ಏಪ್ರಿಲ್ 2022 ರಂದು ಆಚರಿಸಲಾಗುವುದು. ಈ ವರ್ಷ ಶನಿವಾರ ಹನುಮ ಜಯಂತಿಯಂದು ಕೆಲವು ವಿಶೇಷ ಯೋಗಗಳು ರೂಪುಗೊಳ್ಳುತ್ತಿದ್ದು ಹನುಮ ಜಯಂತಿಗೆ ಇನ್ನಷ್ಟು ಮಹತ್ವ ಬಂದಿದೆ. ವಾಸ್ತವವಾಗಿ, ಮಂಗಳವಾರ ಮತ್ತು ಶನಿವಾರಗಳು ಭಗವಾನ್ ರಾಮನ ಪರಮ ಭಕ್ತ ಹನುಮಾನ್ ಜಿಗೆ ಸಮರ್ಪಿತವಾಗಿವೆ. ಆದ್ದರಿಂದ ಶನಿವಾರದಂದು ಹನುಮ ಜಯಂತಿ ಆಚರಣೆ ಬಹಳ ವಿಶೇಷವಾಗಿದೆ.

ಹನುಮ ಜಯಂತಿಯಂದು ಶುಭ ಯೋಗಗಳು ರೂಪುಗೊಳ್ಳುತ್ತಿವೆ:
ಹನುಮ ಜಯಂತಿಯ ದಿನದಂದು ರವಿ ಮತ್ತು ಹರ್ಷ ಯೋಗವು ರೂಪುಗೊಳ್ಳುತ್ತಿದೆ. ಇದಲ್ಲದೇ ಈ ದಿನ ಹಸ್ತ ಮತ್ತು ಚಿತ್ತ ನಕ್ಷತ್ರಗಳು ಇರುತ್ತವೆ. ಹನುಮ ಜಯಂತಿಯ ದಿನ ಏಪ್ರಿಲ್ 16 ರಂದು ಬೆಳಿಗ್ಗೆ 05:55 ರಿಂದ ರವಿಯೋಗ ಪ್ರಾರಂಭವಾಗಲಿದ್ದು, ರಾತ್ರಿ 08:40 ರವರೆಗೆ ಇರುತ್ತದೆ. ಇದೇ ವೇಳೆ ಬೆಳಗಿನ ಜಾವ 02:45ಕ್ಕೆ ಆರಂಭವಾಗುವ ಹರ್ಷನ ಯೋಗ ಮರುದಿನ ಏಪ್ರಿಲ್ 17ರವರೆಗೆ ಇರಲಿದೆ.

ಶನಿ ದೋಷ ನಿವಾರಣೆ:
ಶನಿ ದೋಷವನ್ನು ತೊಡೆದುಹಾಕಲು ಹನುಮಾನ್ ಜಿಯನ್ನು ಪೂಜಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಶನಿಯು ಸಹ ಹನುಮಂತನ ಭಕ್ತರ ಮೇಲೆ ತನ್ನ ಕೆಟ್ಟ ದೃಷ್ಟಿಯನ್ನು ಬೀರುವುದಿಲ್ಲ. ಈ ವರ್ಷ ಬಜರಂಗಬಲಿ ಮತ್ತು ಶನಿದೇವರಿಗೆ ಸಮರ್ಪಿತವಾದ ಶನಿವಾರದಂದೇ ಹನುಮ ಜಯಂತಿ ಆಚರಣೆ ಇರುವುದರಿಂದ ಈ ದಿನ ಶನಿದೋಷದಿಂದ ಮುಕ್ತಿ ಹೊಂದಲು ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಉತ್ತಮ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ಯಾವಾಗ, ಯಾರು ರುದ್ರಾಕ್ಷಿಯನ್ನು ಧರಿಸಬಾರದು ಗೊತ್ತಾ

ಹನುಮ ಜಯಂತಿಯಂದು ಈ ಕೆಲಸ ಮಾಡಿದರೆ ಶನಿಯ ವಕ್ರದೃಷ್ಟಿಯಿಂದ ಪಾರಾಗಬಹುದು  :
ಹನುಮ ಜಯಂತಿಯ ದಿನದಂದು ಒಂದು ಚಿಟಿಕೆ ಸಿಂಧೂರವನ್ನು ತುಪ್ಪದಲ್ಲಿ ಬೆರೆಸಿ ಹನುಮಂತನಿಗೆ ಹಚ್ಚಿ. ಇದರಿಂದ ಹನುಮಾನ್ ಜೀ ಸಂತುಷ್ಟನಾಗುತ್ತಾನೆ ಮತ್ತು ತನ್ನ ಭಕ್ತರ ಎಲ್ಲಾ ತೊಂದರೆಗಳು, ದುಃಖಗಳು ಮತ್ತು ಭಯಗಳನ್ನು ತೆಗೆದುಹಾಕುತ್ತಾನೆ. 

