ಅವರು ಪ್ಯಾಂಟ್‌ ಬಿಚ್ಚಿ ಅದನ್ನು ತೋರಿಸಿದರು, ನೋಡಿ ನನಗೆ ಭಯವಾಯ್ತು...!! ʼವೀರ ಕನ್ನಡಿಗʼ ನಟಿಯ ಶಾಕಿಂಗ್‌ ಹೇಳಿಕೆ

Anita Hassanandani : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ʼವೀರ ಕನ್ನಡʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಸಾಕಷ್ಟು ಅಭಿಮಾನಿಗಳನ್ನ ಗಳಿಸಿರುವ ಚೆಲುವೆ ಅನಿತಾ ಹಸಾನಂದನಿ ರೆಡ್ಡಿ ಇತ್ತೀಚಿಗೆ ನೀಡಿರುವ ಹೇಳಿಕೆ ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಷ್ಟಕ್ಕೂ ಈ ನಟಿ ಹೇಳಿಕೆ ನೀಡಿದ್ದು ಯಾರ ಮೇಲೆ..? ಬನ್ನಿ ನೋಡೋಣ..

1 /5

ಅನಿತಾ ಹಸಾನಂದನಿ ರೆಡ್ಡಿ ಭಾರತೀಯ ಚಿತ್ರರಂಗದಲ್ಲಿನ ಜನಪ್ರಿಯ ನಟಿಯರಲ್ಲಿ ಒಬ್ಬರು. ತಮ್ಮ ನಟನಾ ಕೌಶಲ್ಯ ಮೂಲಕ ಕನ್ನಡಿಗರ ಗಮನ ಸೆಳೆದ ಸುಂದರಿ ವೀರ ಕನ್ನಡಿಗ, ಗಂಡುಗಲಿ ಕುಮಾರರಾಮ, ಹುಡುಗ ಹುಡುಗಿ, ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ..  

2 /5

ಅನಿತಾ ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ಶಾಲಾ ದಿನಗಳಲ್ಲಿ ಸಂಭವಿಸಿದ ಭಯಾನಕ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. 'ಹೌಟರ್‌ಫ್ಲೈ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುಂದರಿ, 'ನಾವು ಶಾಲೆಗೆ ಹೋಗುವಾಗ, ನನ್ನ ತಾಯಿ ಯಾವಾಗಲೂ ರಿಕ್ಷಾದಲ್ಲಿ ಹೋಗಲು 10 ರೂಪಾಯಿ ನೀಡುತ್ತಿದ್ದರು. ಆದರೆ ಆ ಹಣವನ್ನು ಉಳಿಸಲು ಕಾಲ್ನಡಿಗೆಯಲ್ಲಿ ಬರುತ್ತಿದ್ದೆವು.  

3 /5

ಆ ಹಣದಲ್ಲಿ ಕ್ಯಾಂಟೀನ್ ನಲ್ಲಿ ಸಮೋಸಾ ಅಥವಾ ಇನ್ನೇನೋ ತಿನ್ನುತ್ತಿದ್ದೆವು. ದಾರಿಯಲ್ಲಿ ನಾವು ಬರುತ್ತಿದ್ದಾಗ ರಿಕ್ಷಾ ಚಾಲಕ ಪ್ಯಾಂಟ್ ಒಳಗೆ ಕೈ ಹಾಕಿಕೊಂಡು ನಿಲ್ಲುತ್ತಿದ್ದ. ನಂತರ ತನ್ನ ಕೆಳಗಿನ ಭಾಗವನ್ನು ವಿಚಿತ್ರ ರೀತಿಯಲ್ಲಿ ಮುಟ್ಟಿಕೊಳ್ಳುತ್ತಿದ್ದ.. ನಮ್ಮತ್ತ ನೋಡುತ್ತ ಎನೇನೋ ಮಾಡಿಕೊಳ್ಳುತ್ತಿದ್ದ..  

4 /5

ಇದೆಲ್ಲವನ್ನು ನೋಡಿ ನಾವು ದಾರಿಯನ್ನು ಬದಲಾಯಿಸಿದೇವು. ಆದರೆ ಇನ್ನೂ ಅವನು ನಮ್ಮನ್ನು ಹಿಂಬಾಲಿಸಬಹುದೆಂದು ಹೆದರುತ್ತಿದ್ದೆ. ಮುಂದೆ ಬಾಲಕಿಯರ ಶಾಲೆ ಸೇರಿದೆ.. ಅವನಿಗೆ ನಮ್ಮ ಶಾಲೆಯ ದಾರಿ ಗೊತ್ತಿತ್ತು ಇದರಿಂದ ಶಾಲೆಯ ಸುತ್ತ ಯಾವ ಬಂದರೂ ನಾವು ಹೆದರುತ್ತಿದ್ದೆವು ಎಂದು ನಟಿ ಕೇಳಿಕೊಂಡಿದ್ದಾರೆ.  

5 /5

ಸುಮಾರು 5 ವರ್ಷಗಳ ಕಾಲ ಕ್ಯಾಮೆರಾದಿಂದ ದೂರ ಉಳಿದಿದ್ದ ಅನಿತಾ ಈಗ 'ಸುಮನ್ ಇಂದೋರಿ' ಎಂಬ ಮರಾಠಿ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಶ್ವೇತಾ ಗೌತಮ್, ಜೈನ್ ಇಮಾಮ್ ಮತ್ತು ಅಶ್ನೂರ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.