ಮಂಗಳ ಗ್ರಹದಲ್ಲಿ ಹಸಿರು ಬಣ್ಣಕ್ಕೆ ತಿರುಗುತ್ತೆ ಮಾನವನ ದೇಹ.. ಕಣ್ಣುಗಳ ಮೇಲೂ ಆಗುತ್ತೆ ಈ ಪರಿಣಾಮ!

Humans Living On Mars: ಎಲೋನ್ ಮಸ್ಕ್ ಅವರಂತಹ ಜನರು ಮುಂಬರುವ ಕೆಲವು ವರ್ಷಗಳಲ್ಲಿ ಮಂಗಳ ಗ್ರಹದಲ್ಲಿ ಮಾನವ ನೆಲೆಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ. ಆದರೆ ಮಂಗಳ ಗ್ರಹದಲ್ಲಿ ಮನುಷ್ಯ ಬದುಕಬಹುದೇ?

Written by - Chetana Devarmani | Last Updated : Sep 27, 2024, 11:48 AM IST
  • ಮಂಗಳ ಗ್ರಹದಲ್ಲಿ ಮಾನವರು ಬದುಕಬಹುದೇ!
  • ಮಾನವ ದೇಹದ ಮೇಲೆ ಆಗುವ ಪರಿಣಾಮಗಳೇನು?
  • ಹಸಿರು ಬಣ್ಣಕ್ಕೆ ತಿರುಗುತ್ತೆ ಮಾನವನ ದೇಹ!
ಮಂಗಳ ಗ್ರಹದಲ್ಲಿ ಹಸಿರು ಬಣ್ಣಕ್ಕೆ ತಿರುಗುತ್ತೆ ಮಾನವನ ದೇಹ.. ಕಣ್ಣುಗಳ ಮೇಲೂ ಆಗುತ್ತೆ ಈ ಪರಿಣಾಮ! title=

ಬೆಂಗಳೂರು: ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಕಾರಣದಿಂದಾಗಿ, ಭೂಮಿಯು ಇನ್ನು ಕೆಲ ವರ್ಷಗಳ ಬಳಿಕ ಮನುಷ್ಯರ ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಸ್ಟೀಫನ್ ಹಾಕಿಂಗ್ ಸೇರಿದಂತೆ ಅನೇಕ ಪ್ರಸಿದ್ಧ ವಿಜ್ಞಾನಿಗಳು ಮಾನವರು ಭೂಮಿಯನ್ನು ತೊರೆದು ಬೇರೆ ಯಾವುದಾದರೂ ಗ್ರಹದಲ್ಲಿ ನೆಲೆಸಬೇಕಾಗಬಹುದು ಎಂದು ಹೇಳಿದ್ದಾರೆ. ಮಂಗಳ ಗ್ರಹದಲ್ಲಿ ನೆಲೆಸುವ ಕನಸು ಮನುಷ್ಯ ಬಹಳ ಹಿಂದಿನಿಂದಲೂ ಇದೆ. ಈ ಕನಸನ್ನು ನನಸು ಮಾಡಲು ಸ್ಪೇಸ್‌ಎಕ್ಸ್ ಮಾಲೀಕ ಎಲೋನ್ ಮಸ್ಕ್ ಶ್ರಮಿಸುತ್ತಿದ್ದಾರೆ. ಆದರೆ, ಮಂಗಳದ ಕಠಿಣ ಪರಿಸ್ಥಿತಿ ಮಾನವ ದೇಹದ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರಬಹುದು.

ಇದನ್ನೂ ಓದಿ: ಚಳಿಗಾಲದ ಒಣ ಕೆಮ್ಮಿಗೆ ಇಲ್ಲಿದೆ 5 ಬೆಸ್ಟ್‌ ಮನೆಮದ್ದು: ರಾತ್ರಿ ಕುಡಿದರೆ ಬೆಳಗಾಗುವುದರಲ್ಲೇ ಗೋಚರಿಸುತ್ತೆ ಪರಿಣಾಮ!

