/kannada/photo-gallery/rahu-star-transit-will-bless-these-zodiac-sign-221364 ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ  ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ 221364

ಬೆಂಗಳೂರು : ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಹೊರತುಪಡಿಸಿ ಕಾಂಗ್ರೆಸ್ ಹೇಳಿದ ಪ್ರಣಾಳಿಕೆ ಪ್ರಕಾರ ʼಅನ್ನ ಭಾಗ್ಯʼ ಯೋಜನೆ ಅಡಿಯಲ್ಲಿ ಒಟ್ಟು ಹತ್ತು ಕೆಜಿ ಅಕ್ಕಿ ನೀಡುವುದಕ್ಕೆ ಕೇಂದ್ರ ಆಹಾರ ನಿಗಮ (FCI) ಸ್ಥಗಿತಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನ್ನಾಡಿದ ಅವರು, 5 ಗ್ಯಾರಂಟಿ ಘೋಷಿಸಿದ್ದೇವೆ. ಒಂದು ಗ್ಯಾರಂಟಿ ಘೋಷಿಸಿ ಜಾರಿಗೆ ತಂದಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವವರು, ಅಂತ್ಯೋದಯ ಕಾರ್ಡದಾರರಿಗೆ ಅನ್ನಭಾಗ್ಯ ನೀಡಲು ತಿಳಿದ್ದೆವು. ಈಗ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದೇವೆ. ಜುಲೈ 1 ರಿಂದ ಜಾರಿಗೆ ತರುತ್ತಿದ್ದೇವೆ. ಈಗಾಗಲೇ ಒಂದು ಗ್ಯಾರೆಂಟಿ ಲಾಂಚ್ ಮಾಡಲಾಗಿದೆ, ಇನ್ನು ಉಳಿದಂತೆ ಅಂತ್ಯೋದಯ ಕಾರ್ಡ್ ಅವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದೇವೆ.

ಇದನ್ನೂ ಓದಿ: ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಜಾರಿಕೊಳ್ಳಬೇಡಿ : ಮಾಜಿ ಸಚಿವ ಸುನಿಲ್ ಕುಮಾರ್

ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಹೆಚ್ಚುವರಿಯಾಗಿ 5 ಕೆಜಿ ಕೊಡಲು ಇಷ್ಟು ಬೇಕು. ಎಫ್‌ಸಿಐ ಜತೆ ಅಧಿಕಾರಿಗಳು ಚೆರ್ಚಿಸಿದ್ದಾರೆ ಪ್ರತೀ ತಿಂಗಳು ಅಕ್ಕಿ ನೀಡಲು ಸಮ್ಮತಿ ನೀಡಿದ್ದಾರೆ. ಪ್ರತೀ ತಿಂಗಳು ಕೊಡಲು ಡೆಪ್ಯುಟಿ ಜನರಲ್ ಮ್ಯಾನೇಜರ್ ಒಪ್ಪಿಕೊಂಡಿದ್ದಾರೆ. ಪ್ರತೀ ಕೆಜಿಗೆ 34ರೂ. ಸಾಗಾಣಿಕೆ ವೆಚ್ಚ 2.60 .ಒಟ್ಟು 36.60 840 ಕೋಟಿ ರೂ, 10092  ಕೋಟಿ ರೂ ಅಗತ್ಯವಿದೆ. ಒಪ್ಪಿದೆ ಬಳಿಕ 12 ರಂದು ಎರಡು ಪತ್ರ ಬರೆದು ಕಳುಹಿಸಿದ್ದಾರೆ.

ಎಫ್‌ಸಿಐ ಪ್ರಾದೇಶಿಕ ಕಚೇರಿಯಿಂದ ಪತ್ರ ಬಂದಿದೆ. 12 ರಂದು ಈ ಪತ್ರವನ್ನು ಕಳುಹಿಸಿದ್ದಾರೆ. ಷಣ್ಮುಖಪ್ರಿಯ ಪತ್ರ ಬರೆದಿದ್ದಾರೆ,ಮತ್ತೊಂದು 13819 ಮೆಟ್ರಿಕ್ ಟನ್ ಅಕ್ಕಿಯನ್ನು ಕೊಡುತ್ತೇವೆಂದು ಒಪ್ಪಿಗೆ ಪತ್ರ ಕೊಟ್ಟಿದ್ದಾರೆ. ಇದಾದ ಬಳಿಕ 13 ರಂದು ಮತ್ತೊಂದು ಪತ್ರ ಬರೆದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ  ಪತ್ರ ಬರೆದಿದೆ. ಗೋಧಿ ಮತ್ತು ಅಕ್ಕಿಯನ್ನು ಓಎಂಎಸ್‌ಎಸ್ (ಡಿ) ರಾಜ್ಯ ಸರ್ಕಾರವುರಲ್ಲಿ ಸ್ಥಗಿತಗೊಳಿಸಲಾಗುವುದು. ಉತ್ತರ, ಪೂರ್ವ ರಾಜ್ಯಗಳಿಗೆ  ಕೇಂದ್ರದ ಆಹಾರ ಧಾನ್ಯ ಪೂರೈಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಜನ ಅಗತ್ಯ ಜಮೀನು ಕೊಟ್ಟರೆ ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆಗೆ ಸಿದ್ಧ; ಡಿಸಿಎಂ ಡಿ.ಕೆ.ಶಿ

