Maha Shivratri 2022 ರಂದು ಈ ಐದು ರಾಶಿಗಳ ಜನರ ಭಾಗ್ಯ ಹೊಳೆಯಲಿದೆ, ಶಿವನ ವಿಶೇಷ ಕೃಪೆ ಇವರ ಮೇಲಿರಲಿದೆ

Mahashivratri 2022: ಈ ವರ್ಷ ಮಾರ್ಚ್ 1 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಗ್ರಹಗಳ ವಿಶೇಷ ಸಂಯೋಜನೆ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಮಕರ ರಾಶಿಯ 12 ನೇ ಮನೆಯಲ್ಲಿ ಪಂಚಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಮಂಗಳ ಮತ್ತು ಶನಿಯ ಜೊತೆಗೆ ಶುಕ್ರ, ಬುಧ ಮತ್ತು ಚಂದ್ರ ಕೂಡ ಈ ದಿನ ಮಕರ ರಾಶಿಯಲ್ಲಿ ವಿರಾಜಮಾನರಾಗಿರಲಿದ್ದಾರೆ. ಇದರೊಂದಿಗೆ ಸೂರ್ಯ ಮತ್ತು ಗುರುವಿನ ಸಂಯೋಜನೆ ಕೂಡ ಇರಲಿದೆ.  

Written by - Nitin Tabib | Last Updated : Feb 20, 2022, 08:35 PM IST
  • ಶಿವನ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಲಿದೆ
  • ಈ ರಾಶಿಯ ಜನರಿಗೆ ಮಹಾಶಿವರಾತ್ರಿ ವಿಶೇಷವಾಗಿರಲಿದೆ
  • ಮಹಾಶಿವರಾತ್ರಿಯ ಶುಭ ಸಂದಭದಲ್ಲಿ ಪಂಚಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ
Maha Shivratri 2022 ರಂದು ಈ ಐದು ರಾಶಿಗಳ ಜನರ ಭಾಗ್ಯ ಹೊಳೆಯಲಿದೆ, ಶಿವನ ವಿಶೇಷ ಕೃಪೆ ಇವರ ಮೇಲಿರಲಿದೆ title=
Maha Shivratri 2022 (File Photo)

ನವದೆಹಲಿ: Mahashivratri Auspicious Yoga - ಈ ವರ್ಷ ಮಾರ್ಚ್ 1 ರಂದು (When Is Mahashivratri) ಮಹಾಶಿವರಾತ್ರಿಯನ್ನು (Mahashivratri Auspicious Time 2022) ಆಚರಿಸಲಾಗುತ್ತದೆ. ಈ ದಿನದಂದು ಗ್ರಹಗಳ ವಿಶೇಷ ಸಂಯೋಜನೆ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಮಕರ ರಾಶಿಯ 12 ನೇ ಮನೆಯಲ್ಲಿ ಪಂಚಗ್ರಹಿ ಯೋಗವು ರೂಪುಗೊಳ್ಳುತ್ತಿದೆ (Mahashivratri Pancha Grahi Yoga). ಮಂಗಳ ಮತ್ತು ಶನಿಯ ಜೊತೆಗೆ ಶುಕ್ರ, ಬುಧ ಮತ್ತು ಚಂದ್ರ ಕೂಡ ಈ ದಿನ ಮಕರ ರಾಶಿಯಲ್ಲಿ ವಿರಾಜಮಾನರಾಗಿರಲಿದ್ದಾರೆ. ಇದರೊಂದಿಗೆ ಸೂರ್ಯ ಮತ್ತು ಗುರುವಿನ ಸಂಯೋಜನೆ ಕೂಡ ಇರಲಿದೆ. ಇದಲ್ಲದೆ, ರಾಹು ವೃಷಭ ರಾಶಿಯ ನಾಲ್ಕನೇ ಮನೆಯಲ್ಲಿ ಇರಲಿದ್ದು, ಕೇತುವು ವೃಶ್ಚಿಕ ರಾಶಿಯ 10 ನೇ ಮನೆಯಲ್ಲಿ ಇರಲಿದ್ದಾನೆ. ಈ ಕಾರಣದಿಂದಾಗಿ 5 ರಾಶಿಗಳ ಜನರು ಮಹಾಶಿವರಾತ್ರಿಯ ದಿನದಂದು ತುಂಬಾ ಅದೃಷ್ಟವಂತರಾಗಿರಲಿದ್ದಾರೆ. ಈ ರಾಶಿಯ ಸ್ಥಳೀಯರು ಶಿವನ ವಿಶೇಷ ಅನುಗ್ರಹವನ್ನು ಹೊಂದಿರಲಿದ್ದಾರೆ. ಯಾವ ರಾಶಿಯ ಜನರ ಮೇಲೆ ಶಿವರಾತ್ರಿಯ ದಿನ (Mahashivratri Worship Time) ಶಿವನ ವಿಶೇಷ ಕೃಪೆ ಇರಲಿದೆ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ
ಮೇಷ ರಾಶಿಯವರಿಗೆ ಮಹಾಶಿವರಾತ್ರಿಯು ಅತ್ಯಂತ ಮಂಗಳಕರಗಿರಲಿದೆ. ಈ ದಿನ ಮೇಷ ರಾಶಿಯವರಿಗೆ ಶಿವನ ವಿಶೇಷ ಅನುಗ್ರಹ ಪ್ರಾಪ್ತಿಯಾಗಲಿದೆ. ಇದರೊಂದಿಗೆ, ಇಷ್ಟಾರ್ಥ ಮನೋಕಾಮನೆಗಳು ಪೂರ್ಣಗೊಳ್ಳುವ ಯೋಗ ನಿರ್ಮಾಣಗೊಳ್ಳುತ್ತಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ಸಂಕೆತಗಳಿವೆ. ಅಲ್ಲದೆ ಮಹಾಶಿವರಾತ್ರಿಯ ದಿನದಂದು ಇವರು ವಿಶೇಷ ಲಾಭವನ್ನು ಪಡೆಯಬಹುದು. ಈ ದಿನ ಶಿವಲಿಂಗಕ್ಕೆ ಶಮಿ ಎಲೆ ಮತ್ತು ತುಪ್ಪವನ್ನು ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ.

