/kannada/photo-gallery/biggboss-11-first-elimination-yamuna-srinidhi-husband-and-children-249346 ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌  ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ 249346

ಮಳೆಯಲ್ಲಿ ಮುಳುಗಿಹೋಯ್ತು ಭಾರತದ ಭರವಸೆ..? ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಕ್ಕೆ ಅಡ್ಡಿಯಾದ ಮಳೆರಾಯ

T20 IND W vs SA W: ಭಾರತೀಯ ವನಿತೆಯರಿಗೆ ವರುಣ ಶಾಕ್ ನೀಡಿದ್ದಾನೆ. ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ ಎರಡನೇ ಟಿ20 ಯಲ್ಲಿ ಗೆದ್ದು ದಕ್ಷಿಣ ಆಫ್ರಿಕಾದ ಮುನ್ನಡೆಯನ್ನು ಸರಿಗಟ್ಟಬೇಕು ಎಂದುಕೊಂಡಿತ್ತು. ಆದರೆ ಇದೀಗ ಆ ನಿರೀಕ್ಷೆ ಹುಸಿಯಾಗಿದೆ.    

Written by - Zee Kannada News Desk | Last Updated : Jul 8, 2024, 11:25 AM IST
  • ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಈಗಾಗಲೇ ದಕ್ಷಿಣ ಆಫ್ರಿಕಾ ತಂಡ ಗೆದ್ದುಕೊಂಡಿದೆ.
  • ಭಾನುವಾರ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯ ಕಾರಣದಿಂದಾಗಿ ರದ್ದಾಗಿದೆ.
  • ಭಾರತ ಮಂಗಳವಾರ ನಡೆಯಲಿರುವ ಮೂರನೇ ಟಿ20 ಯನ್ನು ಗೆಲ್ಲಲೇಬೇಕಾಗದೆ ಅನಿವಾರ್ಯತೆ ಎದುರಾಗಿದೆ.
ಮಳೆಯಲ್ಲಿ ಮುಳುಗಿಹೋಯ್ತು ಭಾರತದ ಭರವಸೆ..? ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಕ್ಕೆ ಅಡ್ಡಿಯಾದ ಮಳೆರಾಯ title=

T20 IND W vs SA W: ಭಾರತೀಯ ವನಿತೆಯರಿಗೆ ವರುಣ ಶಾಕ್ ನೀಡಿದ್ದಾನೆ. ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ ಎರಡನೇ ಟಿ20 ಯಲ್ಲಿ ಗೆದ್ದು ದಕ್ಷಿಣ ಆಫ್ರಿಕಾದ ಮುನ್ನಡೆಯನ್ನು ಸರಿಗಟ್ಟಬೇಕು ಎಂದುಕೊಂಡಿತ್ತು. ಆದರೆ ಇದೀಗ ಆ ನಿರೀಕ್ಷೆ ಹುಸಿಯಾಗಿದೆ.  

ಭಾನುವಾರ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯ ಕಾರಣದಿಂದಾಗಿ ರದ್ದಾಗಿದೆ. ಇದರೊಂದಿಗೆ ಮೂರು ಟಿ20 ಸರಣಿಯಲ್ಲಿ ಭಾರತ 0-1 ಅಂತರದಿಂದ ಹಿನ್ನಡೆಯಲ್ಲಿದೆ. ಸರಣಿ ಸಮಬಲಗೊಳಿಸಲು ಭಾರತ ಮಂಗಳವಾರ ನಡೆಯಲಿರುವ ಮೂರನೇ ಟಿ20 ಯನ್ನು ಗೆಲ್ಲಲೇಬೇಕಾಗದೆ ಅನಿವಾರ್ಯತೆ ಎದುರಾಗಿದೆ. 

ಇನ್ನೂ, ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. 

ಇದನ್ನೂ ಓದಿ: IND vs ZIM: ದಾಖಲೆ ಬರೆದ ಸ್ಟಾರ್‌ ಆಟಗಾರ..? ಸ್ಟ್ರೈಕ್‌ ರೇಟ್‌ನಲ್ಲಿ ರಿಂಕು ಸಿಂಗ್‌ಗೆ ಅಗ್ರಸ್ಥಾನ..!

ದಕ್ಷಿಣ ಆಫ್ರಿಕಾದ ಆರಂಭಿಕರಾದ ವೊಲ್ವಾರ್ಟ್ಬ್ರಿಟನ್ ಇನ್ನಿಂಗ್ಸ್ ಅನ್ನು ಆಕ್ರಮಣಕಾರಿಯಾಗಿ ಆರಂಭಿಸಿದರು. ಕೇವಲ ನಾಲ್ಕು ಓವರ್‌ಗಳಲ್ಲಿ 43 ರನ್ ಗಳಿಸಿದರು. ಪವರ್‌ಪ್ಲೇಯಲ್ಲಿ ದಕ್ಷಿಣ ಆಫ್ರಿಕಾ 66 ರನ್ ಗಳಿಸಿತು. ಭಾರತದ ಬೌಲರ್‌ಗಳಲ್ಲಿ ಪೂಜಾ ಮತ್ತು ದೀಪ್ತಿ ತಲಾ ಎರಡು ವಿಕೆಟ್ ಪಡೆದರೆ, ಶ್ರೇಯಾಂಕಾ ಮತ್ತು ರಾಧಾ ತಲಾ ಒಂದು ವಿಕೆಟ್ ಪಡೆದರು. ಆದರೆ ಟೀಂ ಇಂಡಿಯಾ ಬ್ಯಾಟಿಂಗ್‌ ಶುರು ಮಾಡುವ ಮುನ್ನವೇ ಮಳೆರಾಯ ಅಡ್ಡಿಯಾದ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಗೆಲ್ಲಲೇ ಬೇಕೆಂದು ಚಲ ತೊಟ್ಟು ಬಂದಿದ್‌ ಭಾರತ ವನಿತೆಯರಿಗೆ ಮಳೆರಾಯ ನಿರಾಸೆ ಮಾಡಿದ್ದಾನೆ. 

ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಈಗಾಗಲೇ ದಕ್ಷಿಣ ಆಫ್ರಿಕಾ ತಂಡ ಗೆದ್ದುಕೊಂಡಿದೆ. ಎರಡನೇ ಪಂದ್ಯ ಮಳೆಯ ಕಾರಣ ರದ್ದಾಗಿದೆ. ಇನ್ನೂ ಈಗಿರುವಾಗ ಭಾರತ ವನಿತೆಯರಿಗೆ ಸಮಬಲ ಕಾಯ್ದುಕೊಳ್ಳಲು ಮೂರನೇ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಪಂದ್ಯವನ್ನು ಯಾರು ಗೆಲ್ಲಲಿದ್ದಾರೆ ಅನ್ನುವುದನ್ನು ಉನ್ನ ಮುಂದೆ ಅಷ್ಟೆ ಕಾದು ನೋಡ್ಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.