17 ಸೀಸನ್‌ ಮುಗಿದರೂ ಈ ಒಂದು ಕಾರಣಕ್ಕೆ ಇನ್ನೂ ಆರ್‌ಸಿಬಿಯಲ್ಲೇ ಆಡುತ್ತಿದ್ದೇನೆ... ಸತ್ಯ ಬಹಿರಂಗಪಡಿಸಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?

Virat Kohli Decision to Quit RCB: "ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆರ್‌ಸಿಬಿ ತೊರೆಯಲು ನಿರ್ಧರಿಸಿದ್ದೆ. ಆದರೆ ಆ ಬಳಿಕ ನಿರ್ಧಾರನಿಂದ ದೂರವಾಗಿ, ಬೆಂಗಳೂರು ಫ್ರಾಂಚೈಸಿ ಜೊತೆಯೇ ಮುಂದಿನ ಎಲ್ಲಾ ಸೀಸನ್‌ ಆಡುವ ನಿರ್ಧಾರ ಮಾಡಿದೆ" ಎಂದು ಹೇಳಿದ್ದಾರೆ.  

Written by - Bhavishya Shetty | Last Updated : Sep 24, 2024, 04:47 PM IST
    • ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ
    • ಆರ್‌ಸಿಬಿ ಫ್ರಾಂಚೈಸಿ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿದ ಕೊಹ್ಲಿ
    • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿ ಗೆಲ್ಲಲು ಇದುವರೆಗೆ ಸಾಧ್ಯವಾಗಿಲ್ಲ
17 ಸೀಸನ್‌ ಮುಗಿದರೂ ಈ ಒಂದು ಕಾರಣಕ್ಕೆ ಇನ್ನೂ ಆರ್‌ಸಿಬಿಯಲ್ಲೇ ಆಡುತ್ತಿದ್ದೇನೆ... ಸತ್ಯ ಬಹಿರಂಗಪಡಿಸಿದ ವಿರಾಟ್‌ ಕೊಹ್ಲಿ ಹೇಳಿದ್ದೇನು? title=
Virat Kohli

Virat Kohli: ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ತಮ್ಮ ವಿಶಿಷ್ಟ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿ ಗೆಲ್ಲಲು ಇದುವರೆಗೆ ಸಾಧ್ಯವಾಗಿಲ್ಲ.

ಇದನ್ನೂ ಓದಿ:  ಯೂರೋಪ್ ದೇಶಗಳಿಗೆ ರಫ್ತಾಗುತ್ತಿರುವ ದೇಶದ ಮೊದಲ ಇವಿ ಮೋಟರ್ ಸೈಕಲ್

ಇನ್ನು ಸಂದರ್ಶನವೊಂದರಲ್ಲಿ ಆರ್‌ಸಿಬಿ ಅವರನ್ನು ಸಂಪರ್ಕಿಸಿದ ರೀತಿ ಮತ್ತು ಆರ್‌ಸಿಬಿ ಫ್ರಾಂಚೈಸಿ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ.

"ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆರ್‌ಸಿಬಿ ತೊರೆಯಲು ನಿರ್ಧರಿಸಿದ್ದೆ. ಆದರೆ ಆ ಬಳಿಕ ನಿರ್ಧಾರನಿಂದ ದೂರವಾಗಿ, ಬೆಂಗಳೂರು ಫ್ರಾಂಚೈಸಿ ಜೊತೆಯೇ ಮುಂದಿನ ಎಲ್ಲಾ ಸೀಸನ್‌ ಆಡುವ ನಿರ್ಧಾರ ಮಾಡಿದೆ" ಎಂದು ಹೇಳಿದ್ದಾರೆ.

"ಒಂದಲ್ಲ ಒಂದು ದಿನ ಎಲ್ಲರೂ ಸಾಯಿತ್ತಾರೆ. ಆಗ ಯಾರೂ ಕೂಡ ನಿಮ್ಮನ್ನು ಐಪಿಎಲ್ ಚಾಂಪಿಯನ್ ಅಥವಾ ವಿಶ್ವಕಪ್ ಚಾಂಪಿಯನ್ ಎಂದು ಹೇಳುವುದಿಲ್ಲ. ನೀವು ಒಳ್ಳೆಯವರಾಗಿದ್ರೆ ನಿಮ್ಮನ್ನು ಜನ ಇಷ್ಟಪಡುತ್ತಾರೆ. ಕೆಟ್ಟವರಾಗಿದ್ದರೆ, ನಿಮ್ಮಿಂದ ದೂರವಿರುತ್ತಾರೆ. ಅಂತಿಮವಾಗಿ ಇದುವೇ ಜೀವನ" ಎಂದು ಕೊಹ್ಲಿ ಆರ್‌ಸಿಬಿಯಲ್ಲಿ ಉಳಿಯುವ ನಿರ್ಧಾರದ ಹಿಂದಿನ ಮನಸ್ಥಿತಿಯನ್ನು ವಿವರಿಸಿದ್ದಾರೆ .

ವಿರಾಟ್‌ಗೆ, ಇತರ ಯಾವುದೇ ಫ್ರಾಂಚೈಸಿಗಳು ನಂಬದಿರುವಾಗ ಅವನ ಮೇಲೆ ನಂಬಿಕೆ ಇಟ್ಟಿರುವ RCB ಗೆ ನಿಷ್ಠೆ, ಅವರು IPL ಟ್ರೋಫಿಯನ್ನು ಗೆಲ್ಲಲು ಸಮರ್ಥವಾಗಿ ಹೋಗಬಹುದಾದ ಮತ್ತೊಂದು ತಂಡವನ್ನು ಸೇರುವುದಕ್ಕಿಂತ ಹೆಚ್ಚು ಮುಖ್ಯವಾಗಿದೆ.

"ನಾನು ನನ್ನ ಜೀವನವನ್ನು ಹೇಗೆ ಅನುಸರಿಸುತ್ತೇನೆ ಎಂಬುದಕ್ಕೆ RCB ಯೊಂದಿಗಿನ ನಿಷ್ಠೆಯೇ ಉದಾಹರಣೆ. ಐದು ನಿಮಿಷಗಳ ಕಾಲ ಚೆನ್ನಾಗಿದ್ದೀರಿ ಎಂದುಕೊಂಡರೆ ಅದೇ ಆರನೇ ನಿಮಿಷಕ್ಕೆ ನಿಮಗೆ ದುಃಖವಾಗಬಹುದು" ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ತನಿಖೆ ಆದೇಶ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಡಿಕೆಶಿ ಅಲ್ಲ... ಇವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ..!?

"ಮೊದಲ ಮೂರು ವರ್ಷಗಳಲ್ಲಿ ಈ ಫ್ರಾಂಚೈಸ್ ನನಗೆ ಅವಕಾಶಗಳ ವಿಷಯದಲ್ಲಿ ಏನು ನೀಡಿದೆ ಎಂಬುದು ನನಗೆ ತಿಳಿದಿದೆ. ಬೇರೆಡೆಯಿಂದ ಅವಕಾಶಗಳು ಬಂದರೂ ಸಹ, ಅವರು ನನ್ನನ್ನು ಬೆಂಬಲಿಸಲಿಲ್ಲ. ಇದೇ ಕಾರಣಕ್ಕೆ ನಾನು ಆರ್‌ ಸಿ ಬಿ ತೊರೆಯದೆ ಇನ್ನೂ ಇಲ್ಲೇ ಇರುವುದು" ಎಂದು ನಿಷ್ಟಾವಂತ ಮಾತುಗಳನ್ನು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News