Vastu Tips: ಯಾವುದೇ ಕಾರಣಕ್ಕೂ ಬೆಳಗ್ಗೆ ಇವುಗಳನ್ನು ನೋಡಬೇಡಿ; ನೋಡಿದ್ರೆ‌ ನಿಮಗೆ ಬಡತನ ಫಿಕ್ಸ್!

Vastu Tips for Happy House: ಬೆಳಗ್ಗೆ ಎದ್ದು ಕ್ರೂರ ಪ್ರಾಣಿಗಳ ಚಿತ್ರಗಳನ್ನು ನೋಡುವುದನ್ನು ಅಶುಭ ಫಲವೆಂದು ತೀರ್ಮಾನಿಸಲಾಗಿದೆ. ಇದು ದುರಾದೃಷ್ಟದ ಸಂಕೇತವಾಗಿದೆ. ಬೆಳಗ್ಗೆದ್ದ ಕೂಡಲೇ ಕ್ರೂರ ಪ್ರಾಣಿಗಳ ಫೋಟೋ ನೋಡುವುದು ನಿಮ್ಮಲ್ಲಿ ಸಹ ಕ್ರೂರತೆಯನ್ನುಂಟು ಮಾಡುತ್ತದೆ. 

Vastu Tips for Happy House: ಮನೆಯಲ್ಲಿ ಸಂಪತ್ತು, ಸಮೃದ್ಧಿ, ಐಶ್ವರ್ಯ ಹೆಚ್ಚಾಗಲು ಕೆಲವೊಂದು ವಾಸ್ತು ಸಲಹೆ ಅನುಸರಿಸುವುದು ಸೂಕ್ತ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸುವಂತಹ ಸಂಗತಿಗಳು ಹಣಕಾಸು ಯಶಸ್ಸಿಗೂ ನೆರವಾಗುತ್ತದೆ. ಮನೆಯಲ್ಲಿ ಹಣಕಾಸು ಸಂಕಷ್ಟ ಹೆಚ್ಚಾಗಿದ್ದರೆ, ನಿಮಗೆ ಸಮಸ್ಯೆಗಳ ಮೇಳೆ ಸಮಸ್ಯೆ ಬರುತ್ತಿದ್ದರೆ, ಎಷ್ಟೇ ದುಡಿದರೂ ಸಹ ನಿಮ್ಮ ಕೈಯಲ್ಲಿ ಹಣ ನಿಲ್ಲದಿರುವುದಕ್ಕೆ ವಾಸ್ತು ದೋಷ ಕಾರಣವಾಗಿರಬಹುದು. ಬೆಳಗ್ಗೆ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ನೋಡಬಾರದು. ಒಂದು ವೇಳೆ ಆ ವಸ್ತುಗಳನ್ನು ನೋಡಿದ್ರೆ ನಿಮಗೆ ಅದೃಷ್ಟ ಕೈಕೊಡಬಹುದು ಮತ್ತು ಬಡತನ ಬರಬಹುದು. ಬೆಳಗ್ಗೆ ಯಾವ ವಸ್ತುಗಳನ್ನು ನೋಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ ಎಂದು ತಿಳಿದುಕೊಳ್ಳಿರಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ನಿಮ್ಮ ಮನೆಯಲ್ಲಿ ಗಡಿಯಾರ ನಿಂತಿದೆ ಎಂದರೆ ಅದನ್ನು ಮೊದಲು ಹೊರಗೆಸೆಯಬೇಕು. ಮನೆಯಲ್ಲಿ ನಿಂತ ಗಡಿಯಾರವಿದ್ದರೆ ಅದು ನಿಮ್ಮ ಕೆಲಸಗಳನ್ನು ತಟಸ್ಥಗೊಳಿಸುತ್ತದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ.