ಒಂದು ಚಿಟಿಕೆ ಸಿಂಧೂರದಲ್ಲಿ ತುಪ್ಪವನ್ನು ಬೆರೆಸಿ ಕಾಗದದ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಮಾಡಿ. ಹನುಮಾನ್ ಜಿ ಹೃದಯ ಬಳಿ ಅದನ್ನು ಅನ್ವಯಿಸಿ ಮತ್ತು ಅದನ್ನು ನಿಮ್ಮ ಬಳಿ ಸುರಕ್ಷಿತವಾಗಿರಿಸಿಕೊಳ್ಳಿ. ಇದರೊಂದಿಗೆ ಕೆಲವೇ ದಿನಗಳಲ್ಲಿ ಹಣದ ಒಳಹರಿವು ಹೆಚ್ಚಾಗಲಿದ್ದು, ಹಣದ ನಷ್ಟ ನಿಲ್ಲಲಿದೆ. 

ಹನುಮ ಜಯಂತಿಯ ದಿನದಂದು ಸಾಸಿವೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಹನುಮಂತನಿಗೆ ಹಚ್ಚಿ. ನಂತರ ಉಳಿದ ಸಿಂಧೂರದಿಂದ ಮನೆಯ ಮುಖ್ಯದ್ವಾರದಲ್ಲಿ ಸ್ವಸ್ತಿಕವನ್ನು ಮಾಡಿ. ನೀವು ಇತರ ಕೋಣೆಗಳ ಬಾಗಿಲುಗಳ ಮೇಲೆ ಸ್ವಸ್ತಿಕವನ್ನು ಸಹ ಮಾಡಬಹುದು. ಇದರಿಂದಾಗಿ ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ. 

ಇದನ್ನೂ ಓದಿ- ಈ ದಿನದಂದು ವರ್ಷದ ಮೊದಲ ಸೂರ್ಯಗ್ರಹಣ, ಈ 4 ರಾಶಿಯವರ ಜೀವನದಲ್ಲಿ ವಿಶೇಷ ಬದಲಾವಣೆ

ಮದುವೆಯಲ್ಲಿ ಅಡೆತಡೆಗಳಿದ್ದರೆ, ಹನುಮಂತನ ಪಾದದ ಮೇಲೆ ಒಂದು ಚಿಟಿಕೆ ಸಿಂಧೂರವನ್ನು ಇರಿಸಿ ಮತ್ತು ಶೀಘ್ರದಲ್ಲೇ ಕಂಕಣ ಭಾಗ್ಯ ಒದಗುವಂತೆ ಪ್ರಾರ್ಥಿಸಿ. ನಂತರ ಈ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳಿ. ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಮದುವೆ ಯೋಗ ಕೂಡಿ ಬರಲಿದೆ.

ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಯಿಂದ ಪಾರಾಗಲು, ಬೆಲ್ಲ ಮತ್ತು ಕಾಳುಗಳನ್ನು ನೈವೇದ್ಯ ಮಾಡುವ ಮೂಲಕ ಬಡವರಿಗೆ ವಿತರಿಸಿ. 

ಸಾಲದಿಂದ ಮುಕ್ತಿ ಪಡೆಯಲು ನಿಮ್ಮ ವಯಸ್ಸಿನಷ್ಟು ಅರಳಿ ಮರದ ಎಲೆಗಳನ್ನು ತೆಗೆದುಕೊಳ್ಳಿ. ನಂತರ ಮಲ್ಲಿಗೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಮತ್ತು ಪ್ರತಿ ಎಲೆಯ ಮೇಲೆ ರಾಮ ಎಂದು ಬರೆಯುವ ಮೂಲಕ ಹನುಮಂತನಿಗೆ ಅರ್ಪಿಸಿ.  ಈ ರೀತಿ ಮಾಡುವುದರಿಂದ ಸಾಲದ ಸಮಸ್ಯೆಯಿಂದ ಹೊರಬರಬಹುದು ಎಂಬ ನಂಬಿಕೆ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News