/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಮಹದಾಯಿ ನದಿ ವಿವಾದ:ಬಿಜೆಪಿ ಹೈಕಮಾಂಡನಿಂದ ಯಾವುದೇ ಒತ್ತಡ ಇಲ್ಲವೆಂದ ಪರಿಕ್ಕರ್

     

Last Updated : Dec 23, 2017, 01:21 PM IST
ಮಹದಾಯಿ ನದಿ ವಿವಾದ:ಬಿಜೆಪಿ ಹೈಕಮಾಂಡನಿಂದ ಯಾವುದೇ ಒತ್ತಡ ಇಲ್ಲವೆಂದ ಪರಿಕ್ಕರ್ title=

ಪಣಜಿ: ಮಹಾದಾಯಿ ವಿಚಾರವಾಗಿ ಇತ್ತೀಚಿಗೆ ಕರ್ನಾಟಕದ ಬಿಜೆಪಿ ನಾಯಕರು ಮತ್ತು ಅಮಿತ ಶಾ ಸಮ್ಮುಖದಲ್ಲಿ ನವದೆಹಲಿಯಲ್ಲಿ  ನಡೆದಿದ್ದ ಸಭೆಯ ಕುರಿತಾಗಿ ಸ್ಪಷ್ಟಪಡಿಸಿರುವ ಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಮಹದಾಯಿ ನದಿಯ ವಿಷಯದಲ್ಲಿ ಬಿಜೆಪಿ ಹೈಕಮಾಂಡ ನಿಂದ ಯಾವುದೇ ರೀತಿಯ ಒತ್ತಡ ಬಂದಿಲ್ಲ ಎಂದು ತಿಳಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯಡಿಯೂರಪ್ಪರವರಿಗೆ ಬರೆದಿರುವ ಪತ್ರವು  ನ್ಯಾಯಾಧಿಕರಣದ ಅಡಿಯಲ್ಲಿಯೇ ಕರ್ನಾಟಕಕ್ಕೆ ಕುಡಿಯುವ ನೀರನ್ನು ಹಂಚಿಕೆ ಮಾಡುವ ವಿಚಾರವಾಗಿ ಬರೆದದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಗೋವಾ ಕಾಂಗ್ರೆಸ್ ಕೂಡಾ 2007 ಮತ್ತು 2009 ರಲ್ಲಿ  ಕುಡಿಯುವ ನೀರಿನ ವಿಚಾರವಾಗಿ ತಮಗೆ ಯಾವುದೇ ತಕರಾರು ಇಲ್ಲವೆಂದು ಪತ್ರ ಬರೆದಿತ್ತು ಎಂದು ಪರಿಕ್ಕರ್ ತಿಳಿಸಿದರು. ಅಲ್ಲದೆ ಈ ವಿಚಾರವಾಗಿ ಕಾಂಗ್ರೆಸ್ ಗೆ ಉತ್ತರ ನೀಡುವ ಅಗತ್ಯವು ಇಲ್ಲವೆಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.