Shaligram Puja Tips:ಸಾಲಿಗ್ರಾಮವನ್ನು ಈ ರೀತಿ ಪೂಜಿಸಿ ವಿಷ್ಣುವಿನ ಕೃಪೆಗೆ ಪಾತ್ರರಾಗಿ!

Shaligram Puja Tips: ದೇವರ ರೂಪವನ್ನು ಪೂಜಿಸುವುದರಿಂದ ಅದೃಷ್ಟವು ಒಲಿಯುತ್ತದೆ ಎಂದು ನಂಬಲಾಗಿದೆ. ಹಾಗೆಯೇ ವಿಷ್ಣುವಿನ ರೂಪವಾದ ಸಾಲಿಗ್ರಾಮದ ರೂಪವನ್ನು ಉಲ್ಲೇಖಿಸಲಾಗಿದೆ. ಸಾಲಿಗ್ರಾಮವನ್ನು ನಿಯಮಿತವಾಗಿ ಪೂಜಿಸುವುದರಿಂದ, ವ್ಯಕ್ತಿಯ ಭವಿಷ್ಯವು ಬದಲಾಗುತ್ತದೆ ಮತ್ತು ಅವನು ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾನೆ ಎಂದು ನಂಬಲಾಗಿದೆ. ಸಾಲಿಗ್ರಾಮವನ್ನು ಹೇಗೆ ಪೂಜಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.

Written by - Chetana Devarmani | Last Updated : Apr 28, 2022, 04:54 PM IST
  • ಸಾಲಿಗ್ರಾಮವನ್ನು ನಿಯಮಿತವಾಗಿ ಪೂಜಿಸುವುದು ಒಳ್ಳೆಯದು
  • ಸಾಲಿಗ್ರಾಮವನ್ನು ಈ ರೀತಿ ಪೂಜಿಸಿ ವಿಷ್ಣುವಿನ ಕೃಪೆಗೆ ಪಾತ್ರರಾಗಿ!
  • ಸಾಲಿಗ್ರಾಮವನ್ನು ಹೇಗೆ ಪೂಜಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ
Shaligram Puja Tips:ಸಾಲಿಗ್ರಾಮವನ್ನು ಈ ರೀತಿ ಪೂಜಿಸಿ ವಿಷ್ಣುವಿನ ಕೃಪೆಗೆ ಪಾತ್ರರಾಗಿ!  title=
ಸಾಲಿಗ್ರಾಮ

Shaligram Puja Tips: ಕೆಲವೊಮ್ಮೆ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ವ್ಯಕ್ತಿಯ ಅದೃಷ್ಟವು ಬೆಂಬಲಿಸುವುದಿಲ್ಲ. ಕುಟುಂಬದಲ್ಲಿ ಸುಖ ಶಾಂತಿ ಕಾಪಾಡಲು ಹಗಲಿರುಳು ಶ್ರಮಿಸುತ್ತಾನೆ. ತಾಯಿ ಲಕ್ಷ್ಮಿಯ ಆಶೀರ್ವಾದ ಅವರ ಕುಟುಂಬಕ್ಕೆ ದೊರೆತಿಲ್ಲವೇನೋ ಎಂಬ ರೀತಿ ಕಷ್ಟಕ್ಕೆ ಸಿಲುಕುತ್ತಿರುತ್ತಾರೆ. ಅನೇಕ ಬಾರಿ, ಕಠಿಣ ಪರಿಶ್ರಮದ ಹೊರತಾಗಿಯೂ, ವ್ಯಕ್ತಿಯು ಬಯಸಿದ ಪ್ರಯೋಜನವನ್ನು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯದಲ್ಲಿ ದೇವರನ್ನು ಪೂಜಿಸುವ ಜೊತೆಗೆ, ಅವನ ರೂಪವನ್ನು ಪೂಜಿಸಲು ಸಹ ಹೇಳಲಾಗಿದೆ. ದೇವರ ರೂಪವನ್ನು ಪೂಜಿಸುವುದರಿಂದ ಅದೃಷ್ಟವು ಒಲಿಯುತ್ತದೆ ಎಂದು ನಂಬಲಾಗಿದೆ. ಹಾಗೆಯೇ ವಿಷ್ಣುವಿನ ರೂಪವಾದ ಸಾಲಿಗ್ರಾಮದ ರೂಪವನ್ನು ಉಲ್ಲೇಖಿಸಲಾಗಿದೆ. ಸಾಲಿಗ್ರಾಮವನ್ನು ನಿಯಮಿತವಾಗಿ ಪೂಜಿಸುವುದರಿಂದ, ವ್ಯಕ್ತಿಯ ಭವಿಷ್ಯವು ಬದಲಾಗುತ್ತದೆ ಮತ್ತು ಅವನು ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾನೆ ಎಂದು ನಂಬಲಾಗಿದೆ. ಸಾಲಿಗ್ರಾಮವನ್ನು ಹೇಗೆ ಪೂಜಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.

