ನವದೆಹಲಿ: ಮಾರ್ಚ್ 1ರ ಮಂಗಳವಾರ ಮಹಾಶಿವರಾತ್ರಿ ಹಬ್ಬ(Mahashivratri 2022). ಶಿವ ಮತ್ತು ತಾಯಿ ಪಾರ್ವತಿಯ ವಿವಾಹದ ಈ ಪವಿತ್ರ ದಿನವು ತುಂಬಾ ವಿಶೇಷವಾಗಿದೆ. ಈ ದಿನ ಪೂಜೆಯ ಜೊತೆಗೆ ತಂತ್ರ-ಮಂತ್ರ, ಉಪಾಯ-ಪರಿಹಾರ ಮಾಡುವುದು ಬಹಳ ಮುಖ್ಯ. ಈ ದಿನ ಮಾಡುವ ಪೂಜೆ, ಪರಿಹಾರಗಳು ಅನೇಕ ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ. ಅಂದು ಮಹಾದೇವನನ್ನು ಮೆಚ್ಚಿಸಲು ಕೆಲವು ವಿಶೇಷ ಪೂಜಾ ವಿಧಿ-ವಿಧಾನ(Mahashivratri Worship Time)ಗಳನ್ನು ಮಾಡಬೇಕು. ಇದರಿಂದ ಅದೃಷ್ಟ ನಿಮ್ಮ ಕೈಹಿಡಿಯಲಿದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ.
ಮಹಾಶಿವರಾತ್ರಿಯ ಈ ಪರಿಹಾರಗಳು ತುಂಬಾ ಪರಿಣಾಮಕಾರಿ
ಧನ ಪ್ರಾಪ್ತಿಗೆ: ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸಿದ ನಂತರ ದಿನದ ಯಾವುದೇ ಸಮಯದಲ್ಲಿ ಮೀನಿಗೆ ಹಿಟ್ಟಿನ ಮಾತ್ರೆಗಳನ್ನು ತಿನ್ನಿಸಿ. ಇದರಿಂದ ಹಣದ ಒಳಹರಿವು ಹೆಚ್ಚುತ್ತದೆ. ಧನ ಪ್ರಾಪ್ತಿಗೆ ಈ ಪರಿಹಾರ ಬಹುಮುಖ್ಯವೆಂದು ಹೇಳಲಾಗಿದೆ.
ಇದನ್ನೂ ಓದಿ: Astrology: ಸಂಗಾತಿಯ ಮೇಲೆ ಕಿಂಚಿತ್ತು ನಂಬಿಕೆ ಇಡಲ್ಲ ಈ 3 ರಾಶಿಗಳ ಜನರು, ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡುತ್ತಾರೆ
ದಾಂಪತ್ಯದಲ್ಲಿನ ಅಡೆತಡೆ ನಿವಾರಿಸಲು: ತಮ್ಮ ದಾಂಪತ್ಯದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಕುಂಕುಮ ಮಿಶ್ರಿತ ಹಾಲನ್ನು ಅರ್ಪಿಸಬೇಕು(Mahashivratri Remedies). ಇದು ಶೀಘ್ರದಲ್ಲೇ ನಿಮಗೆ ಅತ್ಯುತ್ತಮ ಪರಿಹಾರ ನೀಡುತ್ತದೆ.
ಸಂತೋಷ ಮತ್ತು ಸಮೃದ್ಧಿ ಪಡೆಯಲು: ಜೀವನವು ಅನೇಕ ತೊಂದರೆಗಳಿಂದ ಆವೃತವಾಗಿದ್ದರೆ, ಮನೆಯವರ ಆಶೀರ್ವಾದ ಕಡಿಮೆಯಾದರೆ ಮಹಾಶಿವರಾತ್ರಿಯಂದು ನಂದಿಗೆ (ಗೂಳಿ) ಹಸಿರು ಮೇವನ್ನು ತಿನ್ನಿಸಿ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ.
ಇಷ್ಟಾರ್ಥಗಳ ನೆರವೇರಿಕೆಗೆ: ಮಹಾಶಿವರಾತ್ರಿಯ ದಿನ 21 ಎಲೆಗಳ ಮೇಲೆ ಶ್ರೀಗಂಧದಿಂದ ‘ಓಂ ನಮಃ ಶಿವಾಯ’ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸಿದರೆ ಭೋಲೇನಾಥನು ಸಂತೋಷಗೊಂಡು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.
ಮನಃಶಾಂತಿ ಪಡೆಯಲು: ಮಹಾಶಿವರಾತ್ರಿಯಂದು ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಶಿವಲಿಂಗಕ್ಕೆ ಅರ್ಪಿಸಬೇಕು.
ಪಿತೃ ದೋಷ ನಿವಾರಣೆಗೆ: ಮಹಾಶಿವರಾತ್ರಿಯ ದಿನ ಬಡವರಿಗೆ ಅನ್ನ ನೈವೇದ್ಯ ಮಾಡಿ, ಇದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಮನೆಯಲ್ಲಿ ಸಂತಸವನ್ನು ತರುತ್ತಾರೆ.
ಇದನ್ನೂ ಓದಿ: Vastu Suggestions: ವ್ಯಾಪಾರ ಮತ್ತು ನೌಕರಿಯಲ್ಲಿ ಉನ್ನತಿಗಾಗಿ ಈ ಉಪಾಯಗಳನ್ನು ಅನುಸರಿಸಿ ನೋಡಿ!
ಸಂತಾನ ಪ್ರಾಪ್ತಿಗೆ: ಮಹಾಶಿವರಾತ್ರಿ(Mahashivratri)ಯ ದಿನ ಹಿಟ್ಟಿನಿಂದ 11 ಶಿವಲಿಂಗಗಳನ್ನು ಮಾಡಿ ಜಲಾಭಿಷೇಕ ಮಾಡುವುದರಿಂದ ಸಂತಾನ ಸುಖ ಬೇಗ ಸಿಗುತ್ತದೆ.
ಸಂತೋಷ ಪಡೆಯಲು: ಮಹಾಶಿವರಾತ್ರಿಯ ದಿನ ಶಿವನಿಗೆ ಎಳ್ಳು ಮತ್ತು ಬಾರ್ಲಿಯನ್ನು ಅರ್ಪಿಸುವುದರಿಂದ ಪಾಪಗಳು ಮತ್ತು ದುಃಖಗಳು ನಾಶವಾಗುತ್ತವೆ. ಜೀವನದಲ್ಲಿ ಸಂತೋಷ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಹಾಶಿವರಾತ್ರಿ: ಭಕ್ತಿಯಿಂದ ಈ ಕೆಲಸ ಮಾಡಿದರೆ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ
ಮಹಾಶಿವರಾತ್ರಿಯಂದು ಪೂಜೆ ಬಳಿಕ ಮೀನಿಗೆ ಹಿಟ್ಟಿನ ಮಾತ್ರೆ ತಿನ್ನಿಸಿದರೆ ಧನ ಪ್ರಾಪ್ತಿಯಾಗುತ್ತದೆ
ದಾಂಪತ್ಯದಲ್ಲಿನ ಅಡೆತಡೆ ನಿವಾರಿಸಲು ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಕುಂಕುಮ ಮಿಶ್ರಿತ ಹಾಲನ್ನು ಅರ್ಪಿಸಬೇಕು
ಮಹಾಶಿವರಾತ್ರಿಯಂದು ನಂದಿಗೆ ಹಸಿರು ಮೇವು ತಿನ್ನಿಸಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