2 /6

ತೊಳೆಯದೇ ಇರುವ ಪಾತ್ರೆಗಳನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೆಳಗ್ಗೆದ್ದು ಇಂತಹ ಪಾತ್ರೆಗಳನ್ನು ನೋಡುವುದು ಕೆಟ್ಟದ್ದನ್ನು ಸೂಚಿಸುತ್ತದೆ. ಬೆಳಗ್ಗೆ ಎದ್ದು ಸ್ವಚ್ಛವಾದ ತೊಳೆದಿಟ್ಟ ಪಾತ್ರೆಗಳನ್ನು ನೋಡಬೇಕು. ಹೀಗಾಗಿ ರಾತ್ರಿಯೇ ಪಾತ್ರೆಗಳನ್ನು ತೊಳೆದಿಡಬೇಕೆಂದು ವಾಸ್ತುಶಾಸ್ತ್ರ ಸೂಚಿಸುತ್ತದೆ.

3 /6

ರಾತ್ರಿ ಊಟದ ನಂತರ ಅಡುಗೆ ಮನೆಯನ್ನು ಸ್ವಚ್ಛಮಾಡಿ ಮಲಗಬೇಕು ಅಂತಾ ವಾಸ್ತು ಸಲಹೆ ನೀಡುತ್ತದೆ. ರಾತ್ರಿ ಮುಸುರೆಯನ್ನು ತೊಳೆಯದೆ ಹಾಗೆಯೇ ಮಲಗಿದರೆ ಆ ಮನೆಯಲ್ಲಿ ಬಡತನ ತಾಂಡವವಾಡುತ್ತದೆ ಎಂದು ವಾಸ್ತುಶಾಸ್ತ್ರವು ಎಚ್ಚರಿಸುತ್ತದೆ.

4 /6

ಬೆಳಗ್ಗೆ ಎದ್ದು ಕ್ರೂರ ಪ್ರಾಣಿಗಳ ಚಿತ್ರಗಳನ್ನು ನೋಡುವುದನ್ನು ಅಶುಭ ಫಲವೆಂದು ತೀರ್ಮಾನಿಸಲಾಗಿದೆ. ಇದು ದುರಾದೃಷ್ಟದ ಸಂಕೇತವಾಗಿದೆ. ಬೆಳಗ್ಗೆದ್ದ ಕೂಡಲೇ ಕ್ರೂರ ಪ್ರಾಣಿಗಳ ಫೋಟೋ ನೋಡುವುದು ನಿಮ್ಮಲ್ಲಿ ಸಹ ಕ್ರೂರತೆಯನ್ನುಂಟು ಮಾಡುತ್ತದೆ. ಇದು ಸಿಟ್ಟು ಮತ್ತು ಒತ್ತಡವನ್ನುಂಟು ಮಾಡುತ್ತದೆ ಎಂದು ವಾಸ್ತುಶಾಸ್ತ್ರವು ತಿಳಿಸುತ್ತದೆ.

5 /6

ಬೆಳಗ್ಗೆ ಎದ್ದು ಗೋವನ್ನು ನೋಡುವುದು ಇಲ್ಲವೇ ಗೋವಿನ ಫೋಟೋ ನೋಡುವುದು ಶುಭ ಫಲವನ್ನು ತರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಈ ವಾಸ್ತು ಸಲಹೆಗಳನ್ನು ನೀವು ಪಾಲಿಸಬೇಕು.

6 /6

ಬೆಳಗ್ಗೆ ಎದ್ದೊಡನೆ ನಿಮ್ಮ ಹಾಗೂ ಇತರರ ನೆರಳನ್ನು ನೋಡುವುದು ಸಹ ಕೆಟ್ಟದ್ದು ಎಂದು ಹೇಳಲಾಗಿದೆ. ನೆರಳು ನೋಡುವುದು ರಾಹುವಿನ ಸಂಕೇತ ಎಂದೆನಿಸಿದೆ. ನೆರಳನ್ನು ನೋಡಿದರೆ ಆ ವ್ಯಕ್ತಿ ಆ ದಿನಪೂರ್ತಿ ಹಲವಾರು ಸಮಸ್ಯೆಗಳು ಮತ್ತು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತುಶಾಸ್ತ್ರವು ಎಚ್ಚರಿಸಿದೆ.