"ನನ್ನ ಕೈ ಬಿಡಲಿಲ್ಲ... ಅವರಿಲ್ಲದಿದ್ದರೆ ನಾನು ಇಲ್ಲ"- ಮನದ ಪ್ರೀತಿ ಬಗ್ಗೆ ಕೊನೆಗೂ ಬಿಚ್ಚಿಟ್ಟ ನಟಿ ಸಮಂತಾ! 2ನೇ ಸಲ ಸೌತ್‌ ಬ್ಯೂಟಿ ಮನಗೆದ್ದವರು ಇವರೇ...

Samantha responded to Konda Surekha comments: ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರು ಇತ್ತೀಚೆಗೆ ಟಾಲಿವುಡ್ ನಾಯಕಿ ಸಮಂತಾ ಬಗ್ಗೆ ಮಾಡಿದ ಕಾಮೆಂಟ್ ಸಾಕಷ್ಟು ವಿವಾದ ಸೃಷ್ಟಿಸಿದ್ದು ಗೊತ್ತೇ ಇದೆ. ಚೈತನ್ಯ ಮತ್ತು ಸಮಂತಾ ಬ್ರೇಕಪ್‌ಗೆ ಮಾಜಿ ಸಚಿವ ಕೆಟಿಆರ್ ಕಾರಣ ಎಂದು ಸುರೇಖಾ ಕಾಮೆಂಟ್ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

 ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರು ಇತ್ತೀಚೆಗೆ ಟಾಲಿವುಡ್ ನಾಯಕಿ ಸಮಂತಾ ಬಗ್ಗೆ ಮಾಡಿದ ಕಾಮೆಂಟ್ ಸಾಕಷ್ಟು ವಿವಾದ ಸೃಷ್ಟಿಸಿದ್ದು ಗೊತ್ತೇ ಇದೆ. ಚೈತನ್ಯ ಮತ್ತು ಸಮಂತಾ ಬ್ರೇಕಪ್‌ಗೆ ಮಾಜಿ ಸಚಿವ ಕೆಟಿಆರ್ ಕಾರಣ ಎಂದು ಸುರೇಖಾ ಕಾಮೆಂಟ್ ಮಾಡಿದ್ದರು. ಈ ಹೇಳಿಕೆ ಟಾಲಿವುಡ್ ಇಂಡಸ್ಟ್ರಿಯನ್ನೇ ನಡುಗಿಸಿದ್ದು, ಅನೇಕ ನಟ-ನಟಿಯರು ಸುರೇಖಾ ವಿರುದ್ಧ ಆಕ್ರೋಶ ಹೊರಹಾಕಿದ್ದರು.

2 /5

ಚಿತ್ರರಂಗದ ಸೆಲೆಬ್ರಿಟಿಗಳು, ತಮ್ಮ ರಾಜಕೀಯಕ್ಕಾಗಿ ಸಿನಿಮಾ ತಾರೆಯರ ವೈಯಕ್ತಿಕ ವಿಚಾರಗಳ ಬಗ್ಗೆ ಆಧಾರರಹಿತ ಆರೋಪ ಮಾಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಮತ್ತೊಂದೆಡೆ, ಕೊಂಡ ಸುರೇಖಾ ಅವರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ನಾಗಾರ್ಜುನ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆಕೆಯ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.  

3 /5

ಈ ಎಲ್ಲದರ ನಡುವೆ ಕೊಂಡ ಸುರೇಖಾ ಅವರ ಕಾಮೆಂಟ್‌ಗಳಿಗೆ ನಾಯಕಿ ಸಮಂತಾ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ. ಬಹಳ ದಿನಗಳ ನಂತರ ಸಿಟಾಡೆಲ್ ವೆಬ್ ಸೀರಿಸ್ ಮೂಲಕ ಸಮಂತಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.  

4 /5

ಬಾಲಿವುಡ್ ಸ್ಟಾರ್ ಹೀರೋ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಸರಣಿಯು ಶೀಘ್ರದಲ್ಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಈ ಕ್ರಮದಲ್ಲಿ ಇತ್ತೀಚೆಗಷ್ಟೇ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿದ್ದ ಸ್ಯಾಮ್, ಕೊಂಡ ಸುರೇಖಾ ವಿವಾದದ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಸೌತ್ ಇಂಡಸ್ಟ್ರಿಯ ಹಲವು ಸಿನಿಮಾ ನಟರು ತಮಗೆ ಬೆಂಬಲ ನೀಡಿದ್ದಾರೆ... ಅವರ ಬೆಂಬಲದಿಂದಲೇ ಈಗ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.  

5 /5

“ನನ್ನ ಬಗ್ಗೆ ದ್ವೇಷಪೂರಿತ ಕಾಮೆಂಟ್‌ಗಳು ಬಂದಾಗ ಇಡೀ ದಕ್ಷಿಣ ಇಂಡಸ್ಟ್ರಿ ನನ್ನ ಬೆಂಬಲಕ್ಕೆ ನಿಂತಿತು. ಅವರೆಲ್ಲ ನನಗೆ ಧೈರ್ಯ ತುಂಬಿದರು. ಅವರ ಪ್ರೀತಿ ಮತ್ತು ಬೆಂಬಲದಿಂದ ನಾನು ಇಂದು ಇಲ್ಲಿ ಕುಳಿತಿದ್ದೇನೆ. ಇಂಡಸ್ಟ್ರಿ ಜೊತೆಗೆ ನನ್ನ ಜನ ನನ್ನ ಕೈ ಬಿಡಲಿಲ್ಲ. ನನ್ನ ಮೇಲಿನ ಅವರ ಪ್ರೀತಿ ಮತ್ತು ನಂಬಿಕೆ ನನ್ನನ್ನು ಈ ಸಂಘರ್ಷದಿಂದ ಬೇಗನೆ ಹೊರಬರುವಂತೆ ಮಾಡಿತು. ಇಂಡಸ್ಟ್ರಿ ನನಗೆ ಸಹಾಯ ಮಾಡದಿದ್ದರೆ ಇದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತಿತ್ತು. ಇಂತಹ ಸಮಯದಲ್ಲಿ ಅವರಿಲ್ಲದಿದ್ದರೆ ನಾನು ಇರುತ್ತಿರಲಿಲ್ಲ, ಇನ್ನಷ್ಟು ಖಿನ್ನತೆಗೆ ಒಳಗಾಗುತ್ತಿದ್ದೆ. ಎಲ್ಲರ ಬೆಂಬಲದಿಂದಲೇ ನಾನು ಮತ್ತೆ ಇಲ್ಲಿ ನಿಮ್ಮ ಮುಂದೆ ಕೂತಿದ್ದೇನೆ'' ಎಂದು ಸಮಂತಾ ಹೇಳಿದ್ದಾರೆ.