ತಜ್ಞರ ಪ್ರಕಾರ, ಮಂಗಳದ ಪರಿಸ್ಥಿತಿಗಳು ಮಾನವ ದೇಹದಲ್ಲಿ ಅನೇಕ ಅಪಾಯಕಾರಿ ಬದಲಾವಣೆಗಳನ್ನು ತರಬಹುದು. ದೃಷ್ಟಿ ದುರ್ಬಲಗೊಳ್ಳಬಹುದು, ದೇಹ ಹಸಿರು ಬಣ್ಣಕ್ಕೆ ತಿರುಗಬಹುದು. ಅಮೇರಿಕನ್ ಜೀವಶಾಸ್ತ್ರಜ್ಞರೊಬ್ಬರು ಮಂಗಳ ಗ್ರಹದಲ್ಲಿ ಮನುಷ್ಯರು ಬದುಕುವುದು ತುಂಬಾ ಕಷ್ಟ ಎಂದು ಹೇಳುತ್ತಾರೆ. 

ಮಂಗಳ ಗ್ರಹದಲ್ಲಿ ಮಾನವ ದೇಹದ ಮೇಲಾಗುವ ಪರಿಣಾಮ: 

ಟೆಕ್ಸಾಸ್‌ನ ರೈಸ್ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞ ಡಾ. ಸ್ಕಾಟ್ ಸೊಲೊಮನ್, ಮಂಗಳ ಗ್ರಹದ ಮೇಲೆ ಮಾನವರಲ್ಲಿ ಭಾರೀ ರೂಪಾಂತರಗಳಾಗಬಹುದು ಎಂದು ಎಚ್ಚರಿಸಿದ್ದಾರೆ. ಮಂಗಳ ಗ್ರಹದಲ್ಲಿ ವಾಸಿಸುವ ಮಾನವರು ಮಕ್ಕಳಿಗೆ ಜನ್ಮ ನೀಡಿದರೆ ಅವರಲ್ಲಿ ಅನೇಕ ರೂಪಾಂತರಗಳು ಮತ್ತು ವಿಕಾಸಾತ್ಮಕ ಬದಲಾವಣೆಗಳನ್ನು ಕಾಣಬಹುದು ಎಂದು ಅವರು ಹೇಳಿದರು. ಕಡಿಮೆ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಿಂದಾಗಿ ಈ ರೂಪಾಂತರಗಳು ಸಂಭವಿಸುತ್ತವೆ. ಚರ್ಮ ಹಸಿರು ಬಣ್ಣಕ್ಕೆ ತಿರುಗಬಹುದು, ಸ್ನಾಯುಗಳು ಮತ್ತು ಮೂಳೆಗಳು ದುರ್ಬಲವಾಗಬಹುದು, ದೃಷ್ಟಿ ಕಡಿಮೆಯಾಗಬಹುದು.

ಭೂಮಿಗೆ ಹೋಲಿಸಿದರೆ ಮಂಗಳವು ಚಿಕ್ಕ ಗ್ರಹವಾಗಿದೆ. ಇದರ ಗುರುತ್ವಾಕರ್ಷಣೆಯು ನಮ್ಮ ಗ್ರಹಕ್ಕಿಂತ 30 ಪ್ರತಿಶತ ಕಡಿಮೆಯಾಗಿದೆ. ಕೆಂಪು ಗ್ರಹವು ಓಝೋನ್ ಪದರ ಮತ್ತು ಭೂಮಿಯಂತೆ ಕಾಂತೀಯ ಕ್ಷೇತ್ರವನ್ನು ಹೊಂದಿಲ್ಲ. ಇವೆರಡೂ ಭೂಮಿಯನ್ನು ಬಾಹ್ಯಾಕಾಶ ವಿಕಿರಣ, ಕಾಸ್ಮಿಕ್ ಕಿರಣಗಳು, ನೇರಳಾತೀತ ಕಿರಣಗಳು ಮತ್ತು ಸೂರ್ಯನಿಂದ ಹೊರಹೊಮ್ಮುವ ಚಾರ್ಜ್ಡ್ ಕಣಗಳಿಂದ ರಕ್ಷಿಸುತ್ತವೆ. ಮಂಗಳ ಗ್ರಹದಲ್ಲಿ ಅಂತಹ ಯಾವುದೇ ಸುರಕ್ಷತಾ ಕಾರ್ಯವಿಧಾನವಿಲ್ಲ.

ಇದನ್ನೂ ಓದಿ: ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಕೆಬಿ ಕೋಳಿವಾಡ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News