ಇದನ್ನೂ ಓದಿ:ಅಕ್ಷಯ ತೃತೀಯದ ದಿನ ಈ ನಾಲ್ಕು ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿರಿ ಸಂಪತ್ತಿಗೆ ಕೊರತೆ ಇರುವುದೇ ಇಲ್ಲ

ಸಾಲಿಗ್ರಾಮ ಕಪ್ಪು ಬಣ್ಣದ ಪವಿತ್ರ ಕಲ್ಲು. ಇದನ್ನು ನಾರಾಯಣನ ಅಂದರೆ ಭಗವಾನ್ ವಿಷ್ಣುವಿನ ದೇವತಾ ರೂಪವೆಂದು ಪರಿಗಣಿಸಲಾಗಿದೆ. ತುಳಸಿಯ ಜೊತೆ ಸಾಮಾನ್ಯವಾಗಿ ಸಾಲಿಗ್ರಾಮ ಕಲ್ಲನ್ನು ಇಡುತ್ತಾರೆ. ಸಾಲಿಗ್ರಾಮ ಕಲ್ಲು ವಿಷ್ಣುವಿನ ರೂಪ ಎಂದು ನಂಬಲಾಗಿದೆ. 

ಸಾಲಿಗ್ರಾಮದ ನಿತ್ಯ ಪೂಜೆಯಿಂದ ಸಿಗುವ ಫಲ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಗಿಡದೊಂದಿಗೆ ಸಾಲಿಗ್ರಾಮವನ್ನು ನಿಯಮಿತವಾಗಿ ಪೂಜಿಸುವುದರಿಂದ, ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ. ತುಳಸಿ-ಸಾಲಿಗ್ರಾಮವನ್ನು ಪೂಜಿಸುವ ಮನೆಯಲ್ಲಿ ತಾಯಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಅಂತಹ ಮನೆಯಲ್ಲಿ ಬಡತನ ಎಂದಿಗೂ ನೆಲೆಸುವುದಿಲ್ಲವಂತೆ.

ಕಪ್ಪು ಬಣ್ಣದ ಈ ಪವಿತ್ರ ಕಲ್ಲು ನಾರಾಯಣನ ಅವತಾರವೆಂದು ಪರಿಗಣಿಸಲಾಗಿದೆ. ತುಳಸಿಯೊಂದಿಗೆ ಸಾಲಿಗ್ರಾಮವನ್ನು ವಿವಾಹ ಮಾಡುವುದರಿಂದ ಭಕ್ತರು ಎಲ್ಲಾ ದುಃಖಗಳು, ಹಣದ ಕೊರತೆ, ತೊಂದರೆಗಳು, ನೋವುಗಳು ಮತ್ತು ರೋಗಗಳನ್ನು ತೊಡೆದುಹಾಕುತ್ತಾರೆ ಎಂದು ನಂಬಲಾಗಿದೆ. ಅಂತಹ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಮತ್ತು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಕೃಪೆಯು ದೊರೆಯುತ್ತದೆ ಎಂಬ ನಂಬಿಕೆಯಿದೆ. 

ನೀವು ಸಾಲಿಗ್ರಾಮವನ್ನು ತುಳಸಿಯೊಂದಿಗೆ ಇಡದಿದ್ದರೆ, ನೀವು ಅದನ್ನು ಮನೆಯಲ್ಲಿ ಯಾವುದೇ ಪವಿತ್ರ ಸ್ಥಳದಲ್ಲಿ ಸ್ಥಾಪಿಸಬಹುದು. ನೀವು ಸಾಲಿಗ್ರಾಮವನ್ನು ಸ್ಥಾಪಿಸಲು ಯೋಚಿಸುತ್ತಿದ್ದರೆ, ದೀಪಾವಳಿಯ ದಿನದಂದು ಅದನ್ನು ಸ್ಥಾಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಷ್ಣುಸಹಸ್ರನಾಮವನ್ನು ಪಠಿಸುತ್ತ, ಮೊದಲು ಪಂಚಾಮೃತದಿಂದ ಸಾಲಿಗ್ರಾಮಕ್ಕೆ ಅಭಿಷೇಕ ಮಾಡಬೇಕು. ಇದರ ನಂತರ, ದೇವರ ಪಂಚೋಪಚಾರವನ್ನು ಪೂಜಿಸುವ ಮೂಲಕ ಅದನ್ನು ಸ್ಥಾಪಿಸಿ.

ಇದನ್ನೂ ಓದಿ: Sumalatha Ambareesh : 'ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನೆಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ'

ಮನೆಯಲ್ಲಿ ಒಂದು ಸಾಲಿಗ್ರಾಮವನ್ನು ಮಾತ್ರ ಸ್ಥಾಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ತುಳಸಿ ಇಲ್ಲದೆ ಸಾಲಿಗ್ರಾಮವನ್ನು ಪೂಜಿಸಬೇಡಿ. ನಿಯಮಿತವಾಗಿ ಸಾಲಿಗ್ರಾಮಕ್ಕೆ ಪಂಚಾಮೃತ ಅಭಿಷೇಕ ಮಾಡಬೇಕು. ಸಾಲಿಗ್ರಾಮವನ್ನು ಪೂಜಿಸುವ ಜನರು ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಬೇಕು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News