ಮಿಥುನ ರಾಶಿ
ಮಹಾಶಿವರಾತ್ರಿಯ ದಿನದಂದು, ಮಿಥುನ ರಾಶಿಯ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇದರ ಜೊತೆಗೆ ಈ ದಿನದಂದು ದೇವಾದಿದೇವ ಮಹಾದೇವನ ವಿಶೇಷ ಆಶೀರ್ವಾದ ಇವರಿಗೆ ಲಭಿಸಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ.

ಇದನ್ನೂ ಓದಿ-ಇನ್ನು ಐದು ದಿನಗಳಲ್ಲಿ ಬೆಳಗಲಿದೆ ಈ ರಾಶಿಯವರ ಅದೃಷ್ಟ , ಶನಿ ದೇವ ನೀಡಲಿದ್ದಾನೆ ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ

ಸಿಂಹ ರಾಶಿ 
ಮಹಾಶಿವರಾತ್ರಿಯ ದಿನದಂದು ಸಿಂಹ ರಾಶಿಯವರಿಗೆ ವಿಶೇಷ ಲಾಭ ಸಿಗುತ್ತದೆ. ಈ ದಿನ ಹಸುವಿನ ಹಾಲಿನ ತುಪ್ಪ ಮತ್ತು ಸಕ್ಕರೆಯನ್ನು ನೈವೇದ್ಯ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಅಲ್ಲದೆ ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ-ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಸೋಲೆಂಬುದಿಲ್ಲ, ಮುಟ್ಟಿದ್ದೆಲ್ಲಾ ಚಿನ್ನ

ಕರ್ಕ ರಾಶಿ
ಮಹಾಶಿವರಾತ್ರಿಯ ದಿನ ಕರ್ಕ ರಾಶಿಯವರಿಗೆ ಶಿವನ ಆಶೀರ್ವಾದ ಲಭಿಸಲಿದೆ. ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಹಾಗೆಯೇ ಶಿವನ ಕೃಪೆಯಿಂದ ಕಷ್ಟಗಳಿಂದ ಮುಕ್ತಿ ದೊರೆಯಲಿದೆ.

ಇದನ್ನೂ ಓದಿ-Health Tips: ರಾತ್ರಿಯಲ್ಲಿ ನಿಮಗೆ ಚೆನ್ನಾಗಿ ನಿದ್ರೆ ಬರುತ್ತಿಲ್ಲವೇ..?

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಜ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News