7 ಲಕ್ಷ ಟನ್ ಅಕ್ಕಿ ಸರ್ಕಾರದ ಬಳಿ ಇದ್ದರೂ ನಮ್ಮ ಯೋಜನೆ ಹಾಳು ಮಾಡಲು ಕೇಂದ್ರ ಪ್ರಯತ್ನಿಸಿದೆ. ಛತ್ತೀಸ್ಗಢ, ತೆಲಂಗಾಣ, ಆಂಧ್ರ, ‌ರಾಜ್ಯದ ಸಿಎಂಗಳಿಗೆ ಮನವಿ ಮಾಡಲಾಗುತ್ತಿದೆ. ಇವರನ್ನು ಬಡವರ ವಿರೋಧಿಗಳು ಎಂದು ಕರೆಯಬೇಕಾ ಎಂದು ಹೇಳಿ ರಾಜಕೀಯ ಮಾಡಿದ್ದಾರೆ. ಖಾಸಗಿಯವರಿಗೆ ಅಕ್ಕಿ ಪೂರೈಕೆ ಮಾಡುತ್ತದೆ. ಕೊಡಲ್ಲ ಎಂದಿದ್ದರೆ ಬೇರೆ ರಾಜ್ಯಗಳಲ್ಲಿ ಅಲ್ಲಿ ಖರೀದಿಸಲು ಪ್ಲಾನ್ ಮಾಡಬಹುದಿತ್ತು. ತೆಲಂಗಾಣ ಸರ್ಕಾರದ ಜೊತೆ ಮಾತನಾಡಲು ಮುನಿಯಪ್ಪ ಹೋಗುತ್ತಿದ್ದಾರೆ, ಬಿಜೆಪಿ ಬಡವರ ವಿರೋಧಿ ಸರ್ಕಾರ, ಎಂದು ಕಿಡಿಕಾರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
cm siddaramaiah alegation that BJP is anti poor and they are holding 10 kg rice
News Source: 
Home Title: 

ಹತ್ತು ಕೆಜಿ ಅಕ್ಕಿಗೆ ಕೇಂದ್ರ ತಡೆ.. ಬಿಜೆಪಿ ಬಡವರ ವಿರೋಧಿ : ಸಿದ್ದರಾಮಯ್ಯ ಆರೋಪ

ಹತ್ತು ಕೆಜಿ ಅಕ್ಕಿಗೆ ಕೇಂದ್ರ ತಡೆ.. ಬಿಜೆಪಿ ಬಡವರ ವಿರೋಧಿ : ಸಿದ್ದರಾಮಯ್ಯ ಆರೋಪ
Yes
Is Blog?: 
No
Tags: 
Facebook Instant Article: 
Yes
Highlights: 

ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಘೋಷಣೆ.

ಜುಲೈ 1 ರಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ.

ಹತ್ತು ಕೆಜಿ ಅಕ್ಕಿ ನೀಡುವುದಕ್ಕೆ ಎಫ್‌ಸಿಐ ಸ್ಥಗಿತಗೊಳಿಸಿದೆ ಎಂದ ಸಿಎಂ ಸಿದ್ದರಾಮಯ್ಯ.

Mobile Title: 
ಹತ್ತು ಕೆಜಿ ಅಕ್ಕಿಗೆ ಕೇಂದ್ರ ತಡೆ.. ಬಿಜೆಪಿ ಬಡವರ ವಿರೋಧಿ : ಸಿದ್ದರಾಮಯ್ಯ ಆರೋಪ
Krishna N K
Prashobh Devanahalli
Publish Later: 
No
Publish At: 
Wednesday, June 14, 2023 - 17:41
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
1
Is Breaking News: 
No
Word Count: 
319